ಇತ್ತೀಚೆಗೆ ಕರ್ನಾಟಕ ಸರಕಾರ ಕೊರೋನಾ ಸಂಕಷ್ಟದ ನಿಮಿತ್ತ ಯಕ್ಷಗಾನ ಕಲಾವಿದರಿಗೆ ಸಹಾಯಧನ ನೀಡುವ ಭರವಸೆ ನೀಡಿ ಆ ಸಲುವಾಗಿ ಕಲಾವಿದರು ಅರ್ಜಿ ಸಲ್ಲಿಸುವಂತೆ ತಿಳಿಸಿತ್ತು. ಅರ್ಜಿ ಸಲ್ಲಿಸುವ ಹಾಗೂ ಅದರ ಮುಂದಿನ ಪ್ರಕ್ರಿಯೆ ಈಗ ಚಾಲ್ತಿಯಲ್ಲಿದೆ. ಈ ನಡುವೆ ಗಡಿನಾಡು ಕಾಸರಗೋಡಿನ ಕಲಾವಿದರು ತಮ್ಮನ್ನೂ ಕರ್ನಾಟಕದ ಈ ಸವಲತ್ತಿನ ವ್ಯಾಪ್ತಿಯೊಳಗೆ ತರಬೇಕೆಂಬ ಮನವಿ ಸಲ್ಲಿಸಿದ್ದಾರೆ. ಯಾಕೆಂದರೆ ಹೆಚ್ಚಿನ ಗಡಿನಾಡಿನ ಯಕ್ಷಗಾನ ಕಲಾವಿದರೂ ಕಲಾಸೇವೆ ಮಾಡುತ್ತಿರುವುದು ಕರ್ನಾಟಕದ ಪ್ರದೇಶಗಳಲ್ಲಿ ಮತ್ತು ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟ ಮೇಳಗಳಲ್ಲಿ. ಆದುದರಿಂದ ಅವರ ಈ ಕೇಳಿಕೆ ಸಾಧುವಾದುದೇ ಆಗಿರುತ್ತದೆ.
1. ಹೆಚ್ಚಿನ ಕಲಾವಿದರು ಕಲಾಸೇವೆ ಮಾಡುತ್ತಿರುವುದು ಕರ್ನಾಟಕದಲ್ಲಿ.
2. ಬಹುತೇಕ ಕಲಾವಿದರು ದುಡಿಯುತ್ತಿರುವ ಮೇಳಗಳು ಕರ್ನಾಟಕ ರಾಜ್ಯಕ್ಕೆ ಸೇರಿದವುಗಳು.
3. ಅಂತಹಾ ಮೇಳಗಳ ಮಾಲಕತ್ವವೂ ಕರ್ನಾಟಕ ರಾಜ್ಯದ ಮಹನೀಯರಿಗೆ ಸೇರಿದುದಾಗಿದೆ.
ಆದುದರಿಂದ ಕಾಸರಗೋಡಿನ ಕಲಾವಿದರು ಈ ಸಹಾಯಧನವನ್ನು ಅಪೇಕ್ಷೆಪಟ್ಟರೆ ಅದು ಅನುಚಿತವಾಗಲಾರದು. ಬದಲಾಗಿ ಈ ಸಂಕಷ್ಟ ಸಮಯದಲ್ಲಿ ಉಚಿತವೂ ಸಾಧುವೂ ಆಗಿರುತ್ತದೆ ಎಂದು ಕಲಾವಿದರ ಹಾಗೂ ಯಕ್ಷಾಭಿಮಾನಿಗಳ ಅಭಿಪ್ರಾಯವಾಗಿದೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

