ಯಕ್ಷಮಿತ್ರ ಸೇವಾ ಬಳಗ ತಲಪಾಡಿ ಅರ್ಪಿಸುವ ಈ ಬಾರಿಯ ಅಂದರೆ 8 ನೆಯ ವರ್ಷದ ತಲಪಾಡಿ ಯಕ್ಷೋತ್ಸವವು ಇಂದು ದಿನಾಂಕ 20-11-2022 ಆದಿತ್ಯವಾರ ಮಧ್ಯಾಹ್ನ 12 ರಿಂದ ರಾತ್ರಿ 9 ಗಂಟೆಯ ವರೆಗೆ ನಡೆಯಲಿದೆ.

ಈ ಕಾರ್ಯಕ್ರಮವು ಮಂಗಳೂರಿನ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ. ತೆಂಕು-ಬಡಗು ತಿಟ್ಟುಗಳ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಪರೂಪದ ಪ್ರಸಂಗಗಳ ಪ್ರದರ್ಶನ ನಡೆಯಲಿದೆ. ಹಿರಿಯ ಯಕ್ಷಗಾನ ಸಾಹಿತಿ, ಅರ್ಥಧಾರಿ ಹಾಗೂ ವೈದ್ಯರಾದ ಡಾ. ರಮಾನಂದ ಬನಾರಿಯವರಿಗೆ ಸನ್ಮಾನ ನಡೆಯಲಿದೆ.
ಮೊದಲನೇ ಪ್ರಸಂಗ ಸಮರಸೌಗಂಧಿಕಾ ಹಾಗೂ ಎರಡನೇ ಪ್ರಸಂಗ ‘ಬಬ್ರುವಾಹನ ಮತ್ತು ಶೇಷವಿಜಯ’ ಪಾತ್ರವರ್ಗ ಮತ್ತು ಕಲಾವಿದರ ವಿವರಗಳಿಗೆ ಆಹ್ವಾನಪತ್ರಿಕೆಯ ಚಿತ್ರವನ್ನು ನೋಡಿ.
ಈ ಅಪರೂಪದ ಪ್ರದರ್ಶನಗಳಿಗೆ ಯಕ್ಷಾಭಿಮಾನಿಗಳನ್ನು, ಯಕ್ಷಮಿತ್ರ ಸೇವಾ ಬಳಗದ ಸಂತೋಷ್ ಅಲಂಕಾರಗುಡ್ಡೆ ಹಾಗೂ ಎಲ್ಲಾ ಸದಸ್ಯರು ಆದರದಿಂದ ಆಮಂತ್ರಿಸಿದ್ದಾರೆ.
ಸಂತೋಷ್ ಅಲಂಕಾರಗುಡ್ಡೆ (8722369514)

- 7th Standard, English – Unit 1 Prose – A Tiger in the House
- 7th Standard, Social – HISTORY CHAPTER 1 – MAJOR DEVELOPMENTS IN THE WORLD
- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH