ರೈಲ್ವೆ ಕ್ರಾಸಿಂಗ್ ಗೇಟ್ ಮುಚ್ಚಿದ ಸಂದರ್ಭದಲ್ಲೂ ಬೈಕ್ ಸವಾರ ಹಳಿ ದಾಟಲು ಯತ್ನಿಸಿದ್ದು, ಆತ ತನ್ನ ಬೈಕ್ ಕಳಕೊಂಡಿದ್ದಾನೆ. ಆತನ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅವನನ್ನು ಬಂಧಿಸುವ ಸಾಧ್ಯತೆ ಇದೆ.
ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಇಟಾವಾದಲ್ಲಿ ರೈಲ್ವೇ ಕ್ರಾಸ್ ಜಂಕ್ಷನ್ನಲ್ಲಿ ವೇಗವಾಗಿ ಬರುತ್ತಿದ್ದ ರೈಲನ್ನು ನೋಡಿ ವ್ಯಕ್ತಿಯೊಬ್ಬ ತನ್ನ ಬೈಕ್ ಅನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾನೆ.
ಇಟಾವಾದ ರಾಮನಗರ ಪ್ರದೇಶದಲ್ಲಿ ನಡೆದ ಈ ನಾಟಕೀಯ ಸರಣಿಯು ಭದ್ರತಾ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೈಲ್ವೆ ಗೇಟನ್ನು ಮುಚ್ಚಲಾಗಿದೆ. ಆದರೂ ಹಲವರು ಗೇಟ್ ಅಡಿಯಿಂದ ಬೈಕ್ ಸಮೇತ ದಾಟಲು ಯತ್ನಿಸುತ್ತಾರೆ. ವೇಗವಾಗಿ ರೈಲು ಬರುತ್ತದೆ. ಎಲ್ಲರೂ ಹಿಂದೆ ಸರಿದರೂ ಒಬ್ಬನ ಬೈಕ್ ಹಳ್ಳಿಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ.
ಆದರೆ ವೇಗವಾಗಿ ಬರುತ್ತಿರುವ ರೈಲು ತನ್ನ ಕಡೆಗೆ ಬರುತ್ತಿದೆ ಎಂದು ತಿಳಿದಾಗ, ಅವನು ಅವನ ಬೈಕನ್ನು ಹಳಿಯಿಂದ ಎಳೆಯಲು ಪ್ರಯತ್ನಿಸಿದನು ಆದರೆ ಬೈಕ್ ಮುಂಭಾಗದ ಟೈರ್ ಸಿಲುಕಿಕೊಂಡಿತು.
ಜಾರ್ಖಂಡ್ ಸ್ವರ್ಣ ಜಯಂತಿ ಎಕ್ಸ್ಪ್ರೆಸ್ ಅತಿವೇಗದಲ್ಲಿ ಬರುತ್ತಿರುವುದನ್ನು ಕಂಡು ಅವನು ತನ್ನ ಮೋಟಾರು ಸೈಕಲ್ ಅನ್ನು ಬಿಟ್ಟು ರೈಲು ಹಳಿಯಿಂದ ಓಡಿಹೋದ. ಬೈಕ್ ರೈಲಿನಡಿ ನಜ್ಜುಗುಜ್ಜಾಗಿದ್ದು, ಬೈಕ್ ನ ಕೆಲವು ಭಾಗಗಳು ಹಳಿಗಳ ಬಳಿ ಪತ್ತೆಯಾಗಿವೆ.
ವರದಿಗಳ ಪ್ರಕಾರ, ಬೈಕ್ ಸವಾರನಿಗೆ ನೋಟಿಸ್ ನೀಡಲಾಗುವುದು ಮತ್ತು ರೈಲ್ವೇ ಕ್ರಾಸಿಂಗ್ ಅನ್ನು ಮುಚ್ಚಿದಾಗಲೂ ಹಳಿಗಳನ್ನು ದಾಟಲು ಯತ್ನಿಸಿದ ಕಾರಣ ಅವರನ್ನು ಬಂಧಿಸಬಹುದು.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

