ಶ್ರೀ ಇಗುಂಜಿ ಮಹಾ ಗಣಪತಿ ಯಕ್ಷಗಾನ ಮಂಡಳಿಯು ಪ್ರತಿ ತಿಂಗಳು ಯಕ್ಷಾಂಗಣದಲ್ಲಿ ಒಂದು ಯಕ್ಷಗಾನ ಪ್ರದರ್ಶನ ನೀಡುವ ಯೋಜನೆ ಕಳೆದ ಏಳು ವರ್ಷದಿಂದ ನಡೆದುಕೊಂಡು ಬಂದಿದ್ದು ಕಲಾಪೋಷಕರ ನೆರವಿನಿಂದ ನಡೆಯುವ ಈ ಪ್ರದರ್ಶನ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಿದೆ. ನಿರಂತರವಾಗಿ ಯಕ್ಷಾಂಗಣದಲ್ಲಿ ಪ್ರತೀ ಮಾಸವೂ ವಿವಿಧ ಪೌರಾಣಿಕ ಪ್ರಸಂಗವನ್ನು ಪ್ರದಶಿ೯ಸಲಾಗುವುದು.
ದಿನಾಂಕ 31.07.2024 ಬುಧವಾರ ಕೆರಮನೆ ಶಿವರಾಮ ಹೆಗಡೆ ರಂಗಮಂದಿರ ಗುಣವಂತೆಯಲ್ಲಿ ಮಾಸದ ಆಟ ನಡೆಯಿತು. ಶ್ರೀ ಐ.ಆರ್ ಭಟ್ಟ ಮುರುಡೇಶ್ವರ ಯಕ್ಷಗಾನ ಪ್ರೇಮಿಗಳು ಪ್ರಾಯೋಜಕತ್ವ ವಹಿಸಿದ್ದರು.

ಮಾರುತಿ ಪ್ರತಾಪ ಯಕ್ಷಗಾನ ಏರ್ಪಡಿಸಿದ್ದು ಕಲಾವಿದರಾಗಿ ಶ್ರೀ ಕೆರಮನೆ ಶಿವಾನಂದ ಹೆಗಡೆ ಕೃಷ್ಣನಾಗಿ, ಶ್ರೀ ತಿಮ್ಮಪ್ಪ ಹೆಗಡೆ ಶಿರಳಗಿ ನಾರದನಾಗಿ, ಶ್ರೀ ಈಶ್ವರ ಭಟ್ಟ ಅಂಸಳ್ಳಿ ಹನುಮಂತನಾಗಿ, ಶ್ರೀ ಸದಾಶಿವ ಭಟ್ಟ ಸತ್ಯಭಾಮೆಯಾಗಿ, ಶ್ರೀ ವಿಘ್ನೇಶ್ವರ ಹಾವಗೋಡಿ ಬಲರಾಮನಾಗಿ,
ಕೆರೆಮನೆ ಶ್ರೀಧರ ಹೆಗಡೆ ಕೃಷ್ಣನಾಗಿ, ಶ್ರೀ ಚಂದ್ರಶೇಖರ್ ಎನ್. ಮಹಾವೀರ ಜೈನ್ ಬಾಲಗೋಪಾಲನಾಗಿ, ಶ್ರೀ ವಿನಾಯಕ ನಾಯ್ಕ್ ಗರುಡನಾಗಿ, ಶ್ರೀ ಗಣಪತಿ ಕುಣಬಿ ರುಕ್ಮಿಣಿ ಹಾಗೂ ಸಖಿಯಾಗಿ, ಶ್ರೀ ಕೃಷ್ಣ ಮರಾಠಿ ಬಾಲಗೋಪಾಲ ಹಾಗೂ ಶ್ರೀ ಸೀತಾರಾಮ ಮುಡಾರೆ ವನಪಾಲಕನಾಗಿ ಪಾತ್ರ ನಿರ್ವಹಿಸಿದ್ದರು.


ಹಿಮೇಳದಲ್ಲಿ ಭಾಗವತರಾಗಿ ಶ್ರೀ ಅನಂತ ಹೆಗಡೆ ದಂತಳಿಗೆ ಮದ್ದಲೆ ಶ್ರೀ ನರಸಿಂಹ ಹೆಗಡೆ, ಹಾಗೂ ಚಂಡೆ ಶ್ರೀ ರಾಮನ್ ಹೆಗಡೆ ಇವರು ನಿರ್ವಹಿಸಿದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಮಾರುತಿ ಪ್ರತಾಪ ಯಕ್ಷಗಾನ ಕಾರ್ಯಕ್ರಮ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಮಂಡಳಿಯ ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆಯವರಿಂದ ಮಾಸದಾಟದ ಪ್ರಾಯೋಜಕರಿಗೆ ವೇದಿಕೆಯಲ್ಲಿ ಗೌರವ ಮತ್ತು ಕೃತಜ್ಞತೆಯ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

