Friday, September 20, 2024
Homeಯಕ್ಷಗಾನ80ನೆಯ ಹುಟ್ಟುಹಬ್ಬದ ಸಂಭ್ರಮ, ಯಕ್ಷಗಾನ ತಾಳಮದ್ದಳೆ ಮತ್ತು ಕೃತಿ ಬಿಡುಗಡೆ 

80ನೆಯ ಹುಟ್ಟುಹಬ್ಬದ ಸಂಭ್ರಮ, ಯಕ್ಷಗಾನ ತಾಳಮದ್ದಳೆ ಮತ್ತು ಕೃತಿ ಬಿಡುಗಡೆ 

ವೇದಮೂರ್ತಿ ಚೂಂತಾರು ಲಕ್ಷ್ಮೀನಾರಾಯಣ ಭಟ್ಟರ 80ನೆಯ ಹುಟ್ಟುಹಬ್ಬದ ಸಂಭ್ರಮ ದಿನಾಂಕ 01.03.2021ನೇ ಸೋಮವಾರ ವಿವಿಧ ಧಾರ್ಮಿಕ, ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಸುಳ್ಯ ತಾಲೂಕಿನ ಚೊಕ್ಕಾಡಿ ಶ್ರೀ ರಾಮ ದೇವಾಲಯದ ದೇಸಿ ಭವನದಲ್ಲಿ ಈ ಕಾರ್ಯಕ್ರಮ ದಿನ ಪೂರ್ತಿ ನಡೆಯಲಿದೆ.

ಬೆಳಿಗ್ಗೆ 6 ಘಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಬೆಳಿಗ್ಗೆ 10.30 ಘಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಆ ಸಂದರ್ಭದಲ್ಲಿ   ಚೂಂತಾರು ಲಕ್ಷ್ಮೀನಾರಾಯಣ ಭಟ್ಟರ ಜೀವನ ಚರಿತ್ರೆಯ ಪುಸ್ತಕ ಬಿಡುಗಡೆಯಾಗಲಿದೆ.

ಭೋಜನದ ಅನಂತರ ಮಧ್ಯಾಹ್ನ 2 ಘಂಟೆಯಿಂದ, ರಾಮಾ ಜೋಯಿಸ್ ಬೆಳ್ಳಾರೆ ಸಂಯೋಜಿಸಿದ, ಪ್ರಸಿದ್ಧ ಕಲಾವಿದರ ಕೂಡುವಿಕೆಯ “ತ್ರ್ಯಂಬಕ ರುದ್ರ ಮಹಾತ್ಮೆ” ಎಂಬ  ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಕಾರ್ಯಕ್ರಮದ ವಿವರ ಈ ಕೆಳಗೆ ಕೊಡಲಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments