Friday, September 20, 2024
Homeಸಂಗೀತವಯಲಿನ್ ದಂತಕಥೆ  ಪದ್ಮಭೂಷಣ ಟಿ. ಎನ್. ಕೃಷ್ಣನ್ ಇನ್ನಿಲ್ಲ (Violinist T.N. Krishnan no more)

ವಯಲಿನ್ ದಂತಕಥೆ  ಪದ್ಮಭೂಷಣ ಟಿ. ಎನ್. ಕೃಷ್ಣನ್ ಇನ್ನಿಲ್ಲ (Violinist T.N. Krishnan no more)

ಜನಪ್ರಿಯ ಜನಪ್ರಿಯ ಪಿಟೀಲು (ವಯಲಿನ್) ವಾದಕ ಪದ್ಮಭೂಷಣ ಟಿ. ಎನ್. ಕೃಷ್ಣನ್ ನಿಧನರಾಗಿದ್ದಾರೆ.  ಅವರಿಗೆ 92 ವರ್ಷ ವಯಸ್ಸಾಗಿತ್ತು.

1928ರ ಅಕ್ಟೋಬರ್ 6ರಂದು  ಕೇರಳದ ತ್ರಿಪುಣಿತ್ತರದಲ್ಲಿ ಜನಿಸಿದ್ದ ಟಿ. ಎನ್. ಕೃಷ್ಣನ್ ಅವರ ತಂದೆ ಪ್ರಸಿದ್ಧ ಸಂಗೀತಗಾರ  ನಾರಾಯಣ ಅಯ್ಯರ್ ಮತ್ತು ತಾಯಿ ಅಮ್ಮಿಣಿ ಅಮ್ಮಾಳ್. ಸಂಗೀತದ ಆರಂಭಿಕ ಪಾಠವನ್ನು ತಂದೆಯಿಂದಲೇ ಅಭ್ಯಾಸ ಮಾಡಿದ್ದರು.

ಆಮೇಲೆ ಹೆಚ್ಚಿನ ಕಲಿಕೆಯನ್ನು ಕೆ. ಪಾರ್ಥಸಾರಥಿ ಅಲೆಪ್ಪಿ, ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಚೆಮ್ಮಂಗುಡಿ ಶ್ರೀನಿವಾಸ ಅಯ್ಯಂಗಾರ್ ಮೊದಲಾದವರ ಬಳಿ ಮಾಡಿದ್ದರು. ಪದ್ಮಭೂಷಣ ಟಿ. ಎನ್. ಕೃಷ್ಣನ್ ಹಿಂದಿನ ತಲೆಮಾರುಗಳ ಕರ್ನಾಟಕ ಸಂಗೀತದ ದಂತಕಥೆಗಳಾಗಿದ್ದ ಹಲವಾರು ಸಂಗೀತಗಾರರೊಂದಿಗೆ ಪ್ರದರ್ಶನ ನೀಡಿದ್ದರು.

ಜಾಹೀರಾತು 

ಅರಿಯಕುಡಿ ರಾಮಾನುಜ ಅಯ್ಯಂಗಾರ್, ಅಲತೂರ್ ಬ್ರದರ್ಸ್, ಚೆಂಬೈ ವೈದ್ಯನಾಥ ಭಾಗವತರ್, ಎಂಡಿ ರಾಮನಾಥನ್ ಮತ್ತು ಮಹಾರಾಜಪುರಂ ವಿಶ್ವನಾಥ ಅಯ್ಯರ್ ಅವರೊಂದಿಗೆ ಟಿ. ಎನ್. ಕೃಷ್ಣನ್ ಅವರು ಅತ್ಯುತ್ತಮ  ಪ್ರದರ್ಶನಗಳನ್ನು ನೀಡಿದ್ದರು. ಅವರ ವಯಲಿನ್ ಕಚೇರಿಯ ವಿಡಿಯೋ ಕೆಳಗಡೆ ಇದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments