ಈ ಮಳೆಗಾಲದಲ್ಲಿ ಅದರಲ್ಲೂ ಇತ್ತೀಚಿಗೆ ಕೆಲವು ದಿನಗಳಲಿಂದ ನಮ್ಮ ದೇಶದ ಹೆಚ್ಚಿನೆಲ್ಲಾ ಪ್ರದೇಶಗಳು ತೀವ್ರವಾದ ಅತಿವೃಷ್ಟಿಯನ್ನು ಅನುಭವಿಸಿತ್ತು.
ಅತ್ಯಧಿಕ ಮಳೆಯಾಗಿ ನದಿಗಳು ಮೈದುಂಬಿ ಹರಿದು ನೆರೆ ಸಂಭವಿಸಿ ಜೀವಹಾನಿ, ಕೃಷಿಹಾನಿ ಆಸ್ತಿಪಾಸ್ತಿ ನಷ್ಟ ಸಂಭವಿಸಿತ್ತು.
ಅಷ್ಟೆಲ್ಲಾ ಆದರೂ ಈ ಪ್ರದೇಶದಲ್ಲಿ ಮಾತ್ರ ಮಳೆಯೂ ಇಲ್ಲ. ನೀರೂ ಇಲ್ಲ. ಕೃಷಿ ಕಾಯಕವನ್ನು ನಂಬಿಕೊಂಡವರಂತೂ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ಅಷ್ಟಕ್ಕೂ ನಾವು ಹೇಳುವ ಕತೆ ಬೇರೆ ದೇಶದ್ದೇನಲ್ಲ. ನಮ್ಮದೇ ದೇಶದ ಮಣಿಪುರ ರಾಜ್ಯದ ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದೆ.
ಮಣಿಪುರದ ಲೆಮಿಯಾಖೋಂಗ್ ಮಾಪಾಲ್ ಶಿಲ್ಹೆಪುಂಗ್ ಗ್ರಾಮದಲ್ಲಿ ರೈತರು ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ವೀಡಿಯೊ ನೋಡಿ.