ನಿಡಂಬೂರು ಮಾಗಣೆಯ ಶ್ರೇಷ್ಠ ಸಾಧಕರಿಗೆ ನೀಡುವ ‘ನಿಡಂಬೂರು ಶ್ರೀ’ ಪ್ರಶಸ್ತಿಯನ್ನು ಈ ಬಾರಿ ಕಿದಿಯೂರಿನ ಖ್ಯಾತ ವಯಲಿನ್ ವಾದಕಿ ವಿದ್ವಾನ್ ವಸಂತಿ ರಾಮ ಭಟ್ ಇವರಿಗೆ ಏಪ್ರಿಲ್ ಹನ್ನೊಂದರಂದು ಅಂಬಲಪಾಡಿಯ ಭವಾನಿ ಮಂಟಪದಲ್ಲಿ ನಡೆದ ಮಧೂರು ಮಾಧುರ್ಯ ಸಮಾರಂಭದ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ವಸಂತಿ ರಾಮ ಭಟ್ ನೂರಾರು ವಿದ್ಯಾರ್ಥಿಗಳಿಗೆ ಬಹಳ ಪ್ರೀತಿಯಿಂದ ವಯಲಿನ್ ವಿದ್ಯೆಯನ್ನು ಕಲಿಸಿ ಅವರನ್ನು ಕಲಾವಿದರನ್ನಾಗಿಸಿ ಸಮಾಜಕ್ಕೆ ನೀಡಿದ ಮಹಾನ್ ಗುರುಗಳಾಗಿದ್ದಾರೆ. ಸ್ವತಃ ಶ್ರೇಷ್ಠ ವಯಲಿನ್ ವಾದಕಿಯಾಗಿರುವ ವಸಂತಿ ಭಟ್ರು ನಮ್ಮ ನಿಡಂಬೂರು ಮಾಗಣೆ ಹೆಮ್ಮೆಪಡುವ ಸಾಧಕಿ. ಈ ಬಾರಿಯ ನಿಡಂಬೂರು ಶ್ರೀ ಪ್ರಶಸ್ತಿಯನ್ನು ಇವರಿಗೆ ನೀಡುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂಬುದಾಗಿ ಪ್ರಶಸ್ತಿಯ ಸ್ಥಾಪಕರಾದ ಡಾಕ್ಟರ್ ನಿಡಂಬೂರು ಬೀಡು ವಿಜಯ ಬಲ್ಲಾಳರು ಪ್ರಶಸ್ತಿ ಪ್ರದಾನ ಮಾಡಿ ನುಡಿದರು.
ಈ ಸಂದರ್ಭದಲ್ಲಿ ಡಾಕ್ಟರ್ ಅರ್ಜುನ್ ಬಲ್ಲಾಳ್, ಡಾಕ್ಟರ್ ಶ್ರುತಿ ಅರ್ಜುನ್ ಬಲ್ಲಾಳ್, ವಿದ್ವಾನ್ ಮದ್ವೇಶ ಭಟ್ ಹಾಗೂ ಶ್ರೀಮತಿ ಜ್ಯೋತಿ ಸತೀಶ್ ಭಟ್ ಉಪಸ್ಥಿತರಿದ್ದರು. ಕಳೆದ ಬಾರಿ ಈ ಪ್ರಶಸ್ತಿಯನ್ನು ಅಂಬಲಪಾಡಿಯ ಹಿರಿಯ ಸಮಾಜಸೇವಕರಾದ ವಿಶು ಶೆಟ್ಟಿ ಅವರಿಗೆ ನೀಡಲಾಗಿತ್ತು.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
