ಯಕ್ಷಮಿತ್ರ ಸೇವಾ ಬಳಗ ತಲಪಾಡಿ ಅರ್ಪಿಸುವ ಈ ಬಾರಿಯ ಅಂದರೆ 8 ನೆಯ ವರ್ಷದ ತಲಪಾಡಿ ಯಕ್ಷೋತ್ಸವವು ಇಂದು ದಿನಾಂಕ 20-11-2022 ಆದಿತ್ಯವಾರ ಮಧ್ಯಾಹ್ನ 12 ರಿಂದ ರಾತ್ರಿ 9 ಗಂಟೆಯ ವರೆಗೆ ನಡೆಯಲಿದೆ.

ಈ ಕಾರ್ಯಕ್ರಮವು ಮಂಗಳೂರಿನ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ. ತೆಂಕು-ಬಡಗು ತಿಟ್ಟುಗಳ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಪರೂಪದ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. ಹಿರಿಯ ಯಕ್ಷಗಾನ ಸಾಹಿತಿ, ಅರ್ಥಧಾರಿ ಹಾಗೂ ವೈದ್ಯರಾದ ಡಾ. ರಮಾನಂದ ಬನಾರಿಯವರಿಗೆ ಸನ್ಮಾನ ನಡೆಯಲಿದೆ.
ಮೊದಲನೇ ಪ್ರಸಂಗ ಸಮರಸೌಗಂಧಿಕಾ ಹಾಗೂ ಎರಡನೇ ಪ್ರಸಂಗ ‘ಬಬ್ರುವಾಹನ ಮತ್ತು ಶೇಷವಿಜಯ’ ಪಾತ್ರವರ್ಗ ಮತ್ತು ಕಲಾವಿದರ ವಿವರಗಳಿಗೆ ಆಹ್ವಾನಪತ್ರಿಕೆಯ ಚಿತ್ರವನ್ನು ನೋಡಿ.
ಈ ಅಪರೂಪದ ಪ್ರದರ್ಶನಗಳಿಗೆ ಯಕ್ಷಾಭಿಮಾನಿಗಳನ್ನು, ಯಕ್ಷಮಿತ್ರ ಸೇವಾ ಬಳಗದ ಸಂತೋಷ್ ಅಲಂಕಾರಗುಡ್ಡೆ ಹಾಗೂ ಎಲ್ಲಾ ಸದಸ್ಯರು ಆದರದಿಂದ ಆಮಂತ್ರಿಸಿದ್ದಾರೆ.
ಸಂತೋಷ್ ಅಲಂಕಾರಗುಡ್ಡೆ (8722369514)

- ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ರೈತನೊಬ್ಬನಿಗೆ ಮಣ್ಣಿನಲ್ಲಿ ಚಿನ್ನ ಸಿಕ್ಕ ವಿಷಯ ವೈರಲ್, ಚಿನ್ನಕ್ಕಾಗಿ ಭಾರೀ ನೂಕುನುಗ್ಗಲು. ದೂರದೂರದಿಂದ ಜನರ ಆಗಮನ
- ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಹತ್ಯೆ: ಕೃತ್ಯದ ನಂತರವೂ ಮನೆಯಲ್ಲೇ ಉಳಿದು ‘ಯಾಬಾ’ ಸೇವಿಸಿದ್ದ ಆರೋಪಿಗಳು; ಬೆಚ್ಚಿಬೀಳಿಸುವ ವಿವರಗಳು ಬಹಿರಂಗ
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್

