ವಿದ್ಯಾಭಾರತಿ ಕರ್ನಾಟಕ ವತಿಯಿಂದ ದಿನಾಂಕ 28-07-2023ರಂದು ನಡೆದ ಜಿಲ್ಲಾ ಮಟ್ಟದ ವಿದ್ಯಾಭಾರತಿ ಯೋಗಾಸನ ಸ್ಪರ್ಧೆ ಸರಸ್ವತಿ ವಿದ್ಯಾಲಯ ಕಡಬ, ಇಲ್ಲಿ ನಡೆಯಿತು.
ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ರಿದಮಿಕ್ ಯೋಗ(ನೃತ್ಯ)ದಲ್ಲಿ ಬಾಲವರ್ಗದ ಬಾಲಕರ ವಿಭಾಗದಲ್ಲಿ ಸ್ಮರಣ್, 7ನೇ ತರಗತಿ(ಶ್ರೀ ರಾಮಕೃಷ್ಣ ಮತ್ತು ಶ್ರೀಮತಿ ರವಿಕಲಾ ದಂಪತಿ ಪುತ್ರ) ದ್ವಿತೀಯ ಸ್ಥಾನ ಹಾಗೂ ಬಾಲವರ್ಗ ಬಾಲಕಿಯರ ವಿಭಾಗದಲ್ಲಿ ಮೋಕ್ಷ, 8ನೇ ತರಗತಿ ( ಶ್ರೀ ಕಿಶೋರ್ ಕುಮಾರ್.ಬಿ ಮತ್ತು ಶ್ರೀಮತಿ ರತ್ನ ದಂಪತಿ ಪುತ್ರಿ) ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಬಾಲವರ್ಗದ ಬಾಲಕಿಯರ ತಂಡದಲ್ಲಿ : ಅಪೇಕ್ಷಾ, 8ನೇ ತರಗತಿ(ಶ್ರೀ ವೆಂಕಟರಮಣ ಕಾರಂತ್ ಮತ್ತಿ ಶ್ರೀಮತಿ ಸಂಧ್ಯಾ ದಂಪತಿ ಪುತ್ರಿ), ಚೈತ್ರಾ, 7ನೇ ತರಗತಿ(ಶ್ರೀ ಕೃಷ್ಣಕುಮಾರ್ ಮತ್ತು ಶ್ರೀಮತಿ ಪ್ರೇಮ ದಂಪತಿ ಪುತ್ರಿ), ಸಾನ್ವಿ, 6ನೇ ತರಗತಿ(ಶ್ರೀ ಜಯರಾಮ ಮತ್ತು ಶ್ರೀಮತಿ ಉಷಾಲತ ದಂಪತಿ ಪುತ್ರ), ಪಾರ್ವತಿ, (ಶ್ರೀ ಈಶ್ವರ ಪ್ರಕಾಶ್ ಮತ್ತು ಶ್ರೀಮತಿ ಚೈತನ್ಯ ಪ್ರಕಾಶ್ ದಂಪತಿ ಪುತ್ರಿ), ಅನ್ವಿ, 7ನೇ ತರಗತಿ(ಶ್ರೀ ವಿಜಯ ಕುಮಾರ್ ಮತ್ತು ಶ್ರೀಮತಿ ನವ್ಯ ದಂಪತಿ ಪುತ್ರಿ)
ಕಿಶೋರ ವರ್ಗದ ಬಾಲಕರ ತಂಡದಲ್ಲಿ ಜೀವನ್, 8ನೇ ತರಗತಿ(ಶ್ರೀ ಧರ್ಮಪಾಲ ಮತ್ತು ಶ್ರೀಮತಿ ವಾರಿಜ ದಂಪತಿ ಪುತ್ರ್ರ),
ತನುಷ್, 9ನೇ ತರಗತಿ(ಶ್ರೀ ಹರೀಶ್ ಮತ್ತು ಶ್ರೀಮತಿ ಗೀತಾ ದಂಪತಿ ಪುತ್ರ), ಸನ್ಮಿತ್, 9ನೇ ತರಗತಿ(ಶ್ರೀ ಸುರೇಶ್ ಮತ್ತು ಶ್ರೀಮತಿ ಉಷಾ ಸುರೇಶ್ ದಂಪತಿ ಪುತ್ರ), ಮತ್ತು ಜೀತನ್, 9ನೇ ತರಗತಿ(ಶ್ರೀ ಲಿಂಗಪ್ಪ ಮತ್ತು ಶ್ರೀಮತಿ ನಯನ ದಂಪತಿ ಪುತ್ರ).
ಬಾಲವರ್ಗದಲ್ಲಿ ಗುಂಪು ಸ್ಪರ್ಧೆಯಲ್ಲಿ ಸೃಜನ್, 8ನೇ ತರಗತಿ (ಶ್ರೀ ರಾಮಕೃಷ್ಣ ಮತ್ತು ಶ್ರೀಮತಿ ರವಿಕಲಾ ದಂಪತಿ ಪುತ್ರ) – 5ನೇ ಸ್ಥಾನ ಹಾಗೂ ಕಿಶೋರ ವರ್ಗದಲ್ಲಿ – ಪ್ರಣೀತಕೃಷ್ಣ, 9ನೇ ತರಗತಿ(ಶ್ರೀ ಮುರಳೀಧರ.ಕೆ ಮತ್ತು ಶ್ರೀಮತಿ ಪ್ರಿಯದರ್ಶಿನಿ ದಂಪತಿ ಪುತ್ರ) – 5ನೇ ಸ್ಥಾನ ಪಡೆದಿದ್ದು,
ಬಾಲವರ್ಗದಲ್ಲಿ ಬಾಲಕಿಯರು ಹಾಗೂ ಕಿಶೋರ ವರ್ಗದಲ್ಲಿ ಬಾಲಕರು ದ್ವಿತೀಯ ಸಮಗ್ರ ಪ್ರಶಸ್ತಿ ಗಳಿಸಿ, ಆಗಸ್ಟ್ 17 ಮತ್ತು 18ರಂದು ಬೆಳಗಾಂನಲ್ಲಿ ನಡೆಯಲಿರುವ ಪ್ರಾಂತ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

