ಇಂತಹುದೇ ವೇಷ ಎಂದು ಬ್ರಾಂಡ್ ಆಗದ ಕಲಾವಿದರು ನಮ್ಮ ನಡುವೆ ಹಲವಾರು ಮಂದಿ ಇದ್ದಾರೆ. ಒಂದು ವೇಳೆ ಬ್ರಾಂಡ್ ಆದರೂ ಬೇರೆ ವೇಷಗಳನ್ನೂ ನಿರ್ವಹಿಸುವ ಸಾಮರ್ಥ್ಯ ಇರುವ ಕಲಾವಿದರೂ ಇದ್ದಾರೆ. ಧರ್ಮಸ್ಥಳ ಮೇಳದ ಕಲಾವಿದ ಶ್ರೀ ಹರೀಶ್ ಶೆಟ್ಟಿ ಮಣ್ಣಾಪು ಅಂತಹವರಲ್ಲಿ ಒಬ್ಬರು. ಪ್ರಸ್ತುತ ಬಣ್ಣದ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದರೂ ಹರೀಶ್ ಶೆಟ್ಟಿಯವರು ಎದುರು ವೇಷ ಅಥವಾ ಕಿರೀಟ ವೇಷ, ಪೀಠಿಕೆ ವೇಷಗಳನ್ನೂ ಮಾಡುತ್ತಾರೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ
ಎಲ್ಲಾ ರೀತಿಯ ವೈವಿಧ್ಯಮಯ ಬಣ್ಣದ ವೇಷಗಳನ್ನು ನಿರ್ವಹಿಸುವ ಹರೀಶ್ ಶೆಟ್ಟಿ ಮಣ್ಣಾಪು ಹಿರಣ್ಯಾಕ್ಷನ ಪಾತ್ರವನ್ನೂ ಮಾಡುತ್ತಾರೆ. ವಿಶ್ವಾಮಿತ್ರ ಮೇನಕೆಯಲ್ಲಿ ರಾಜಾ ಕೌಶಿಕನ ಪಾತ್ರವನ್ನೂ ನಿರ್ವಹಿಸುತ್ತಾರೆ. ದೇವೇಂದ್ರನ ಪಾತ್ರವನ್ನೂ ಮಾಡಬಲ್ಲರು. ಬಣ್ಣದ ವೇಷಧಾರಿಯೊಬ್ಬರು ಈ ರೀತಿಯ ಪಾತ್ರಗಳನ್ನೂ ಮಾಡುವವರು ಬಹಳ ಅಪರೂಪ. ಇಂತಹವರ ಸಂಖ್ಯೆ ಕೇವಲ ಬೆರೆಳೆಣಿಕೆಯಲ್ಲಿ ಮಾತ್ರ. ಇತ್ತೀಚಿಗೆ ಒಂದೆರಡು ತಿಂಗಳುಗಳ ಹಿಂದೆ ವಿವಾಹಿತರಾದ ಹರೀಶ್ ಶೆಟ್ಟಿ ಮಣ್ಣಾಪು ಅವರಿಗೆ ವೈವಾಹಿಕ ಜೀವನದ ಶುಭ ಹಾರೈಕೆಗಳು.


