ಕಂಸಾಳೆ ಎಂಬುದು ಒಂದು ತಾಳವಾದ್ಯದ ಹೆಸರು. ಆದರೆ ಅದುವೇ ಒಂದು ಜಾನಪದ ಕಲೆಯ ಹೆಸರಾಯಿತು. ಈ ಮನಮೋಹಕ ಕಲಾಪ್ರಾಕಾರದಲ್ಲಿ ಬಳಸುವ ಕಂಸಾಳೆ ಎನ್ನುವ ಈ ತಾಳವೇ ಇದರಲ್ಲಿ ಪ್ರಮುಖವಾದುದು.
ಈ ತಾಳವು ಕಂಚಿನ ಲೋಹದಿಂದ ತಯಾರಿಸಿದ ಗಟ್ಟಿಯಾದ ತಾಳವಾದುದರಿಂದ ಇದಕ್ಕೆ ಕಂಸಾಳೆ ಎಂದು ಹೆಸರು ಬಂತು ಎಂದು ಹೇಳಲಾಗುತ್ತಿದೆ. ಈ ಹೆಸರು ಹೇಗೆ ಬಂತು ಎನ್ನುವುದಕ್ಕೆ ಬೇರೆ ಬೇರೆ ವಾದಗಳಿವೆ. ಅದೇನೇ ಇರಲಿ. ಈ ಕಂಸಾಳೆ ಎಂಬ ವಿಶಿಷ್ಟ ಅಚ್ಚರಿಯ ಕಲೆಯಲ್ಲಿ ಎರಡು ವಿಧಗಳಿವೆ. ಕುಳಿತು ಹಾಡುವ ಕಂಸಾಳೆ ಮತ್ತು ಬೀಸು ಕಂಸಾಳೆ ಎಂಬ ಎರಡು ವಿಧ.
ಇದಕ್ಕೆ ಪ್ರಾಚೀನ ಕಾಲದಲ್ಲಿ ಹುಲಿ ಹೆಜ್ಜೆ ಕುಣಿತ ಎಂದು ಕರೆಯುತ್ತಿದ್ದರು. ಶಿವ ಮತ್ತು ಶಿವಶರಣರ ಕಥೆಯನ್ನು ಪದ್ಯ ಹಾಗೂ ಗದ್ಯ ರೂಪದಲ್ಲಿ ಹಾಡುತ್ತಾ ತಾಳ ಮತ್ತು ನೃತ್ಯದ ಜೊತೆಗೆ ಪ್ರಸ್ತುತಪಡಿಸುವುದೇ ಬೀಸು ಕಂಸಾಳೆಯ ವಿಶೇಷತೆ. ಮಲೆ ಮಹದೇಶ್ವರನ ಭಕ್ತರು ಮಲೆ ಮಹದೇಶ್ವರನ ಬೆಟ್ಟಕ್ಕೆ ಅರಣ್ಯ ಮಾರ್ಗವಾಗಿ ದುರ್ಗಮ ಹಾದಿಗಳಲ್ಲಿ ಸಂಚರಿಸಬೇಕಾಗಿತ್ತು.
ಆಗ ಕ್ರೂರ ಪ್ರಾಣಿಗಳ ಮೇಲಿನ ಭಯದಿಂದ ದೊಡ್ಡ ದೊಡ್ಡ ಬೀಸು ಹೆಜ್ಜೆಗಳನ್ನು ಹಾಕುತ್ತಾ ಕಂಚಿನ ತಾಳವನ್ನು ಬಡಿಯುತ್ತಾ ಮಹದೇಶ್ವರನ ಮಹಿಮೆಯನ್ನು ಹಾಡುತ್ತಾ ಸಾಗುತ್ತಿದ್ದರಂತೆ. ಕಂಸಾಳೆ ಕಲಾವಿದರಿಗೆ ಮಹದೇಶ್ವರನ ಮಹಿಮೆ ಹಾಗೂ ಕತೆಗಳು ಕಂಠಪಾಠ. ಬೀಸು ಕಂಸಾಳೆಯಲ್ಲಿ ತಾಳಕ್ಕೆ ಉದ್ದವಾದ ದಾರವನ್ನು ಕಟ್ಟಿರುತ್ತಾರೆ.
ಈ ದಾರವನ್ನು ಹಿಡಿದು ಬೀಸುತ್ತಾ ತಾಳ ಹಾಕುತ್ತಾ ನೃತ್ಯ ಮಾಡುವ ದೃಶ್ಯ ರೋಮಾಂಚನ ಉಂಟುಮಾಡುತ್ತದೆ. ತಾಳ ತಪ್ಪದೆ ನೃತ್ಯದ ಹೆಜ್ಜೆಯೂ ತಪ್ಪದಂತೆ ವಿಧ ವಿಧವಾದ ಕಸರತ್ತುಗಳನ್ನು ಮಾಡುತ್ತಾ ನೀಡುವ ಪ್ರದರ್ಶನವನ್ನು ನೋಡಿದಷ್ಟೂ ಸಾಕೆನಿಸುವುದಿಲ್ಲ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

