ಪಾಂಡವರ ಸೂತರ ಕುರಿತು ಕುಮಾರವ್ಯಾಸ ಭಾರತದ ಸಭಾಪರ್ವದಲ್ಲಿ ಮಾಹಿತಿ ಸಿಗುತ್ತದೆ. ರಾಜಸೂಯ ಯಾಗದ ಸಂದರ್ಭದಲ್ಲಿ ಅವರು ಮಹತ್ತರ ಪಾತ್ರವನ್ನು ವಹಿಸಿದ್ದಾರೆ.
ಧರಣಿಪತಿ ಕೇಳ್ ಶೂದ್ರ ಮೊದಲಾ
ಗಿರೆ ಸಮಸ್ತ ಪ್ರಜೆ ವಿಧಾವಂ
ತರಿಗೆ ಭೋಜನ ಗಂಧ ಮಾಲ್ಯಾಂಬರ ವಿಲೇಪನದ
ಉರು ನಿಯೋಗಿಗಳಿಂದ್ರಸೇನನು
ವರ ವಿಶೋಕನು ರುಗ್ಮನತಿ ಬಂ
ಧುರ ಸಮೀರ ಪತಾಕಸೇನನು ಸೂತರೈವರಿಗೆ (ಕು,ವ್ಯಾ. ಸ,ಪ. 7-19)
ಧರ್ಮರಾಯ – ಇಂದ್ರಸೇನ. ಭೀಮಸೇನ- ವಿಶೋಕ. ಪಾರ್ಥ-ರುಗ್ಮ. ನಕುಲ-ಸಮೀರ. ಸಹದೇವ- ಪತಾಕಸೇನ. ಈ ಇಂದ್ರಸೇನನೇ ರಾಜಸೂಯಯಾಗದ ಕುರಿತು ಸಮಾಲೋಚಿಸಲು ಕೃಷ್ಣನನ್ನು ಕರೆದುಕೊಂಡು ಬರಲು ದ್ವಾರಕೆಗೆ ಹೋದವನು.
ಕಳುಹಿದನು ಸಾರಥಿಯನಾ ರಥ
ಕೆಲವು ದಿವಸಕೆ ಕೃಷ್ಣಭವನ
ಸ್ಥಳದ ಹೊರಬಾಹೆಯಲಿ ಚಾಚಿತು ಚಪಳಗಮನದಲಿ (ಸ.ಪ. 2-6, ಪೂರ್ವಾರ್ಧ)
ಎಂದು ವಸುದೇವಾದಿ ಯಾದವ
ವೃಂದವನು ಬಲಭದ್ರರಾಮನ
ಹಿಂದಿರಿಸಿ ಬಳಿಕಿಂದ್ರಸೇನನ ಕೂಡೆ ವೊಲವಿನಲಿ
ಬಂದನಿದ್ರಪ್ರಸ್ಥ ಪಟ್ಟಣ
ಕಂದು ವೊಸಗೆಯ ಗುಡಿಯ ತೋರಣ
ದಿಂದ ಕನ್ನಡಿ ಕಳಶದಲಿ ಕೊಂಡಾಡಿದರು ಹರಿಯ (ಸ.ಪ. 2-8)
ಭೀಮಸೇನನು ಬಿಲ್ಲನ್ನು ಹಿಡಿದು (ಸುಪಾರ್ಶ್ವ) ಕಾಳಗ ಮಾಡಿದಾಗ ಸಾರಥಿಯಾದ ವಿಶೋಕನು ಮಹತ್ತರ ಪಾತ್ರವನ್ನು ವಹಿಸಿದ ಮಾಹಿತಿ ಕುಮಾರವ್ಯಾಸ ಭಾರತದಲ್ಲೇ ಬರುತ್ತದೆ. ನೋಡಿ ದ್ರೋಣಪರ್ವ 12-5; 13-32 ಮತ್ತು ಈ ಮಧ್ಯೆ ಅಲ್ಲಲ್ಲಿ ಬರುತ್ತದೆ. ಅಂತೆಯೇ ಕರ್ಣಪರ್ವದ 12-23, 13-8, 18-19ರಲ್ಲೂ ಬಂದಿದೆ.

- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES