ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ತೃತೀಯ ಬಿ.ಎ. ವಿದ್ಯಾರ್ಥಿನಿ ನಯನಾ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಎ. ವಿದ್ಯಾರ್ಥಿ ಭರತ್ ಆಯ್ಕೆಯಾಗಿದ್ದಾರೆ.

ನಯನಾ ಅವರು ವಾಲ್ತಾಜೆ ನಿವಾಸಿಯಾ ಸತ್ಯನಾರಾಯಣ ಬಿ. ಹಾಗೂ ವಿನಯ ದಂಪತಿ ಪುತ್ರಿ. ಅಂತೆಯೇ ಭರತ್ ಅವರು ಪೆರ್ನೆ ನಿವಾಸಿ ಗಂಗಾಧರ್ ಹಾಗೂ ಸುಜಾತ ದಂಪತಿಯ ಪುತ್ರ.

ಪ್ರಥಮ ಬಿ.ಎ. ಪ್ರತಿನಿಧಿಯಾಗಿ ಮೈಸೂರಿನ ವಿಜೇಂದ್ರ ಎಸ್., ಕುಮುದಾ ವಿಜೇಂದ್ರ ಅವರ ಪುತ್ರ ವಿಕ್ರಮ್, ದ್ವಿತೀಯ ಬಿ.ಎ. ಪ್ರತಿನಿಧಿಯಾಗಿ ಪೆರ್ನೆಯ ಬಾಲಕೃಷ್ಣ, ವನಿತಾ ದಂಪತಿ ಪುತ್ರ ನವನೀತ್, ದ್ವಿತೀಯ ಬಿ.ಕಾಂ. ಪ್ರತಿನಿಧಿಯಾಗಿ ವೀರಮಂಗಲದ ಮನೋಹರ ವಿ., ನಾಗವೇಣಿ ಕೆ. ದಂಪತಿಯ ಪುತ್ರಿ ಲೇಖಾ,
ತೃತೀಯ ಬಿ.ಎ. ಪ್ರತಿನಿಧಿಯಾಗಿ ಕಿರಿಮಂಜೇಶ್ವರದ ದೇವರಾಜ್ ಆರ್, ರಾಜೇಶ್ವರಿ ದಂಪತಿಯ ಪುತ್ರಿ ಮೇಘಾ ಡಿ. ಮತ್ತು ತೃತೀಯ ಬಿ.ಎಸ್ಸಿ. ಪ್ರತಿನಿಧಿಯಾಗಿ ಪೆರ್ಲ ಸ್ವರ್ಗದ ಬಾಲಚಂದ್ರ ಬಿ.ವಿ., ಪ್ರಿಯಾ ದಂಪತಿ ಪುತ್ರಿ ವರಣ್ಯ ಬಿ. ಆಯ್ಕೆಯಾಗಿದ್ದಾರೆ.

- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

