ಯಕ್ಷಗಾನದ ಕಂಚಿನ ಕಂಠ, ಭಾಗವತಿಕೆಯ ಮೇರು ಶಕ್ತಿ ಕಾಳಿಂಗ ನಾವಡರು. 1991ರಲ್ಲೇ, ತಮ್ಮ 32ನೇ ವಯಸ್ಸಿನಲ್ಲಿ ಮರೆಯಾದ ಗುರು ನಾರ್ಣಪ್ಪ ಉಪ್ಪೂರರ ಶಿಷ್ಯರಾದ ಕರಾವಳಿ ಗಾನ ಕೋಗಿಲೆ ಖ್ಯಾತಿಯ ಕಾಳಿಂಗ ನಾವಡರ ಹಾಗೂ ಅವರ ಸಿರಿ ಕಂಠದ ನೆನೆಪಿನಲ್ಲಿ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆ ಕಳೆದ 11 ವರ್ಷಗಳಿಂದ “ಕಾಳಿಂಗ ನಾವಡ ಪ್ರಶಸ್ತಿ”ಯನ್ನು ಯಕ್ಷಲೋಕದ ಹಿಮ್ಮೇಳದ ಗಣ್ಯರಿಗೆ ಕೊಡುತ್ತಾ ಬಂದಿದೆ.
ಕಲಾಕದಂಬ ಸಂಸ್ಥೆಯು ಅಂಬರಿಷ್ ಭಟ್, ದೇವರಾಜ ಕರಬ, ವಿಶ್ವನಾಥ ಉರಾಳ್, ಮಮತಾ ಆರ್ ಕೆ, ಮುರಳೀಧರ ನಾವಡರ ಉಪಸ್ಥಿತಿಯ ಸಭೆಯಲ್ಲಿ 2021ರ ಸಾಲಿನ ಕಾಳಿಂಗ ನಾವಡ ಪ್ರಶಸ್ತಿಗೆ ಯಕ್ಷಗಾನ ಕ್ಷೇತ್ರದ ಹಿರಿಯ ಅನುಭವಿ, ಮದ್ದಳೆಯ ಮಾಂತ್ರಿಕ ಕ್ರಿಯಾಶೀಲ ಕಲಾವಿದ, ಮಾರ್ಗದರ್ಶಕರಾದ ಶಂಕರ ಭಾಗವತ ಯಲ್ಲಾಪುರರನ್ನು ಆಯ್ಕೆ ಮಾಡಿದೆಯೆಂದು ಕಲಾಕದಂಬ ಸಂಸ್ಥೆಯ ನಿರ್ದೇಶಕರಾದ ಡಾ ರಾಧಾಕೃಷ್ಣ ಉರಾಳರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ 31ರ ಭಾನುವಾರ ಸಂಜೆ ಬೆಂಗಳೂರಿನ ಬಸವನಗುಡಿಯ ಗವಿಪುರಂ ನಲ್ಲಿರುವ ಉದಯಭಾನು ಕಲಾಮಂದಿರದಲ್ಲಿ ಈ ಒಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರಶಸ್ತಿಯು ಸನ್ಮಾನ ಪತ್ರ, ಫಲಕ, ಬೆಳ್ಳಿತಟ್ಟೆ ಸೇರಿದಂತೆ ಹತ್ತು ಸಾವಿರ ರೂಪಾಯಿ ನಗದನ್ನೊಳಗೊಂಡಿರುತ್ತದೆ.
ಹೆಚ್ಚಿನ ವಿವರಗಳಿಗೆ ಮುರಳೀಧರ ನಾವಡ 9886066732, ವಿಶ್ವನಾಥ ಉರಾಳ 9845663646, ಡಾ. ರಾಧಾಕೃಷ್ಣ ಉರಾಳ 9448510582 ಅವರನ್ನು ಸಂಪರ್ಕಿಸಬಹುದು.
ಕಲಾಕದಂಬ ಆರ್ಟ್ ಸೆಂಟರ್, ಕಲಾಗುಡಿ, 858, ವಿಶ್ವೇಶ್ವರಯ್ಯ 4ನೇ ಬ್ಲಾಕು, ಬೆಂ. 560110
- 6th Standard, Science, Chapter 3, Separation of Substances
- 7th Standard, English, Second Language, Chapter 3 – EKALAVYA
- 8th Standard, Science, Chapter 3, Health: The Ultimate Treasure
- 8th Standard, English FL, PROSE – 3, BEFORE THE MATCH
- 6th Standard, Social Science, Chapter 5 – RISE OF NEW RELIGIONS

