ಇತ್ತೀಚೆಗೆ ಕರ್ನಾಟಕ ಸರಕಾರ ಕೊರೋನಾ ಸಂಕಷ್ಟದ ನಿಮಿತ್ತ ಯಕ್ಷಗಾನ ಕಲಾವಿದರಿಗೆ ಸಹಾಯಧನ ನೀಡುವ ಭರವಸೆ ನೀಡಿ ಆ ಸಲುವಾಗಿ ಕಲಾವಿದರು ಅರ್ಜಿ ಸಲ್ಲಿಸುವಂತೆ ತಿಳಿಸಿತ್ತು. ಅರ್ಜಿ ಸಲ್ಲಿಸುವ ಹಾಗೂ ಅದರ ಮುಂದಿನ ಪ್ರಕ್ರಿಯೆ ಈಗ ಚಾಲ್ತಿಯಲ್ಲಿದೆ. ಈ ನಡುವೆ ಗಡಿನಾಡು ಕಾಸರಗೋಡಿನ ಕಲಾವಿದರು ತಮ್ಮನ್ನೂ ಕರ್ನಾಟಕದ ಈ ಸವಲತ್ತಿನ ವ್ಯಾಪ್ತಿಯೊಳಗೆ ತರಬೇಕೆಂಬ ಮನವಿ ಸಲ್ಲಿಸಿದ್ದಾರೆ. ಯಾಕೆಂದರೆ ಹೆಚ್ಚಿನ ಗಡಿನಾಡಿನ ಯಕ್ಷಗಾನ ಕಲಾವಿದರೂ ಕಲಾಸೇವೆ ಮಾಡುತ್ತಿರುವುದು ಕರ್ನಾಟಕದ ಪ್ರದೇಶಗಳಲ್ಲಿ ಮತ್ತು ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟ ಮೇಳಗಳಲ್ಲಿ. ಆದುದರಿಂದ ಅವರ ಈ ಕೇಳಿಕೆ ಸಾಧುವಾದುದೇ ಆಗಿರುತ್ತದೆ.
1. ಹೆಚ್ಚಿನ ಕಲಾವಿದರು ಕಲಾಸೇವೆ ಮಾಡುತ್ತಿರುವುದು ಕರ್ನಾಟಕದಲ್ಲಿ.
2. ಬಹುತೇಕ ಕಲಾವಿದರು ದುಡಿಯುತ್ತಿರುವ ಮೇಳಗಳು ಕರ್ನಾಟಕ ರಾಜ್ಯಕ್ಕೆ ಸೇರಿದವುಗಳು.
3. ಅಂತಹಾ ಮೇಳಗಳ ಮಾಲಕತ್ವವೂ ಕರ್ನಾಟಕ ರಾಜ್ಯದ ಮಹನೀಯರಿಗೆ ಸೇರಿದುದಾಗಿದೆ.
ಆದುದರಿಂದ ಕಾಸರಗೋಡಿನ ಕಲಾವಿದರು ಈ ಸಹಾಯಧನವನ್ನು ಅಪೇಕ್ಷೆಪಟ್ಟರೆ ಅದು ಅನುಚಿತವಾಗಲಾರದು. ಬದಲಾಗಿ ಈ ಸಂಕಷ್ಟ ಸಮಯದಲ್ಲಿ ಉಚಿತವೂ ಸಾಧುವೂ ಆಗಿರುತ್ತದೆ ಎಂದು ಕಲಾವಿದರ ಹಾಗೂ ಯಕ್ಷಾಭಿಮಾನಿಗಳ ಅಭಿಪ್ರಾಯವಾಗಿದೆ.
- ಅಮೆರಿಕದಲ್ಲಿ ಇಬ್ಬರು ಭಾರತೀಯ ಯುವತಿಯರ ಹತ್ಯೆ; ಅವರೊಂದಿಗೆ ವಾಸಿಸುತ್ತಿದ್ದ ಯುವತಿಯ ಬಂಧನ
- ಅತಿ ಭೀಕರ ಪ್ರವಾಹಕ್ಕೆ ಕಾರಣವೇನು? ನೇಪಾಳದ ಪ್ರವಾಹಕ್ಕೆ ಹಿಮನದಿ ಕುಸಿತ, ಭೂಕಂಪ ಕಾರಣವಾಯಿತೇ? ಇಲ್ಲಿದೆ ಅಸಲಿ ಕಾರಣ…
- ಗೋದಾವರಿ ನದಿಗೆ ಹಾರಿದ ಗಂಡ ಹೆಂಡತಿ – ಒಬ್ಬಂಟಿಯಾಗಿ, ಅನಾಥವಾಗಿ ಸೇತುವೆಯ ಮೇಲೆ ನಿಂತು ಅಳುತ್ತಿದ್ದ ಅವರ 3 ವರ್ಷದ ಮಗು
- ಸನ್ಯಾಸಿಯಾದ ಬಿಲಿಯನೇರ್ ಉತ್ತರಾಧಿಕಾರಿ –ಮಲೇಷ್ಯಾದ ಮೂರನೇ ಅತಿದೊಡ್ಡ ಶ್ರೀಮಂತ ಆನಂದ ಕೃಷ್ಣನ್ ಅವರ ಮಗ
- ತನ್ನ ತಂದೆಗೇ ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ನೀಡುತ್ತಿರುವ 16 ವರ್ಷದ ಬಾಲಕ!

