Friday, September 20, 2024
Homeಯಕ್ಷಗಾನಪುತ್ತೂರು ಶ್ರೀಧರ ಭಂಡಾರಿಯವರ ದಿವ್ಯಾತ್ಮಕ್ಕೆ, ವಿಶ್ವವಿನೋದ ಬನಾರಿಯವರಿಂದ ಶ್ರದ್ಧಾಂಜಲಿ ಗೀತೆ

ಪುತ್ತೂರು ಶ್ರೀಧರ ಭಂಡಾರಿಯವರ ದಿವ್ಯಾತ್ಮಕ್ಕೆ, ವಿಶ್ವವಿನೋದ ಬನಾರಿಯವರಿಂದ ಶ್ರದ್ಧಾಂಜಲಿ ಗೀತೆ

ಶ್ರದ್ಧಾಂಜಲಿ ಗೀತೆ ದಿ| ಪುತ್ತೂರು ಶ್ರೀಧರ ಭಂಡಾರಿಯವರ ದಿವ್ಯಾತ್ಮಕ್ಕೆ

ಪುಂಡು ವೇಷದಿ ಪ್ರಮುಖ | ಪಂಡಿತನೆ ಕೋಲ್ಮಿಂಚು | ಗಂಡುಗಲಿ ಘನರಂಗ ರಾಜನಾಗಿ || ಚೆಂಡಿನಂತೆಸೆದ ಸಿರಿ | ಮಂಡಲದ ಸಿಡಿಲ ಮರಿ | ಕೊಂಡಿ ಕಳಚಿತು ಯಕ್ಷ ಭಂಡಾರದಿಂದ || ೧ ||

ಹರಿಯ ಪದದೊಳಗೈಕ್ಯ | ನಿರತ ಪೆಸರಾದಿತ್ಯ | ವರ ಕಿರಣದಂತೆ ಸು | ಸ್ಥಿರವು ಜನಮನದಿ || ಪರಮ ಮಂಗಲಮೂರ್ತಿ | ಕರುಣಮಯ ಸತ್ಕೀರ್ತಿ | ಕರುಣಿಸಲಿ ಸದ್ಗತಿಯ ಮುನಿಪುರದ ಕೃಷ್ಣ || ೨ ||

ಓಂ ಶಾಂತಿ

ಲೇಖಕ: ವಿಶ್ವವಿನೋದ ಬನಾರಿ 

ವಿಶ್ವವಿನೋದ ಬನಾರಿ, ‘ಬನಸಿರಿ’

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments