Saturday, May 18, 2024
Homeಯಕ್ಷಗಾನಮಾಗದ ವಧೆ, ಕೌಶಿಕ ಪ್ರತಿಜ್ಞೆ, ಜಾಬಾಲಿ ನಂದಿನಿ - ಮೂರು ತಾಳಮದ್ದಳೆಗಳು 

ಮಾಗದ ವಧೆ, ಕೌಶಿಕ ಪ್ರತಿಜ್ಞೆ, ಜಾಬಾಲಿ ನಂದಿನಿ – ಮೂರು ತಾಳಮದ್ದಳೆಗಳು 

ರೋಟರಿ ಕ್ಲಬ್ ಮಡಂತ್ಯಾರು ಇವರ ಪ್ರಾಯೋಜಕತ್ವದಲ್ಲಿ ಮತ್ತು ಶ್ರೀ ಮಹಿಷಮರ್ದಿನಿ ಯಕ್ಷಗಾನ ಸಂಘ ಪಾರೆಂಕಿ, ರೊ। ಪ್ರಕಾಶ್ ಕಾರಂತ್ , ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ , ರೋಟರಿ ಕ್ಲಬ್ ಬಂಟ್ವಾಳ ಇವರುಗಳ ಸಹ ಪ್ರಾಯೋಜಕತ್ವದಲ್ಲಿ  ಮೂರು ದಿನದ ಯಕ್ಷ ಸಂವಾದ ತಾಳಮದ್ದಳೆ ಕೂಟ ಜರಗಲಿದೆ. ದಿನಾಂಕ 11.09.2020 ರಂದು ಮಾಗದ ವಧೆ ಎಂಬ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಪಟ್ಲ ಸತೀಶ್ ಶೆಟ್ಟಿ, ಕಾವ್ಯಶ್ರೀ ಅಜೇರು,ಗುರುಪ್ರಸಾದ್ ಬೊಳಿಂಜಡ್ಕ, ಚಂದ್ರಶೇಖರ ಆಚಾರ್ಯ ಹಾಗೂ ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್, ವಾಸುದೇವ ರಂಗಾ ಭಟ್, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಭಾಗವಹಿಸಲಿರುವರು.

 ದಿನಾಂಕ 12.09.2020 ರಂದು ಕೌಶಿಕ ಪ್ರತಿಜ್ಞೆ ಎಂಬ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಚೈತನ್ಯ ಕೃಷ್ಣ ಪದ್ಯಾಣ,ಚಂದ್ರಶೇಖರ ಆಚಾರ್ಯ ಮತ್ತು ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಉಜಿರೆ ಅಶೋಕ ಭಟ್ ಭಾಗವಹಿಸಲಿರುವರು.  ದಿನಾಂಕ 13.09.2020 ರಂದು ಜಾಬಾಲಿ ನಂದಿನಿ ಎಂಬ ಪ್ರಸಂಗ ತಾಳಮದ್ದಳೆ ರೂಪದಲ್ಲಿ ನಿಮ್ಮ ಮುಂದಿರಲಿದೆ. ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಶ್ರೀನಿವಾಸ ಬಳ್ಳಮಂಜ, ಪದ್ಮನಾಭ ಉಪಾಧ್ಯಾಯ, ಚಂದ್ರಶೇಖರ ಆಚಾರ್ಯ ಮತ್ತು ಮುಮ್ಮೇಳದಲ್ಲಿ ಪೆರ್ಮುದೆ ಜಯಪ್ರಕಾಶ ಶೆಟ್ಟಿ, ದಿನೇಶ ಶೆಟ್ಟಿ ಕಾವಳಕಟ್ಟೆ, ರಾಜೇಶ ಕೃಷ್ಣ ಮಚ್ಚಿನ ಭಾಗವಹಿಸರುವರು. ಸಮಯ ಪ್ರತಿದಿನ ಸಂಜೆ 6 ರಿಂದ ರಾತ್ರಿ 8.30. ಈ ಕಾರ್ಯಕ್ರಮ ಯೂ ಪ್ಲಸ್ ಟಿವಿ ಯಲ್ಲಿ ನೇರ ಪ್ರಸಾರವಾಗಲಿದೆ. ಅಲ್ಲದೆ ಯು ಟ್ಯೂಬ್ ಮತ್ತು ಫೇಸ್ ಬುಕ್ ಗಳಲ್ಲೂ ನೇರಪ್ರಸಾರಗೊಳ್ಳಲಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments