ಪ್ರಸಿದ್ಧ ಕಲಾವಿದರ ತಾಳಮದ್ದಲೆ ಮತ್ತು ಸನ್ಮಾನ ಕಾರ್ಯಕ್ರಮ
ಶ್ರೀಮತಿ ಜಯಲಕ್ಷ್ಮಿ ಮತ್ತು ಶ್ರೀ ಚಂದ್ರಶೇಖರ ಉರಾಳರ ಪ್ರಾಯೋಜಕತ್ವದಲ್ಲಿ 28-01-2024ರಂದು ಮಧ್ಯಾಹ್ನ 3ಕ್ಕೆ ಕೋಟ ಹೈಸ್ಕೂಲ್ ಹಿಂಭಾಗ ಅಂಬಲಕೆರೆ ರಸ್ತೆ “ಶ್ರೀ ಪದ್ಮಾಲಯ”ದ ಪ್ರಾಂಗಣದಲ್ಲಿ “ಕರ್ಣಾರ್ಜುನ” ತಾಳಮದ್ದಲೆ ಮತ್ತು ಪ್ರಸಿದ್ಧ ಚಂಡೆವಾದಕರಾದ ಮಂಧಾರ್ತಿ ರಾಮಕೃಷ್ಣರವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರಿನ ಯಕ್ಷದೇಗುಲ ಸಂಯೋಜನೆಯಲ್ಲಿ ಭಾಗವತರಾಗಿ ರಾಘವೇಂದ್ರ ಮಯ್ಯ, ಲಂಬೋದರ ಹೆಗಡೆ, ಗಣೇಶ ನಾವಡ, ಚಂಡೆ-ಮದ್ದಲೆಯಲ್ಲಿ ರಾಘವೇಂದ್ರ ಹೆಗಡೆ, ಮಂದಾರ್ತಿ ರಾಮಕೃಷ್ಣ, ಶಿವಾನಂದ ಕೋಟ, ಸುದೀಪ ಉರಾಳ
ಮುಮ್ಮೇಳದ ಅರ್ಥಧಾರಿಯಾಗಿ ವಿದ್ವಾನ್ ಉಮಾಕಾಂತ್ ಭಟ್, ಉಜಿರೆ ಅಶೋಕ ಭಟ್, ಸುಜಯೀಂದ್ರ ಹಂದೆ ಮತ್ತು ವೈಕುಂಠ ಹೇರ್ಳೆಯವರು ಭಾಗವಹಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಟ ಸುದರ್ಶನ ಉರಾಳ
ಮೊ: 9448547237
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

