Wednesday, May 6, 2026
Homeಯಕ್ಷಗಾನಗಣೇಶ ಕೊಲೆಕಾಡಿಗೆ 'ರಂಗ ಭಾಸ್ಕರ ಪ್ರಶಸ್ತಿ'

ಗಣೇಶ ಕೊಲೆಕಾಡಿಗೆ ‘ರಂಗ ಭಾಸ್ಕರ ಪ್ರಶಸ್ತಿ’

ದಿ| ಭಾಸ್ಕರ ನೆಲ್ಲಿತೀರ್ಥ ಅವರ ಸವಿ ನೆನಪಿಗಾಗಿ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇವರು ನೀಡುತ್ತಾ ಬರುತ್ತಿರುವ ‘ರಂಗ ಭಾಸ್ಕರ ಪ್ರಶಸ್ತಿ’ಗೆ ಈ ಬಾರಿ ಖ್ಯಾತ ಯಕ್ಷಗಾನ ಛಂದಸ್ಸು ವಿದ್ವಾಂಸ ಗಣೇಶ ಕೊಲೆಕಾಡಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ ಮತ್ತು ನಗದನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು ಅಕ್ಟೊಬರ್ 17ರಂದು ಕೊಲೆಕಾಡಿಯಲ್ಲಿರುವ ಗಣೇಶ ಕೊಲೆಕಾಡಿಯವರ ಸ್ವಗೃಹದಲ್ಲಿ ನೀಡಲಾಗುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. ಆಯ್ಕೆ ಸಮಿತಿಯಲ್ಲಿದ್ದ ಡಾ. ನಾ. ದಾಮೋದರ ಶೆಟ್ಟಿ, ಮೀನಾಕ್ಷಿ ರಾಮಚಂದ್ರ ಮತ್ತು ಜಾದೂಗಾರ್ ಕುದ್ರೋಳಿ ಗಣೇಶ್ ಅವರು ಪ್ರಶಸ್ತಿ ಪುಸ್ಕೃತರ ಹೆಸರನ್ನು ಆಯ್ಕೆ ಮಾಡಿದ್ದಾರೆ ಎಂದು ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments