Saturday, September 21, 2024
Homeಪುಸ್ತಕ ಮಳಿಗೆಕಲ್ಯಾಣ ಪ್ರಸಂಗಗಳು - ಶ್ರೀ ಮನ್ಮಧ್ವಸಿದ್ಧಾಂತ ಗ್ರಂಥಾಲಯ, ಉಡುಪಿ 

ಕಲ್ಯಾಣ ಪ್ರಸಂಗಗಳು – ಶ್ರೀ ಮನ್ಮಧ್ವಸಿದ್ಧಾಂತ ಗ್ರಂಥಾಲಯ, ಉಡುಪಿ 

ಶೀರ್ಷಿಕೆಯೇ ಸೂಚಿಸುವಂತೆ  ಕೃತಿಯು ಕಲ್ಯಾಣ ಪ್ರಸಂಗಗಳನ್ನು ಒಳಗೊಂಡ ಸಂಪುಟವು. ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ಸುಭದ್ರಾ ಕಲ್ಯಾಣ, ದೇವಿದಾಸ ವಿರಚಿತ ಗಿರಿಜಾ ಕಲ್ಯಾಣ, ಚೋರಾಡಿ ವೆಂಕಟರಮಣ ಭಟ್ಟ ವಿರಚಿತ ಜಾಂಬವತಿ ಕಲ್ಯಾಣ ಮತ್ತು ಹಟ್ಟಿಯಂಗಡಿ ರಾಮ ಭಟ್ಟ  ವಿರಚಿತ ರತಿಕಲ್ಯಾಣ ಎಂಬ ನಾಲ್ಕು ಪ್ರಸಂಗಗಳು ಈ ಪುಸ್ತಕದಲ್ಲಿವೆ. ಇದು ಪ್ರಕಟವಾದುದು 2004ನೇ ಇಸವಿಯಲ್ಲಿ. ಪ್ರಕಾಶಕರು ಶ್ರೀ ಮನ್ಮಧ್ವಸಿದ್ಧಾಂತ ಗ್ರಂಥಾಲಯ, ಉಡುಪಿ. ಸದ್ರಿ ಸಂಸ್ಥೆಯ ಮೊದಲ ಯಕ್ಷಗಾನ ಪ್ರಸಂಗ ಸಂಪುಟವಿದು. ಸಂಕಲನ ಮತ್ತು ಪ್ರಸ್ತಾವನೆ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟರಿಂದ. ಪ್ರಸ್ತಾವನೆ ಎಂಬ ಶೀರ್ಷಿಕೆಯಡಿ ತಮ್ಮಲೇಖನದಲ್ಲಿ ಡಾ. ಪಾದೇಕಲ್ಲು ವಿಷ್ಣು ಭಟ್ಟರು ಸಂಪುಟದಲ್ಲಿರುವ ಕಲ್ಯಾಣ ಪ್ರಸಂಗಗಳ ಕಥಾಸರವನ್ನೂ ಪ್ರಸಂಗಗಳನ್ನು ಬರೆದ ಕವಿಗಳ ಪರಿಚಯವನ್ನೂ ನೀಡಿರುತ್ತಾರೆ. ಅಲ್ಲದೆ ಉಡುಪಿಯ ಶ್ರೀ ಮನ್ಮಧ್ವಸಿದ್ಧಾಂತ ಗ್ರಂಥಾಲಯದ ಯಕ್ಷಗಾನ ಸಂಬಂಧೀ ಸತ್ಕಾರ್ಯಗಳನ್ನು ತಿಳಿಸಿ ಶ್ಲಾಘಿಸಿದ್ದಾರೆ. ಕಲ್ಯಾಣ ಪ್ರಸಂಗಗಳು ಎಂಬ ಈ ಸಂಪುಟವು ಅಧ್ಯಯನಾಕಾಂಕ್ಷಿಗಳಿಗೆ, ಯಕ್ಷಗಾನ ಪ್ರಿಯರಿಗೆ ಅನುಕೂಲವಾದೀತು ಮತ್ತು ಜನತೆ ಈ ಪುಸ್ತಕವನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ವಿಚಾರವನ್ನು ಡಾ. ಪಾದೇಕಲ್ಲು ವಿಷ್ಣು ಭಟ್ಟರು ಕಾರಣ ಸಹಿತವಾಗಿ ಸೂಚಿಸಿರುತ್ತಾರೆ. ಕಲಾವಿದರಿಗೆ ಈ ಸಂಪುಟವು ಅನುಕೂಲವಾಗಿದೆ ಎಂಬುದು ಕಲಾವಿದನಾಗಿ ನನ್ನ ಅನುಭವದ ಅನಿಸಿಕೆ.   

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments