Friday, September 20, 2024
Homeಯಕ್ಷಗಾನಓ ಫೆವಿಕಾಲ್... ಇದೇನು ಅವಾಂತರ?

ಓ ಫೆವಿಕಾಲ್… ಇದೇನು ಅವಾಂತರ?

ಜನರ ಶ್ರದ್ಧೆ, ನಂಬಿಕೆಗಳೇ ಹಾಗೆ. ಭಾರತ ದೇಶದ ಸಂಸ್ಕೃತಿ, ಭಾಷೆ, ಆಚಾರ ವಿಚಾರಗಳು ಪರಿಸರ ಪ್ರದೇಶಗಳಿಗೆ ಹೊಂದಿಕೊಂಡು ಭಿನ್ನವಾಗಿದ್ದರೂ ಜನರ ಆಚರಣೆ, ನಂಬಿಕೆ, ಶ್ರದ್ಧೆಗಳ ವಿಚಾರಕ್ಕೆ ಬಂದಾಗ ಮತ್ತು ದೇಶದಲ್ಲಿ ಧರ್ಮ, ಸಂಸ್ಕೃತಿ, ಕಲೆಗಳಿಗೆ ಧಕ್ಕೆ ಉಂಟಾದಾಗ ಒಂದೇ ರೀತಿಯ ಅನುಸರಣೆ ಎದ್ದು ಕಾಣುವುದು ಈ ದೇಶದ ವಿಶೇಷತೆ ಹಾಗೂ ಹೆಮ್ಮೆ ಎಂದೇ ಹೇಳಬಹುದು. 

ಅದರಲ್ಲೂ ಯಕ್ಷಗಾನ ಎಂಬುದು ನಮ್ಮ ಕರ್ನಾಟಕದ ಹಲವು ಪ್ರದೇಶಗಳ ಜನರ ಉಸಿರಿನಲ್ಲಿಯೂ ಪ್ರಾಣವಾಯುವಿನಂತೆ ಸಂಚರಿಸುವ ಜೀವಗುಟುಕು. ಯಕ್ಷಗಾನ ಇಲ್ಲಿಯ ಜನರ ಜೀವನದ ಅವಿಭಾಜ್ಯ ಅಂಗ. ಯಕ್ಷಗಾನ ಇಲ್ಲದೆ ನಮ್ಮ ದಿನದ ದೈನಂದಿನ ಚಟುವಟಿಕೆ ಅಪೂರ್ಣ. ಜನರು ಯಕ್ಷಗಾನವನ್ನು ಅಷ್ಟು ಹೆಚ್ಚಾಗಿ ಪ್ರೀತಿಸುವಾಗ ಅಂತಹಾ ಜಾಹೀರಾತುಗಳನ್ನು ನಿರ್ಮಿಸುವಾಗ ಅವರಾದರೂ ಸ್ವಲ್ಪ ಯೋಚಿಸಬೇಕೇ ಬೇಡವೇ? ಜನರ ನಂಬಿಕೆಗಳಿಗೆ, ಭಾವನೆಗಳಿಗೆ ನೋವನ್ನುಂಟುಮಾಡುವುದು ಸರಿಯಲ್ಲ. 

(ಇದನ್ನೂ ಓದಿ: ಸಕ್ರಿಯ ತಿರುಗಾಟದಿಂದ ಹಿಂದೆ ಸರಿಯಲಿದ್ದಾರೆಯೇ ತ್ರಿಮೂರ್ತಿಗಳು?)

ಇತ್ತೀಚಿಗೆ ಫೆವಿಕಾಲ್ ಜಾಹೀರಾತನ್ನು ಎಲ್ಲರೂ ನೋಡಿರಬಹುದು. ಈ ಜಾಹೀರಾತು ಈಗ ಎಲ್ಲ ಯಕ್ಷಗಾನಪ್ರಿಯರ ಚರ್ಚೆಯ ವಸ್ತುವಾಗಿದೆ. ಆ ಜಾಹೀರಾತಿನಲ್ಲಿ ಯಕ್ಷಗಾನವನ್ನು ಹಾಸ್ಯದ ದೃಷ್ಟಿಯಿಂದ ಚಿತ್ರಿಸಲಾಗಿದೆ ಎಂದು ಜನರು ಹೇಳುತ್ತಿದ್ದಾರೆ.  

“ಅಲ್ಲದಿದ್ದರೆ ಫೆವಿಕಾಲ್ ಇಲ್ಲದೆ ಸಿಂಹಾಸನ ಬೀಳುವುದೆಂದರೇನು? ಇಡೀ ರಂಗಸ್ಥಳವೇ ಫೆವಿಕಾಲ್ ಇಲ್ಲದೆ ಕುಸಿದು ಬೀಳುವ ದೃಶ್ಯ, ವೇಷಧಾರಿ ರಂಗಸ್ಥಳದಲ್ಲಿಯೇ ಓಡಾಡುತ್ತಾ ಎಲ್ಲರನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯುವುದು ಮೊದಲಾದ ದೃಶ್ಯಗಳೆಲ್ಲಾ ಕಲೆಗೆ ಅಭಾಸ ಮತ್ತು ಅಪಚಾರ ಎಂದು ಜನರು ಭಾವಿಸುವುದರಲ್ಲಿ ತಪ್ಪೇನೂ ಇಲ್ಲ. ಫೆವಿಕಾಲ್ ಹಾಕದಿದ್ದರೆ ಸಿಂಹಾಸನ ಕುಸಿದು ಬೀಳುವುದು ಎಲ್ಲಿಯಾದರೂ ಉಂಟೆ? ಫೆವಿಕಾಲ್ ಹಾಕದಿದ್ದರೆ ರಂಗಸ್ಥಳವೇ ಭೂಕಂಪ ಬಂದಂತೆ ಅಡಿ ಮೇಲಾಗುವುದು ಸಾಧ್ಯವೇ? ಇದನ್ನೆಲ್ಲಾ ಕಂಡು ಜನರಿಗೆ ಸಿಟ್ಟು ಬಂದದ್ದರಲ್ಲಿ ತಪ್ಪೇನೂ ಕಾಣುವುದಿಲ್ಲ” ಎಂದು ಹಲವಾರು ಆಡಿಕೊಳುತ್ತಿರುವ ಮಾತು.  

(ಇದನ್ನೂ ಓದಿ: ಸಕ್ರಿಯ ತಿರುಗಾಟದಿಂದ ಹಿಂದೆ ಸರಿಯಲಿದ್ದಾರೆಯೇ ತ್ರಿಮೂರ್ತಿಗಳು?)

ಮೊದಲೇ ಹೇಳಿದಂತೆ ಯಕ್ಷಗಾನ ಇಲ್ಲಿಯ ಜನರಿಗೆ ಆರಾಧನಾ ಕಲೆ. ಜನರು ಯಕ್ಷಗಾನವನ್ನು ಪೂಜ್ಯ ಭಾವದಿಂದ ನೋಡುತ್ತಾರೆ. ಅಂತಹಾ ಪೂಜನೀಯವಾದ ಕಲೆಯ ಬಗ್ಗೆ ಶ್ರದ್ಧಾಭಕ್ತಿಯನ್ನು ಇರಿಸಿಕೊಂಡವರ ಮನಸ್ಸಿಗೆ ಸಹಜವಾಗಿಯೇ ಇದರಿಂದ ನೋವಾಗಿದೆ. ಆದುದರಿಂದ ಇಂತಹಾ ಜಾಹೀರಾತುಗಳನ್ನು ನಿರ್ಮಿಸುವ ಮೊದಲು ಸಾವಿರ ಬಾರಿ ಯೋಚಿಸಬೇಕು.  

ಇನ್ನು ಕೆಲವರು “ಇಲ್ಲಿಯೂ ಪರ ವಿರೋಧ ಅಭಿಪ್ರಾಯಗಳಿರಬಹುದು. ಆದರೆ ಇದು ನಮ್ಮೊಳಗೆಯೇ ಚರ್ಚೆ ಮಾಡುವ ವಿಷಯವಲ್ಲ. ಯಕ್ಷಗಾನದವರಾದ ನಮ್ಮಲ್ಲೇ ಕೆಲವರು ಕಲೆಯನ್ನು ವಿರೂಪಗೊಳಿಸುತ್ತಾರೆ. ಆದುದರಿಂದ ಇನ್ನೊಬ್ಬರೂ ಮಾಡಲಿ ಎಂಬ ವಾದವು ಸರಿಯಲ್ಲ. ನಾವು ತಪ್ಪು ಮಾಡಿದರೆ ಆಗಲೂ ಆಕ್ಷೇಪಿಸೋಣ. ಇನ್ನೊಬ್ಬರು ತಪ್ಪಿದರೆ ಆಗಲೂ ಎಚ್ಚರಿಸೋಣ.  ಇಂತಹದಕ್ಕೆಲ್ಲಾ ಕಡಿವಾಣ ಬೇಕು. ಇಲ್ಲದಿದ್ದರೆ ಆನೆ ನಡೆದದ್ದೇ ಹಾದಿ ಎಂಬಂತೆ ಆಗುತ್ತದೆ”. ಎಂದು ಅಭಿಪ್ರಾಯ ಪಡುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments