ಕೈಗೊಂದಿಷ್ಟು ಬಿಳಿಯ ಬಣ್ಣದ ಹುಡಿ, ಅದಕ್ಕೆ ಸ್ವಲ್ಪ ಎಣ್ಣೆಯನ್ನು ಬೆರೆಸಿ ಹಿತವಾಗಿ ಕಲಸತೊಡಗಿದ ಯೋಗಾನಾಂದ. ಅದಕ್ಕೆ ಮಿತವಾಗಿ ಹಳದಿ, ಕೆಂಪು ಬಣ್ಣಗಳನ್ನೂ ಮಿಶ್ರ ಮಾಡಿ ನಿಧಾನವಾಗಿ ಅಂಗೈಯಲ್ಲಿ ತಿಕ್ಕತೊಡಗಿದ. ಕೈ ಕೆಲಸ ಮಾಡುತ್ತಿದ್ದರೂ ಮನದಲ್ಲಿ ನೂರೆಂಟು ಯೋಚನೆಗಳು. ಹುಚ್ಚು ಕುದುರೆಯಂತಿದ್ದ ಮನದ ಕಲ್ಪನೆಯ ವಿಹಾರಗಳಿಗೆ ಕಡಿವಾಣ ಹಾಕುವ ಯತ್ನದಲ್ಲಿ ಯಶಸ್ವಿಯಾಗಲಾರದೆ ಹೋದ.
ಮತ್ತೆ ಮತ್ತೆ ಅದೇ ಅಲೋಚನೆ. ಕಾಡುವ ನೆನಪುಗಳು. ಮನಸ್ಸಿನಲ್ಲಿಯ ನಾಗಾಲೋಟದ ತುಡಿತ, ಮಿಡಿತಗಳಿಗೆ ಕೊನೆಯಿಲ್ಲವೇನೋ… “ಈ ಬಣ್ಣಗಳು ಒಂದನ್ನೊಂದು ಸೇರುವಂತೆ ಎರಡು ಹೃದಯಗಳು, ಮನಸುಗಳು ಬೆಸೆಯುವಂತಿದ್ದರೆ…” ಎಂದುಕೊಂಡ ಯೋಗಾನಂದ ಮನಸ್ಸಿನಲ್ಲಿಯೇ. ತಕ್ಷಣವೇ ತನ್ನ ಆಲೋಚನೆಗೆ ತಾನೆ ನಗುತ್ತಾ ಕನ್ನಡಿಯನ್ನು ತನ್ನೆದುರಿಗೆ ಸರಿಯಾದ ಕೋನದಲ್ಲಿ ಇರಿಸಿಕೊಂಡ.
ಕೈಯಲ್ಲಿದ್ದ ಬಣ್ಣಗಳ ಮಿಶ್ರಣವನ್ನು ಎರಡೂ ಕೈಗಳಿಗೆ ಸಮವಾಗಿ ಮೆತ್ತಿ ಮುಖದ ತುಂಬೆಲ್ಲಾ ಮೆತ್ತತೊಡಗಿದ. ಕೈಗಳಲ್ಲಿದ್ದ ಬಣ್ಣದ ಚಿತ್ತಾರ ಮುಖದ ಮೇಲೇರಿತ್ತು.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಮುಖವನ್ನು ನೋಡುತ್ತಿದ್ದಂತೆ ಆತನಿಗೆ ಯಾಕೋ ಹಿಂದಿನ ದಿನದ ಸಂಜೆಯ ನೆನಪು ಕಾಡತೊಡಗಿತು. ಆಗಸದಂಚಿನಲ್ಲಿ ರವಿಯ ನಿರ್ಗಮನದ ವೇಳೆಯ ಚಿತ್ತಾರದ ವರ್ಣಾಲಂಕಾರ. ತನ್ನ ಮುಖದ ಬಣ್ಣವೂ ಅದೇ ರೀತಿಯಿದೆಯೆಂದು ಭಾವಿಸಿದ. ಏನೋ ಆ ದಿನದ ನೆನಪಾದೊಡನೆ ಆತನು ತನ್ನ ನಸುನಗೆಯನ್ನು ತಡೆದುಕೊಳ್ಳದಾದ. ಪಕ್ಕನೆ ತಾನಿರುವ ಜಾಗದ ನೆನಪಾಗಿ ನಗೆಯನ್ನು ಬಲವಂತವಾಗಿ ತಡೆದುಕೊಂಡ. ಮೆಲ್ಲಗೆ ಸುತ್ತಲೂ ನೋಡಿದ. ಎಲ್ಲರೂ ತಮ್ಮ ತಮ್ಮ ಕಾರ್ಯಗಳಲ್ಲಿ ಮಗ್ನರಾಗಿದ್ದರು.
ಕಲಾವಿದರೆಲ್ಲರು ಚೌಕಿಗೆ ಇನ್ನೂ ಬಂದಿರಲಿಲ್ಲ. ಕೆಲವರು ಯೋಗಾನಂದನಂತೆಯೇ ಬಣ್ಣ ಹಚ್ಚುವುದರಲ್ಲಿಯೇ ನಿರತರಾಗಿದ್ದರು. ಇನ್ನುಳಿದ ಕಲಾವಿದರಲ್ಲಿ ಕೆಲವರು ವೇಷಭೂಷಣಗಳನ್ನು ಕಟ್ಟಿಕೊಳ್ಳುತ್ತಿದ್ದರು. ಚೌಕಿ ಮನೆಯ ಸಹಾಯಕರು ಅವರಿಗೆ ಆ ಕಾರ್ಯದಲ್ಲಿ ನೆರವಾಗುತ್ತಿದ್ದರು. ಒಂದೆರಡು ಜನರು ವೀಳ್ಯ ಹಾಕುವುದರಲ್ಲಿಯೋ ಮಿಕ್ಕುಳಿದವರಲ್ಲಿ ಕೆಲವರು ತಮ್ಮ ಅಭಿಮಾನೀ ವರ್ಗದವರಲ್ಲಿಯೋ, ಸ್ನೇಹಿತ ಬಂಧುವರ್ಗದಲ್ಲಿಯೋ ಸಲ್ಲಾಪದಲ್ಲಿ ಮಗ್ನರಾಗಿದ್ದರು. ಆದ್ದರಿಂದ ತನ್ನ ಭಾವನೆಗಳನ್ನು ಯಾರೂ ಗಮನಿಸಿರಲಿಕ್ಕಿಲ್ಲ ಎಂದು ಸಮಾಧಾನಪಟ್ಟುಕೊಂಡ.
ಯೋಗಾನಂದ ಕನ್ನಡಿಯಲ್ಲೊಮ್ಮೆ ತನ್ನ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದ. ಯಾಕೋ ಬಣ್ಣಗಳ ಮಿಶ್ರಣ ಪರಿಪೂರ್ಣವಾಗಿಲ್ಲ ಎಂದೆನಿಸಿತು. ಏನೋ ಎಂದು ಕೊರತೆ ಅವನ ಸೂಕ್ಷ್ಮ ದೃಷ್ಟಿಗೆ ಗೋಚರಿಸಿತು. ಬಣ್ಣಗಳೂ ಮನಸಿನಂತೆಯೇ ಇರಬಹುದೇ ಎಂದು ಅಲೋಚಿಸಿದ. “ಹೂಂ.. ಇರಲಿ..” ಎಂದುಕೊಂಡು ಕಾಡಿಗೆಯನ್ನು ಸಣ್ಣ ಕಡ್ಡಿಯಿಂದ ತೆಗೆದು ಹೆಬ್ಬೆರೆಳಿನ ಬುಡದ ಸಮೀಪ ಸಂಗ್ರಹಿಸಿ ನಿಧಾನವಾಗಿ ಹುಬ್ಬಿನ ಚಿತ್ರವನ್ನು ಬರೆಯತೊಡಗಿದ.
ಅಷ್ಟರಲ್ಲಿ ಚೌಕಿಪೂಜೆ ಪ್ರಾರಂಭವಾಯಿತು. ಎಲ್ಲರೂ ಎದ್ದು ನಿಂತುಕೊಂಡರು. ಯೋಗಾನಂದ ಕೂಡಾ. “ಗಜಮುಖದವಗೆ ಗಣಪಗೆ… “ ಭಾಗವತರು ಗಣಪತಿಯ ಸ್ತುತಿಯ ಪದ್ಯವನ್ನು ಹಾಡುತ್ತಿದ್ದರು. ಪರಮ ದೈವಭಕ್ತನಾದ ಆತನಿಗೆ ಇಂದೇಕೋ ಚೌಕಿಪೂಜೆಯ ಸಮಯದಲ್ಲಿಯೂ ಮನಸ್ಸು ಸ್ಥಿಮಿತದಲ್ಲಿರಲಿಲ್ಲ. ಏಕಾಗ್ರತೆಯಿಲ್ಲದ ಮನಸ್ಸು ದೇವರ ಪೂಜೆಯ ಮೇಲಿರದೆ ಬೇರೆಲ್ಲಿಯೋ ಓಡಾಡುತ್ತಿತ್ತು.

ಚೌಕಿಪೂಜೆ ಮುಗಿದ ನಂತರ ಮತ್ತೆ ತನ್ನ ಮುಖವರ್ಣಿಕೆಯ ಚಿತ್ರವನ್ನು ಬರೆಯತೊಡಗಿದ ಆತ. ಅವನದು ಪ್ರಧಾನ ಸ್ತ್ರೀ ಪಾತ್ರವಾದುದರಿಂದ ಬಹಳ ಶ್ರದ್ಧೆಯಿಂದ ಶೃಂಗರಿಸುತ್ತಿದ್ದ. ಅದರಲ್ಲೂ ಸ್ತ್ರೀ ಪಾತ್ರದ ಮೇಕಪ್ ಅಂದರೆ ಕೇಳಬೇಕೆ ? ಸ್ತ್ರೀಯರ ರೂಪದ ಬೆಡಗು ಬಿನ್ನಾಣಗಳನ್ನು ಬರಿಯ ಭಾವನೆಯಲ್ಲಿ ತೋರಿಸಿದರೆ ಸಾಕಾಗುತ್ತಿರಲಿಲ್ಲ. ಅಲಂಕಾರದಲ್ಲಿಯೂ ವಿಶೇಷ ಆಸ್ಥೆಯನ್ನು ವಹಿಸಬೇಕಾಗುತ್ತಿತ್ತು. ಆದ್ದರಿಂದ ತನ್ನ ಮನಸಿನ ತುಮುಲಗಳಿಗೆ ಕಡಿವಾಣ ಹಾಕಿ ಹುಬ್ಬಿನ ಚಿತ್ರವನ್ನು ಬರೆಯತೊಡಗಿದ.
ಕವಿಗಳು ಕಾವ್ಯಮಯವಾಗಿ ಹೆಣ್ಣನ್ನು ವರ್ಣಿಸುವಾಗ ಹುಬ್ಬನ್ನು ಕಾಮನಬಿಲ್ಲಿಗೆ ಹೋಲಿಸುತ್ತಾರೆ. ತಾನು ಬರೆದ ಹುಬ್ಬು ಕಾಮನಬಿಲ್ಲಿನ ಹಾಗಿತ್ತು ಎಂದು ಅವಳೊಮ್ಮೆ ಹೇಳಿದ್ದು ಆತನಿಗೆ ನೆನಪಾಗಿ ಮುಖದಲ್ಲಿ ಅತೀವ ಸಂತಸದ ಕ್ಷಣವೊಂದು ಮಿಂಚಿ ಮರೆಯಾಯಿತು. ಆದರೂ ಅವಳ ಹುಬ್ಬಿನಂತೆ ತಾನು ಹುಬ್ಬಿನ ಚಿತ್ರವನ್ನು ಬರೆಯಲಾರೆ ಎಂದು ಭಾವಿಸಿದ. ಹುಬ್ಬಿನ ಚಿತ್ರದ ತಲ್ಲೀನತೆಯಲ್ಲಿರುವಾಗ ಕಾಡುತ್ತಿರುವ ಬೆಂಬಿಡದ ಆಲೋಚನೆಗಳು ಆತನ ಕಾರ್ಯದಲ್ಲಿ ಭಗ್ನವನ್ನುಂಟುಮಾಡಿತು. ಬರೆದ ಹುಬ್ಬಿನ ಚಿತ್ರ ಕಾಮನಬಿಲ್ಲಿನ ಬದಲು ವಕ್ರರೇಖೆಯಾಯಿತು. ಅದನ್ನು ಪಕ್ಕದಲ್ಲಿದ್ದ ಹಳೆಯ ವಸ್ತ್ರದ ತುಂಡಿನಿಂದ ಒರೆಸಿ ಪುನಃ ಕಾಮನಬಿಲ್ಲಿನ ಚಿತ್ರದ ತಯಾರಿಯಲ್ಲಿ ತೊಡಗಿದ.
ರಂಗಸ್ಥಳದಲ್ಲಿ ಪೂರ್ವರಂಗದ ಪದ್ಯಗಳು ಚೌಕಿಯಲ್ಲಿರುವವರ ಕಿವಿಗೆ ಅಪ್ಪಳಿಸುತ್ತಿದ್ದುವು. ಪೀಠಿಕೆ ವೇಷಧಾರಿಗಳು ಲಗುಬಗನೆ ತಮ್ಮ ಬಣ್ಣಗಾರಿಕೆ, ಉಡುಪು, ವೇಷಗಳನ್ನು ಕಟ್ಟುವುದರಲ್ಲಿ ನಿರತರಾಗಿದ್ದರು. ಯೋಗಾನಂದನದು ಪೀಠಿಕೆ ಒಡ್ಡೋಲಗದ ನಂತರದ ಪಾತ್ರವಾದ್ದರಿಂದ ಆತನೇನೂ ಅವಸರಿಸುವುದಕ್ಕೆ ಹೋಗಲಿಲ್ಲ. ಅವಸರಿಸುವುದಕ್ಕೆ ಉಕ್ಕಿ ಹರಿಯುತ್ತಿರುವ ಅಲೋಚನೆಗಳು ಬಿಡಲೂ ಇಲ್ಲ.
ಅಂತೂ ಇಂತೂ ಹುಬ್ಬಿನ ಚಿತ್ರ ಪೂರ್ತಿಯಾಯಿತು. ಚಿತ್ರ ಪೂರ್ಣ ತೃಪ್ತಿ ತಂದಿರದಿದ್ದರೂ ಮತ್ತೆ ಅದನ್ನು ತಿದ್ದುವುದಕ್ಕೆ ಮನಮಾಡಲಿಲ್ಲ ಆತ.

ಮುಖದ ಮೇಕಪ್ನ ಅಂತಿಮ ಘಟ್ಟಕ್ಕೆ ತಲುಪಿದ. ಕಡುಗೆಂಪು ಬಣ್ಣವನ್ನು ತುಟಿಗೆ ಹಚ್ಚಲು ತಯಾರಿ ನಡೆಸಿದ. ಅದಕ್ಕಿಂತ ಮೊದಲು ಹುಡುಗಿಯರ ತುಟಿಗಳ ಆಕಾರವನ್ನು ರೇಖೆಯಲ್ಲಿ ಮೂಡಿಸಿದ. ಬಣ್ಣಗಳ ಕಂಪು ತುಟಿಗಳ ಕೆಂಪಿನಲ್ಲಿ ಪಸರತೊಡಗಿತು. ಅಷ್ಟರಲ್ಲಿ ಭಾಗವತರು “ ಚಿಕ್ಕ ಪ್ರಾಯದ ಬಾಲೆ ಚದುರೆ ನಿನ್ನಂಗವ ಒರೆಯಲೇನೆ… “ ಎಂದು ಹಾಡತೊಡಗಿದರು. ತನ್ನನ್ನೇ ಉದ್ದೇಶಿಸಿ ವ್ಯಂಗ್ಯವಾಗಿ ಭಾಗವತರು ಹಾಡುತ್ತಿರಬಹುದು ಎಂದು ಆಲೋಚಿಸಿ, ಛೇ.. ತಾನೇಕೆ ಇಂದು ಏನೇನೋ ಅಂದುಕೊಳ್ಳುತ್ತಿದ್ದೇನೆ ಎಂದು ತನ್ನನ್ನು ತಾನೇ ಶಪಿಸಿಕೊಂಡ.
ಆದರೂ ನೆನಪುಗಳ ಸರಮಾಲೆ ಹಿಂಬಾಲಿಸುವುದನ್ನು ಬಿಡಲಿಲ್ಲ. “ಅವಳು ಇಂದಾದರೂ ಬಂದಿರಬಹುದೆ ? ಎಂದಿನಂತೆ ಇಂದೂ ಕೂಡಾ ಮುಂದಿನ ಸಾಲಿನಲ್ಲೇ ಕುಳಿತುಕೊಂಡಿರಬಹುದೆ ? “ ಎಂದು ಆಲೋಚಿಸಿದ. ಬಹುಶಃ ಬಂದಿರಲಿಕ್ಕಿಲ್ಲ. ಬಂದರೆ ಚೌಕಿಗೆ ಬರದಿರುವಳೇ? ಬಂದು ತನ್ನ ವೇಷದ ಪೆಟ್ಟಿಗೆಯಲ್ಲಿ ಕುಳಿತು ನಿರರ್ಗಳವಾಗಿ ಹರಟದಿರುವಳೇ? ಖಂಡಿತಾ ಬಂದಿರಲಿಕ್ಕಿಲ್ಲ. ನಿನ್ನೆ ಕೂಡಾ ಬಂದಿರಲಿಲ್ಲ. ಅವಳ ಮುನಿಸನ್ನು ತಣಿಸುವ ಬಗೆ ಹೇಗೆ ? ಜೀವಕ್ಕೆ ಜೀವದಂತಿರುವ ಅವಳ ಮುನಿಸನ್ನು ಅವನಿಂದ ಅರಗಿಸಿಕೊಳ್ಳಲಾಗಲಿಲ್ಲ.
ಸಾಧಾರಣವಾಗಿ ಮನೆಯ ಸಮೀಪ ಎಲ್ಲಿ ಇವನ ಮೇಳದ ಆಟವಿದ್ದರೂ ಅವಳು ತಪ್ಪದೇ ಹಾಜರಾಗುತ್ತಿದ್ದಳು. ಅದು ಕೂಡಾ ಮುಂದಿನ ಸಾಲಿನಲ್ಲೇ ಆಸೀನಳಾಗುತ್ತಿದ್ದಳು.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಇವನದು ಯಾವಾಗಲೂ ಸ್ತ್ರೀಪಾತ್ರವಾದುದರಿಂದ ಇವನ ಪಾತ್ರದ ಒಳ್ಳೆಯ ವಿಮರ್ಶಕಿಯಾಗಿದ್ದಳು ಆತ. ಸ್ತ್ರೀ ಸಹಜವಾದ ಒನಪು ವಯ್ಯಾರಗಳು ಹಾಗೂ ಸ್ತ್ರೀಯ ಆಂಗಿಕ ಅಭಿನಯ ಹೇಗಿರಬೇಕು ಎಂಬುದರ ಬಗ್ಗೆ ಆತನಿಗೆ ಹಲವು ಮಾಹಿತಿಯನ್ನು ಕೊಡುವ ಗುರುವೂ ಆಗಿದ್ದಳವಳು. ಅಂತಹ ಅವಳು ಇಂದು ಯಾಕಿಲ್ಲ, ಮತ್ರವಲ್ಲ ನಿನ್ನೆ ಯಾಕೆ ಬರಲಿಲ್ಲ. ಈಚೆಗೆ ಎರಡು ಮೂರು ದಿನಗಳಿಂದ ಮನೆಯ ಹತ್ತಿರದ ಊರುಗಳಲ್ಲೇ ಬಯಲಾಟ ನಡೆಯುತ್ತಿದ್ದುದರಿಂದ ಆಕೆ ಬರಲೇ ಬೇಕಿತ್ತು. ಅದರೆ ಬರಲಿಲ್ಲ. ಮೊನ್ನೆಯ ಹುಸಿಮುನಿಸೇ ಕಾರಣವಾಗಿತ್ತೇ.
ಛೇ. ಎಂತಹ ಅಭಾಸವಾಯ್ತು ಎಂದುಕೊಂಡ ಯೋಗಾನಂದ. ಹೃದಯಕ್ಕೆ ಹತ್ತಿರಳಾದವಳನ್ನು ತಾನು ಮೊನ್ನೆ ತಮಾಷೆಗಾಗಿ ರೇಗಿಸಲು ಹೋಗಬಾರದಿತ್ತು. ಆದರೂ ಅದನ್ನು ಆಕೆ ಇಷ್ಟು ಗಂಭೀರವಾಗಿ ತೆಗೆದುಕೊಳ್ಳುವಳೆಂದು ಎಣಿಸಿರಲಿಲ್ಲ. ಮನಸ್ಸು ಮೊನ್ನೆ ನಡೆದ ಘಟನೆಯ ಬಗ್ಗೆ ಮೆಲುಕು ಹಾಕತೊಡಗಿತು.
* * *
“ನಿನ್ನೆಯ ನನ್ನ ವೇಷ ಹೇಗಿತ್ತು.” ಎಂದ ಯೋಗಾನಂದ.
“ಪರವಾಗಿಲ್ಲ.. ಚೆನ್ನಾಗಿತ್ತು” ಆಕೆಯೆಂದಳು.
“ಆದರೂ ಇನ್ನೂ ಚೆನ್ನಾಗಿ ಮಾಡಬಹುದಿತ್ತೇನೋ, ಅಲ್ವಾ?”
“ಅದು ಹೌದು, ಅಭಿನಯ ಚೆನ್ನಾಗಿತ್ತು… ನಿನಗೆ ಹಾಗನಿಸುವುದು ಸಹಜ, ಕಲಾವಿದ ಯವತ್ತೂ ಪರಿಪೂರ್ಣ ಆಗುವುದಿಲ್ಲ, ಹಾಗೆ ಭಾವಿಸಲೂ ಬಾರದು ಅಂತ ನೀನು ಹೇಳುತ್ತಿದ್ದೆಯಲ್ಲ, ಅದಕ್ಕೆ ಈ ಮಾತು ಅಲ್ವಾ?”
“ಮೇಕಪ್ ಹೇಗಿತ್ತು?”
“ಸುಪರ್.. ನಾನು ಹೇಳಿಕೊಟ್ಟದ್ದಲ್ವಾ… ಚೆನ್ನಾಗಿಲ್ಲದೆ ಇದ್ದೀತೇ ?”
“ಯಾವುದು ನೀನು ಹೇಳಿಕೊಟ್ಟದ್ದು?”
“ಅದೇ, ಮುಖದ ಹುಬ್ಬಿನ ಚಿತ್ರ, ಮುಖದ ಭಾವ, ಚಲನೆ ಇತ್ಯಾದಿ..”
ಯೋಗಾನಂದನಿಗೆ ಅವಳನ್ನು ರೇಗಿಸುವ ಮನಸ್ಸಾಯಿತು. ಅದಕ್ಕಾಗಿ ಕೋಪವನ್ನು ನಟಿಸುತ್ತಾ,
“ಏ ಹೋಗೇ.. ನಾನು ಅಭಿನಯ ಮತ್ತು ಬಣ್ಣಗಾರಿಕೆಯನ್ನು ನಮ್ಮ ಗುರುಗಳಲ್ಲಿ ಕಲಿತದ್ದು.. ನೀನೆಂತದ್ದು ಕಲಿಸುವುದು, ಯಕ್ಷಗಾನದ ಗಂಧ, ಗಾಳಿ ಗೊತ್ತಿಲ್ಲದವಳು..” ಎಂದ.
ಅವಳು ಪೆಚ್ಚಾದಳು. ಅವನು ಗಂಭೀರವಾಗಿ ಹೇಳಿದ್ದು ಎಂದು ಭಾವಿಸಿದಳು. ಯಾಕೆಂದರೆ ಈ ವರೆಗೆ ಆತನು ಅವಳನ್ನು ಹೀಗೆ ರೇಗಿಸಿದವನೇ ಅಲ್ಲ.
“ಆಯ್ತು ಬಿಡೋ, ನೀನೇ ಹೇಳ್ತಿದ್ದೆಯಲ್ಲ, ರಂಗಸ್ಥಳದಲ್ಲಿ… ನಾವು ಹತ್ತಿದ ಏಣಿಯನ್ನು ಯವತ್ತೂ ಮರೆಯಬಾರದು, ಹತ್ತಿದ ಏಣಿಯನ್ನು ಕಾಲಿಂದ ಒದ್ದರೆ ಮತ್ತೆ ಇಳಿಯುವುದಕ್ಕೆ ಬೇಕಾಗುತ್ತದೆ… ಹಾಗೆ, ಹೀಗೆ ಅಂತ. ಈಗ ನೋಡಿದರೆ ಅದಕ್ಕೆ ತದ್ವಿರುದ್ಧ.”
“ನಾವು ರಂಗಸ್ಥಳದಲ್ಲಿ ಬಹಳಷ್ಟು ಹೇಳ್ತೇವೆ , ಅದನ್ನೆಲ್ಲಾ ನಿಜ ಜೀವನದಲ್ಲಿ ಮಾಡೋಕೆ ಆಗೋಲ್ಲಮ್ಮಾ…”
“ಇರಬಹುದು.. ಆದರೆ ಈಗ ಹೇಳಿದಂತಹ ವಿಷಯಗಳು ನಿಜ ಜೀವನದಲ್ಲಿಯೂ ಅನ್ವಯವಾಗುತ್ತದೆ. ಅದನ್ನೂ ಪಾಲಿಸುವ ಹೊಣೆಗಾರಿಕೆ ನಿಮ್ಮಂತಹಾ ಕಲಾವಿದರಿಗಿದೆ..” ಎಂದು ಕೋಪದಿಂದ ಬಿರಬಿರನೆ ನಡೆದವಳು ಮತ್ತೆ ಕಾಣಸಿಗಲಿಲ್ಲ.
ಯೋಗಾನಂದ ಪೆಚ್ಚಾದ. ಏನೋ ತಮಾಷೆ ಮಾಡಲು ಹೋಗಿ ಅವಳು ಇಷ್ಟು ಬೇಗ ಗಂಭೀರವಾಗಿ ತೆಗೆದುಕೊಳ್ಳುತ್ತಾಳೆ ಎಂದು ಭಾವಿಸಿರಲಿಲ್ಲ. ಅವಳು ಹೇಳಿದುದು ನಿಜವಾಗಿತ್ತು. ಯೋಗಾನಂದ ಅವಳಿಂದ ಬಹಳಷ್ಟು ಕಲಿತಿದ್ದ. ತನ್ನ ವೃತ್ತಿಜೀವನಕ್ಕೆ ಉಪಯೋಗವಾಗುವಂತಹಾ ಹಲವು ವಿಷಯಗಳು ಅವಳಿಂದ ಅವನಿಗೆ ದೊರಕಿತ್ತು. ತನ್ನಿಂದ ಕಿರಿಯವಳಾದರೂ ವಿದ್ಯಾವಂತೆ, ಹಾಗೂ ಬಹಳಷ್ಟು ಸೂಕ್ಷ್ಮಗ್ರಾಹಿಯಾಗಿದ್ದಳವಳು. ಏನೋ ಅವಳನ್ನು ಕೆಣಕುವ ಆಸೆಯಿಂದ ಅವಳ ಕೋಪಕ್ಕೆ ಗುರಿಯಾದೆನಲ್ಲ ಎಂದು ಹಪಹಪಿಸಿದ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
* * *
“ಧರಣಿಪಾಲಕ ಕೇಳು……” ಭಾಗವತರು ನಿಧಾನ ಝಂಪೆ ತಾಳದಲ್ಲಿ ಹಾಡಲು ಪ್ರಾರಂಭಿಸಿದ್ದರು. ಫಕ್ಕನೆ ಯೊಗಾನಂದನ ಯೋಚನಾಸರಣಿ ತುಂಡಾಯಿತು. ಹೋ.. ತನ್ನ ಪ್ರವೇಶಕ್ಕೆ ಸಮಯವಾಯಿತು. ಲಗುಬಗನೆ ಎದ್ದು ಸೀರೆ ಅಭರಣಗಳನ್ನು ತೆಗೆದು ಒಂದೊಂದಾಗಿ ಧರಿಸಲು ಆರಂಭಿಸಿದ.
ಯಾಕೋ ಎಂದಿನ ಉಲ್ಲಾಸ ಇಂದಿರಲಿಲ್ಲ. ಯಾಂತ್ರಿಕವಾಗಿ ತನ್ನ ವೇಷಭೂಷಣಗಳನ್ನು ಧರಿಸಿಕೊಂಡ ಆತ ಪ್ರವೇಶಕ್ಕೆ ತಯಾರಾಗಿ ರಂಗಸ್ಥಳದ ಹಿಂಭಾಗದಲ್ಲಿ ನಿಂತ. ರಂಗದಲ್ಲಿದ್ದ ಪಾತ್ರಗಳೆಲ್ಲಾ ತಮ್ಮ ಪಾತ್ರದ ಒಂದು ಭಾಗವನ್ನು ಮುಗಿಸಿ ಪುನಃ ಚೌಕಿಗೆ ಮರಳಿದರು. ಭಾಗವತರ ಸೂಚನೆಯಂತೆ ಚಕ್ರತಾಳ ವಾದಕರು ರಂಗಸ್ಥಳದ ಪರದೆಯನ್ನು ಸರಿಸಿ ಮುಂದಿನ ಪಾತ್ರಧಾರಿ ಪ್ರವೇಶಕ್ಕೆ ಅನುವಾಗಿದ್ದಾರೆಯೇ ಎಂದು ಯೋಗಾನಂದ ನಿಂತುರುವುದನ್ನು ಖಚಿತಪಡಿಸಿಕೋಡರು.
ಭಾಗವತರು ಮುಂದಿನ ಪದ್ಯ ತೆಗೆದರು.. ತಮ್ಮ ಜಾಗಟೆಗೆ ಒಂದೆರಡು ಬಾರಿ ಟಕ.. ಟಕ ಎಂದು ಬಡಿದರು. ಅದು ಯೋಗಾನಂದನ ಪ್ರವೇಶಕ್ಕೆ ಸೂಚನೆ. ಎಂದಿನ ಲವಲವಿಕೆಯಿಂದ ಕೂಡಿರದ ಯೋಗಾನಂದನ ಅಂದಿನ ಪ್ರವೇಶ ಸ್ವತಃ ಆತನಿಗೆ ಅಭಾಸವೆಂದು ಅನಿಸಿತು. ಇವನೇಕೆ ಇಂದು ಹೀಗೆ ಎಂದು ಭಾಗವತರು ಪ್ರಶ್ನಾರ್ಥಕವಾಗಿ ಚೆಂಡೆ ಮದ್ದಳೆಗಾರರ ಮುಖ ನೋಡಿದರು. ಅವರು ಗೊತ್ತಿಲ್ಲವೆಂದು ತಲೆಯಾಡಿಸಿದರು.
ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಯೋಗಾನಂದನ ದೃಷ್ಟಿ ಮಾತ್ರ ಸಭಿಕರ ಮುಂದಿನ ಸಾಲಿನಲ್ಲಿತ್ತು.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಇಂದಾದರೂ ಅವಳು ಬಂದಿರಬಹುದು ಎಂಬ ಅಶಾಭಾವನೆ ಅವನಲ್ಲಿತ್ತು. ಅದರೆ ಅದು ಸುಳ್ಳಾಯಿತು. ಅವಳು ಇಂದೂ ಬಂದಿರಲಿಲ್ಲ. ಯಾಕೋ ರಂಗದಲ್ಲಿ ನರ್ತಿಸುವ ಉತ್ಸಾಹ ಚೈತನ್ಯಗಳಿರಲಿಲ್ಲ. ತನ್ನ ಪ್ರಾಣವಗಿದ್ದಳವಳು. ತನ್ನ ಜೀವದ ಜೀವವಾಗಿದ್ದಳು. ತನ್ನ ಮಾತುಗಳಿಗೆ ಕೋಪಿಸಿ ಬರದೆ ಉಳಿದಳಲ್ಲ. ಯಾಂತ್ರಿಕವಾಗಿ ಪಾತ್ರ ನಿರ್ವಹಿಸುತ್ತಿದ್ದವನನ್ನು ಭಾಗವತರು ಹಲವಾರು ಬಾರಿ ಎಚ್ಚರಿಸಬೇಕಾಯಿತು.
ಅಂತೂ ಇಂತೂ ತನ್ನ ಪಾತ್ರದ ಪ್ರಥಮ ಭಾಗವನ್ನು ನಿರ್ವಹಿಸಿ ಚೌಕಿಗೆ ಬಂದು ತನ್ನ ಸ್ಥಾನದತ್ತ ನಡೆಯುತ್ತಿದ್ದವನಿಗೆ ಅಚ್ಚರಿಯೋ ಅಚ್ಚರಿ..! ಅವಳಲ್ಲಿ… ನನ್ನ ಮನೋವ್ಯಾಕುಲಕ್ಕೆ ಕಾರಣಳಾದವಳು… ತನ್ನ ಪೆಟ್ಟಿಗೆಯ ಮೇಲೆ ಕುಳಿತು ಮಂದಹಾಸ ಬೀರುತ್ತಿದ್ದಳು.
ಅವಳ ಮುಖದಲ್ಲಿ ತುಂಟ ನಸುನಗೆ. ಅವನಿಗೆ ಸಂತೋಷವೇ ಸಂತೋಷ. ಎಲ್ಲವೂ ಮರೆತುಹೋಯಿತು.
ನಿನ್ನೆ ಯಾಕೆ ಬರಲಿಲ್ಲ ಎಂದು ಅಕ್ಕರೆಯಿಂದ ವಿಚಾರಿಸಿದ. ಅವಳು ಕಾರಣ ಹೇಳಿದಳು. ‘ಹೋ.. ಹಾಗಾ..’ ಎಂದುಕೊಂಡ. ಅವಳಿಗೂ ಮುನಿಸೆಲ್ಲವೂ ದೂರವಾಯಿತು. ಇಬ್ಬರೂ ನಕ್ಕರು. ಆ ಕಡೆಯಿಂದ ಬರುತ್ತಿದ್ದ ಮದ್ದಳೆಗಾರರು
“ಏನು ಅಣ್ಣ ತಂಗಿ ಇಬ್ಬರೂ ನಗುತ್ತಿದ್ದೀರಿ…? ಏನು ವಿಶೇಷ ?” ಎಂದರು ಅವರೂ ನಗುವಿನಲ್ಲಿ ಭಾಗಿಯಾಗುತ್ತಾ.
ಅವರ ಮಾತು ಕೇಳಿ ಅಣ್ಣ ಮತ್ತು ತಂಗಿ ಇಬ್ಬರೂ ಮತ್ತೊಮ್ಮೆ ಜೋರಾಗಿ ನಕ್ಕರು. ಮದ್ದಳೆಗಾರರೂ ನಕ್ಕರು.
ಕಥೆ: – ಮನಮೋಹನ್. ವಿ. ಎಸ್