ಒಮ್ಮೊಮ್ಮೆ ಮೊಬೈಲ್ ಎಂಬ ಗೀಳಿಗೆ ಅಂಟಿಕೊಳ್ಳುವ ಈಗಿನ ಯುವಕ ಯುವತಿಯರು ಆ ಚಟದಿಂದ ಹೊರಬರಲಾರದೆ ಚಡಪಡಿಸುತ್ತಿರುವುದನ್ನು ಕಾಣಬಹುದು.

ಇಲ್ಲೊಂದು ಪ್ರಕರಣ ಅದೇ ರೀತಿ ನಡೆದಿದೆ. ಮಾತ್ತವಲ್ಲದೆ ಈ ಮೊಬೈಲ್ ಚಟ ಯುವತಿಯ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ಯುವತಿ ತನ್ನ ತಮ್ಮ (ಕಿರಿಯ ಸಹೋದರ) ಮೊಬೈಲ್ ಓಪನ್ ಮಾಡುವ ಪಾಸ್ ವರ್ಡ್ ಬರಲಿಸಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಘಟನೆ ನಡೆದದ್ದು ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯಲ್ಲಿ. ಇಲ್ಲಿಯ ನಿವಾಸಿ 19 ವರ್ಷದ ಯುವತಿ ರುಚಿತಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಹುಡುಗಿ.
ಆಕೆಗೆ ಅತಿಯಾಗಿ ಮೊಬೈಲ್ ಬಳಸುವ ಚಾಳಿ ಅಂಟಿಕೊಂಡಿತ್ತು. ಅದನ್ಮು ಬಿಡಿಸಲು ಆಕೆಯ ತಮ್ಮ ಆಕೆಗೆ ಪ್ರತಿದಿನ ಬುದ್ಧಿ ಹೇಳುತ್ತಿದ್ದ. ಆದರೆ ಆಕೆ ಕೇಳಿರಲಿಲ್ಲ.
ಕೊನೆಗೆ ಆಕೆಯ ಅಭ್ಯಾಸವನ್ನು ಬಿಡಿಸಲು ಮೊಬೈಲ್ ತೆರೆಯುವ ಪಾಸ್ ವರ್ಡ್ ಕೋಡನ್ನು ಬದಲಾವಣೆ ಮಾಡಿದ್ದ. ಇದನ್ನು ತಿಳಿದ ಆಕೆ ಹೊಸ ಪಾಸ್ ವರ್ಡ್ ಹೇಳುವಂತೆ ತಮ್ಮನನ್ನು ಒತ್ತಾಯಿಸಿದಳು. ಆದರೆ ಆತ ಹೇಳಿರಲಿಲ್ಲ.
ಇದರಿಂದ ಜಗಳ ಮಾಡಿಕೊಂಡ ಆಕೆ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ದೊಡ್ಡಬಳ್ಳಾಪುರ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

