ನಿನ್ನೆ ರಾತ್ರಿ ಜುಲೈ 9ರಂದು (ಇಂದು ಜುಲೈ 10 ಮುಂಜಾನೆ 00. 30) ಬೈತಡ್ಕ ಗೌರಿ ಹೊಳೆಗೆ ಬಿದ್ದ ಕಾರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ಸಹಾಯದಿಂದ ಮೇಲಕ್ಕೆತ್ತಲಾಗಿದೆ.
ಆದರೆ ಕಾರಿನಲ್ಲಿದ್ದ ಇಬ್ಬರ ಯುವಕರು ನಾಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿ ಹೊಳೆಗೆ ಬಿದ್ದ ಮಾರುತಿ 800 ಕಾರನ್ನು ಇಂದು ಮಧ್ಯಾಹ್ನ ಸುಮಾರು 12.30 ಘಂಟೆಗೆ ಮೇಲೆಕ್ಕೆತ್ತಲಾಯಿತು. ಆದರೆ ಕಾರಿನೊಳಗಿದ್ದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ.
ಕಾರಿನೊಳಗಿದ್ದ ಇಬ್ಬರು ಯುವಕರ ಶೋಧಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿಯೇ ವಿಟ್ಲ ಸಮೀಪದ ಕುಂಡಡ್ಕದಿಂದ ಹೊರಟಿದ್ದ ಕಾರು ಗುತ್ತಿಗಾರಿನತ್ತ ಹೋಗುತ್ತಿತ್ತು. ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ಬೈತಡ್ಕ ಸಮೀಪ ಚಾಲಕನ ನಿಯತ್ರ ತಪ್ಪಿ ಹೊಳೆಗೆ ಬಿದ್ದಿದೆ.

ಸಿಸಿಟಿವಿ ದೃಶ್ಯದ ಪ್ರಕಾರ ಕಾರು ಅತಿವೇಗದಿಂದ ಸಾಗುತ್ತಿತ್ತು. ಹಾಗೂ ಆ ಮಧ್ಯರಾತ್ರಿಯ ಮಳೆಯಲ್ಲಿ ಚಾಲಕನು ತಿರುವಿನಲ್ಲಿ ಕಾರನ್ನು ತಿರುಗಿಸಲು ಅಸಾಧ್ಯವಾಗುಷ್ಟು ವೇಗದಲ್ಲಿ ಕಾರನ್ನು ಓಡಿಸಲಾಗುತ್ತಿತ್ತು ಎಂದು ದೃಶ್ಯದಲ್ಲಿ ಕಾಣುತ್ತಿತ್ತು.
ಮೊದಲಿಗೆ ಕಾರನ್ನು ಮೇಲೆತ್ತಲು ಪ್ರಯತ್ನಿಸಲಾಯಿತು. ಆದರೆ ನೀರಿನ ರಭಸಕ್ಕೆ ಕಾರು ಮತ್ತೊಮ್ಮೆ 100 ಮೀಟರಿನಷ್ಟು ಕೆಳಕ್ಕೆ ಕೊಚ್ಚಿಹೋಯಿತು ಆಮೇಲೆ ಮುಳುಗುತಜ್ಞರು ಕಾರನ್ನು ಪತ್ತೆಹಚ್ಚಿ ಹಗ್ಗದ ಸಹಾಯದಿಂದ ಅದನ್ನು ಮೇಲೆಕ್ಕೆತ್ತಲಾಯಿತು.

ಕಾರಿನೊಳಗಿದ್ದ ಇಬ್ಬರು ಸಂಬಂಧಿಕ ಯುವಕರಾದ ವಿಟ್ಲ ಸಮೀಪ ಕುಂಡಡ್ಕದ ಧನುಷ್(26) ಮತ್ತು ಮಂಜೇಶ್ವರದ ಧನುಷ್ (21) ಅವರ ಪತ್ತೆಕಾರ್ಯ ಮುಂದುವರಿದಿದೆ.
- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS

