ಜನರ ಶ್ರದ್ಧೆ, ನಂಬಿಕೆಗಳೇ ಹಾಗೆ. ಭಾರತ ದೇಶದ ಸಂಸ್ಕೃತಿ, ಭಾಷೆ, ಆಚಾರ ವಿಚಾರಗಳು ಪರಿಸರ ಪ್ರದೇಶಗಳಿಗೆ ಹೊಂದಿಕೊಂಡು ಭಿನ್ನವಾಗಿದ್ದರೂ ಜನರ ಆಚರಣೆ, ನಂಬಿಕೆ, ಶ್ರದ್ಧೆಗಳ ವಿಚಾರಕ್ಕೆ ಬಂದಾಗ ಮತ್ತು ದೇಶದಲ್ಲಿ ಧರ್ಮ, ಸಂಸ್ಕೃತಿ, ಕಲೆಗಳಿಗೆ ಧಕ್ಕೆ ಉಂಟಾದಾಗ ಒಂದೇ ರೀತಿಯ ಅನುಸರಣೆ ಎದ್ದು ಕಾಣುವುದು ಈ ದೇಶದ ವಿಶೇಷತೆ ಹಾಗೂ ಹೆಮ್ಮೆ ಎಂದೇ ಹೇಳಬಹುದು.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ
ಅದರಲ್ಲೂ ಯಕ್ಷಗಾನ ಎಂಬುದು ನಮ್ಮ ಕರ್ನಾಟಕದ ಹಲವು ಪ್ರದೇಶಗಳ ಜನರ ಉಸಿರಿನಲ್ಲಿಯೂ ಪ್ರಾಣವಾಯುವಿನಂತೆ ಸಂಚರಿಸುವ ಜೀವಗುಟುಕು. ಯಕ್ಷಗಾನ ಇಲ್ಲಿಯ ಜನರ ಜೀವನದ ಅವಿಭಾಜ್ಯ ಅಂಗ. ಯಕ್ಷಗಾನ ಇಲ್ಲದೆ ನಮ್ಮ ದಿನದ ದೈನಂದಿನ ಚಟುವಟಿಕೆ ಅಪೂರ್ಣ. ಜನರು ಯಕ್ಷಗಾನವನ್ನು ಅಷ್ಟು ಹೆಚ್ಚಾಗಿ ಪ್ರೀತಿಸುವಾಗ ಅಂತಹಾ ಜಾಹೀರಾತುಗಳನ್ನು ನಿರ್ಮಿಸುವಾಗ ಅವರಾದರೂ ಸ್ವಲ್ಪ ಯೋಚಿಸಬೇಕೇ ಬೇಡವೇ? ಜನರ ನಂಬಿಕೆಗಳಿಗೆ, ಭಾವನೆಗಳಿಗೆ ನೋವನ್ನುಂಟುಮಾಡುವುದು ಸರಿಯಲ್ಲ.
(ಇದನ್ನೂ ಓದಿ: ಸಕ್ರಿಯ ತಿರುಗಾಟದಿಂದ ಹಿಂದೆ ಸರಿಯಲಿದ್ದಾರೆಯೇ ತ್ರಿಮೂರ್ತಿಗಳು?)
ಇತ್ತೀಚಿಗೆ ಫೆವಿಕಾಲ್ ಜಾಹೀರಾತನ್ನು ಎಲ್ಲರೂ ನೋಡಿರಬಹುದು. ಈ ಜಾಹೀರಾತು ಈಗ ಎಲ್ಲ ಯಕ್ಷಗಾನಪ್ರಿಯರ ಚರ್ಚೆಯ ವಸ್ತುವಾಗಿದೆ. ಆ ಜಾಹೀರಾತಿನಲ್ಲಿ ಯಕ್ಷಗಾನವನ್ನು ಹಾಸ್ಯದ ದೃಷ್ಟಿಯಿಂದ ಚಿತ್ರಿಸಲಾಗಿದೆ ಎಂದು ಜನರು ಹೇಳುತ್ತಿದ್ದಾರೆ.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ
“ಅಲ್ಲದಿದ್ದರೆ ಫೆವಿಕಾಲ್ ಇಲ್ಲದೆ ಸಿಂಹಾಸನ ಬೀಳುವುದೆಂದರೇನು? ಇಡೀ ರಂಗಸ್ಥಳವೇ ಫೆವಿಕಾಲ್ ಇಲ್ಲದೆ ಕುಸಿದು ಬೀಳುವ ದೃಶ್ಯ, ವೇಷಧಾರಿ ರಂಗಸ್ಥಳದಲ್ಲಿಯೇ ಓಡಾಡುತ್ತಾ ಎಲ್ಲರನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯುವುದು ಮೊದಲಾದ ದೃಶ್ಯಗಳೆಲ್ಲಾ ಕಲೆಗೆ ಅಭಾಸ ಮತ್ತು ಅಪಚಾರ ಎಂದು ಜನರು ಭಾವಿಸುವುದರಲ್ಲಿ ತಪ್ಪೇನೂ ಇಲ್ಲ. ಫೆವಿಕಾಲ್ ಹಾಕದಿದ್ದರೆ ಸಿಂಹಾಸನ ಕುಸಿದು ಬೀಳುವುದು ಎಲ್ಲಿಯಾದರೂ ಉಂಟೆ? ಫೆವಿಕಾಲ್ ಹಾಕದಿದ್ದರೆ ರಂಗಸ್ಥಳವೇ ಭೂಕಂಪ ಬಂದಂತೆ ಅಡಿ ಮೇಲಾಗುವುದು ಸಾಧ್ಯವೇ? ಇದನ್ನೆಲ್ಲಾ ಕಂಡು ಜನರಿಗೆ ಸಿಟ್ಟು ಬಂದದ್ದರಲ್ಲಿ ತಪ್ಪೇನೂ ಕಾಣುವುದಿಲ್ಲ” ಎಂದು ಹಲವಾರು ಆಡಿಕೊಳುತ್ತಿರುವ ಮಾತು.
(ಇದನ್ನೂ ಓದಿ: ಸಕ್ರಿಯ ತಿರುಗಾಟದಿಂದ ಹಿಂದೆ ಸರಿಯಲಿದ್ದಾರೆಯೇ ತ್ರಿಮೂರ್ತಿಗಳು?)
ಮೊದಲೇ ಹೇಳಿದಂತೆ ಯಕ್ಷಗಾನ ಇಲ್ಲಿಯ ಜನರಿಗೆ ಆರಾಧನಾ ಕಲೆ. ಜನರು ಯಕ್ಷಗಾನವನ್ನು ಪೂಜ್ಯ ಭಾವದಿಂದ ನೋಡುತ್ತಾರೆ. ಅಂತಹಾ ಪೂಜನೀಯವಾದ ಕಲೆಯ ಬಗ್ಗೆ ಶ್ರದ್ಧಾಭಕ್ತಿಯನ್ನು ಇರಿಸಿಕೊಂಡವರ ಮನಸ್ಸಿಗೆ ಸಹಜವಾಗಿಯೇ ಇದರಿಂದ ನೋವಾಗಿದೆ. ಆದುದರಿಂದ ಇಂತಹಾ ಜಾಹೀರಾತುಗಳನ್ನು ನಿರ್ಮಿಸುವ ಮೊದಲು ಸಾವಿರ ಬಾರಿ ಯೋಚಿಸಬೇಕು.
- ಪೇಜರ್ ಸ್ಫೋಟ ಆಯ್ತು… ಈಗ ಲೆಬನಾನ್ನಲ್ಲಿ ಹಿಜ್ಬುಲ್ಲಾ ವಾಕಿ-ಟಾಕಿಗಳು ಸ್ಫೋಟ, 3 ಸಾವು – ಇಸ್ರೇಲ್ ನ ವಿನೂತನ ಯುದ್ಧತಂತ್ರ?
- ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ಆಯ್ಕೆ
- ಸೆಪ್ಟೆಂಬರ್ 22ಕ್ಕೆ ಪಡುಬಿದ್ರಿಯಲ್ಲಿ ‘ನಾರಾಯಣ, ನರ-ನಾರಾಯಣ, ನಾಗಾಸ್ತ್ರ’ – ಅಮೋಘ ಯಕ್ಷಗಾನ ಪ್ರದರ್ಶನ
- ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಕೇಂದ್ರ ಸಮಿತಿಯ ಸಭೆ
- ಸೆಪ್ಟಂಬರ್ 28ಕ್ಕೆ ‘ವಿರಾಟಪರ್ವ’ ತಾಳಮದ್ದಳೆ – ಜಬ್ಬಾರ್, ವಾಟೆಪಡ್ಪು, ವಳಕ್ಕುಂಜ, ಕನ್ನಡಿಕಟ್ಟೆ, ಕಿರಣ್ ಕೆರೆ
ಇನ್ನು ಕೆಲವರು “ಇಲ್ಲಿಯೂ ಪರ ವಿರೋಧ ಅಭಿಪ್ರಾಯಗಳಿರಬಹುದು. ಆದರೆ ಇದು ನಮ್ಮೊಳಗೆಯೇ ಚರ್ಚೆ ಮಾಡುವ ವಿಷಯವಲ್ಲ. ಯಕ್ಷಗಾನದವರಾದ ನಮ್ಮಲ್ಲೇ ಕೆಲವರು ಕಲೆಯನ್ನು ವಿರೂಪಗೊಳಿಸುತ್ತಾರೆ. ಆದುದರಿಂದ ಇನ್ನೊಬ್ಬರೂ ಮಾಡಲಿ ಎಂಬ ವಾದವು ಸರಿಯಲ್ಲ. ನಾವು ತಪ್ಪು ಮಾಡಿದರೆ ಆಗಲೂ ಆಕ್ಷೇಪಿಸೋಣ. ಇನ್ನೊಬ್ಬರು ತಪ್ಪಿದರೆ ಆಗಲೂ ಎಚ್ಚರಿಸೋಣ. ಇಂತಹದಕ್ಕೆಲ್ಲಾ ಕಡಿವಾಣ ಬೇಕು. ಇಲ್ಲದಿದ್ದರೆ ಆನೆ ನಡೆದದ್ದೇ ಹಾದಿ ಎಂಬಂತೆ ಆಗುತ್ತದೆ”. ಎಂದು ಅಭಿಪ್ರಾಯ ಪಡುತ್ತಾರೆ.