Friday, September 20, 2024
Homeಯಕ್ಷಗಾನಮೂಡಲಪಾಯ ವಿಚಾರಸಂಕಿರಣ, ಯಕ್ಷಗಾನ ಪ್ರದರ್ಶನಗಳು ಮತ್ತು ಸಾಕ್ಷ್ಯಚಿತ್ರ ಬಿಡುಗಡೆ 

ಮೂಡಲಪಾಯ ವಿಚಾರಸಂಕಿರಣ, ಯಕ್ಷಗಾನ ಪ್ರದರ್ಶನಗಳು ಮತ್ತು ಸಾಕ್ಷ್ಯಚಿತ್ರ ಬಿಡುಗಡೆ 

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಹಯೋಗದಲ್ಲಿ  ಮೂಡಲಪಾಯ ವಿಚಾರಸಂಕಿರಣ, ಯಕ್ಷಗಾನ ಪ್ರದರ್ಶನಗಳು ಮತ್ತು ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭ ನಡೆಯಲಿದೆ.

ಈ ಸಂದರ್ಭದಲ್ಲಿ ಹಿರಿಯ ಮೂಡಲಪಾಯ ಯಕ್ಷಗಾನ ಕಲಾವಿದರಾದ ಶ್ರೀ ಕಲ್ಮನೆ ಎ. ಎಸ್. ನಂಜಪ್ಪ ಇವರ ಸಾಕ್ಷ್ಯಚಿತ್ರ ಬಿಡುಗಡೆಯೂ ನಡೆಯಲಿದೆ.

ದಿನಾಂಕ 24ನೇ ಫೆಬ್ರವರಿ 2021, ಬುಧವಾರ ಬೆಳಗ್ಗೆ 10.30 ಘಂಟೆಯಿಂದ ತುಮಕೂರು ಜಿಲ್ಲೆಯ ಅರಳಗುಪ್ಪೆಯ ಶ್ರೀ ಕಲ್ಲೇಶ್ವರಸ್ವಾಮಿ ಸಾರ್ವಜನಿಕ ಸಮುದಾಯ ಭವನದಲ್ಲಿ  ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಲಿರುವುದು.

ಕಾರ್ಯಕ್ರಮದ ಉದ್ಘಾಟನೆ, ಸಾಕ್ಷ್ಯಚಿತ್ರ ಬಿಡುಗಡೆ, ವಿಚಾರಗೋಷ್ಠಿ ಕಾರ್ಯಕ್ರಮಗಳ ನಂತರ ಮೂಡಲಪಾಯ ಯಕ್ಷಗಾನ ಪ್ರದರ್ಶನ ನಡೆಯಲಿರುವುದು.

ಕಾರ್ಯಕ್ರಮವು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವಿಕೆಯ ಮೂಲಕ ಸರಕಾರದ ಕೋವಿಡ್-19 ನಿಯಮಗಳಂತೆ ನಡೆಯಲಿರುವುದು. ಕಾರ್ಯಕ್ರಮದ ವಿವರ ಈ ಕೆಳಗೆ ಲಗತ್ತಿಸಲಾಗಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments