ಕಲಾಸಂಗಮ ಚಾರಿಟೇಬಲ್ ಟ್ರಸ್ಟಿನ ಅಂಗಸಂಸ್ಥೆಯಾದ ಶ್ರೀ ಯಕ್ಷಗಾನ ಕಲಾಮೇಳ, ಶಿರಸಿಯು ತನ್ನ ಈ ವರ್ಷದ ತಿರುಗಾಟವನ್ನು ಆರಂಭಿಸಲು ಅಣಿಯಾಗಿದೆ. ಈ ವರ್ಷದ ಪ್ರಥಮ ಪ್ರದರ್ಶನ ‘ಮಾಳವಿಕಾ ಪರಿಣಯ’ ಎಂಬ ನೂತನ ಪ್ರಸಂಗದೊಂದಿಗೆ ದಿನಾಂಕ 05.12.2021ರ ಭಾನುವಾರದಂದು ಶಿರಸಿಯ ಲಯನ್ಸ್ ಸಭಾಂಗಣದಲ್ಲಿ (ಸಂಜೆ ಘಂಟೆ 5ರಿಂದ 10ರ ವರೆಗೆ) ಆರಂಭವಾಗಲಿದೆ ಎಂದು ಮೇಳದ ವ್ಯವಸ್ಥಾಪಕರೂ ಕಲಾಸಂಗಮ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರೂ ಆಗಿರುವ ಶ್ರೀ ಕೇಶವ ಹೆಗಡೆ ಮಂಗಳೂರು (ನಾಗರಕುರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಹೊಸ ಪ್ರಸಂಗ ‘ಮಾಳವಿಕಾ ಪರಿಣಯ’ ಎಂಬ ಕಥಾನಕವು ಮಹಾಕವಿ ಕಾಳಿದಾಸ ವಿರಚಿತ “ಮಾಳವಿಕಾಗ್ನಿಮಿತ್ರಮ್” ಎಂಬ ಸಂಸ್ಕೃತ ನಾಟಕದ ಕಥಾ ಭಾಗವಾಗಿದೆ. ಈ ಕತೆಯನ್ನು ಯಕ್ಷಗಾನಕ್ಕೆ ಅಳವಡಿಸಿದವರು ಶ್ರೀ ಕೇಶವ ಹೆಗಡೆ ಮಂಗಳೂರು (ನಾಗರಕುರ). ಪ್ರಸಂಗದ ಪದ್ಯ ರಚನೆಯನ್ನು ತೆಂಕು ಬಡಗಿನ ಕಲಾವಿದ ಎಂ.ಕೆ. ರಮೇಶ ಆಚಾರ್ಯ ಅವರು ಮಾಡಿದ್ದಾರೆ. ಶ್ರೀ ಯಕ್ಷಗಾನ ಕಲಾಮೇಳ, ಶಿರಸಿಯು ಉತ್ಸಾಹಿ ಕಲಾವಿದರನ್ನೊಳಗೊಂಡ ತಂಡವಾಗಿದೆ. ಶ್ರೀ ಕೇಶವ ಹೆಗಡೆ ಮಂಗಳೂರು ಅವರ ಸಾರಥ್ಯದಲ್ಲಿ ತಿರುಗಾಟಕ್ಕೆ ಹೊರಟು ನಿಂತಿರುವ ಮೇಳಕ್ಕೆ ಕಲಾಭಿಮಾನಿಗಳು ಶುಭ ಹಾರೈಸಿದ್ದಾರೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
