ಪುಣ್ಯಕ್ಷೇತ್ರ ಮಧೂರಿನ ಬಳಿಯ ಪರಕ್ಕಿಲ ದೇಗುಲದ ನಟರಾಜ ಮಂಟಪದ ಸಮ್ಮುಖದ ರಂಗ ಮಂದಿರದಲ್ಲಿ ‘ಯಕ್ಷ ಕಲಾ ಕೌಸ್ತುಭ’ ಮಧೂರ್ ಎಂಬ ನೂತನ ಬಳಗದ ಕಾರ್ಯಕ್ರಮದ ಉದ್ಘಾಟನೆಯನ್ನು ಬ್ರಹ್ಮಶ್ರೀ,ವೇದಮೂರ್ತಿ ತಂತ್ರಿ ಶ್ರೀ ಉಳಿಯತ್ತಾಯ ವಿಷ್ಣು ಆಸ್ರ ನೆರವೇರಿಸಿದರು.
ಜ್ಯೋತಿಷಿ ಶ್ರೀ ನಾರಾಯಣ ರಂಗಾ ಭಟ್, ಪುರೋಹಿತ ರಾಮಪ್ರಕಾಶ ತುಂಗ, ಶ್ರೀ ರಾಧಾಕೃಷ್ಣ ನಾವಡ, ಚಂಬಲ್ತಿಮಾರ್ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷಗಾನ ಬಾಗವತ ಶ್ರೀ ವಾಸುದೇವ ಕಲ್ಲೂರಾಯರ ಭಕ್ತಿ ಭಾವದ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಬಳಗ ಹಲವು ವರ್ಷಗಳ ಕಾಲ ಸುದೀರ್ಘವಾಗಿ ಮೆರೆಯಲಿ ಎಂದು ಸಕಲರೂ ಶುಭ ಹಾರೈಸಿದರು.
ಯಕ್ಷಗಾನ ಅರ್ಥಧಾರಿ ಶ್ರೀ ವಾಸುದೇವ ರಂಗಾಭಟ್ ಸ್ವಾಗತ ಹಾಗೂ ಶುಭಗಳಿಂದ ಹಾರೈಸಿದರು.
ಯಕ್ಷ ಕಲಾ ಕೌಸ್ತುಭಾ ದ ಉದ್ಘಾಟನೆ ನಂತರ ನಡೆದ ಕಟೀಲು ಕ್ಷೇತ್ರ ಮಹಾತ್ಮೆ ಆಟ ನಡೆಯಿತು. ವಾಧಿರಾಜ ಕಲ್ಲೂರಾಯರು ಕಾರ್ಯಕ್ರಮ ನಿರೂಪಿಸಿದರು.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ