ಯಕ್ಷಗಾನ ಕಲಾರಂಗ 16 ವರ್ಷಗಳ ಹಿಂದೆ ಕಲಾವಿದರಿಗಾಗಿ ಆರಂಬಿಸಿದ ‘ಜೀವನ ಆನಂದ’ ವಿಮೆಯ ಪಾಲಸಿದಾರರಾದ ಮಂದಾರ್ತಿ ಮೇಳದ ಕಲಾವಿದರಾದ ಸಾಧು ಕೊಠಾರಿಯವರು ಇತ್ತೀಚೆಗೆ ಮೇಳದ ಚೌಕಿಯಲ್ಲಿ ನಿಧನಹೊಂದಿದ್ದು, ಅವರ ವಿಮಾ ಮೊತ್ತ 1 ಲಕ್ಷರೂ, ಜತೆಗೆ ಬೋನಸ್ 65 ಸಾವಿರ ರೂಪಾಯಿಯನ್ನು ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಸಾಧು ಕೊಠಾರಿಯವರ ಪತ್ನಿ ಶಕುಂತಲಾ ಕೊಠಾರಿಯವರಿಗೆ ಹಸ್ತಾಂತರಿಸಿದರು.
- 150 ವರ್ಷಗಳ ವರೆಗೆ ಬದುಕಲು ದಂಪತಿಗಳ ಹೊಸ ತಂತ್ರ – ನವೀನ ಆವಿಷ್ಕಾರ, ಚಿಕಿತ್ಸೆಗಳಿಂದ ಇದು ಸಾಧ್ಯ ಎಂದು ತೋರಿಸಲು ಹೊರಟ ಗಂಡ-ಹೆಂಡತಿ!
- 10ನೇ ತರಗತಿ ವಿದ್ಯಾರ್ಥಿಯು ತನ್ನ ಶಿಕ್ಷಕಿಯ ಅಶ್ಲೀಲ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡಿದ ಪ್ರಕರಣ – 4 ಮಂದಿಯ ಬಂಧನ
- ಎದೆಯ ಒಂದು ಬದಿಯಲ್ಲಿ ಪ್ಲಾಸ್ಟರ್ ನೊಂದಿಗೆ ಆಸ್ಪತ್ರೆಯಿಂದ ಮನೆಗೆ ಮರಳಿದ ಗಾಯಕಿ ಅಮೃತಾ ಸುರೇಶ್
- ಅಂಬಿಕಾ ವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಡಾ.ದೀಪಕ್ ರೈ ಆಯ್ಕೆ
- ಸ್ನೇಹಿತನನ್ನು ಮರಕ್ಕೆ ಕಟ್ಟಿಹಾಕಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಯ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ ಪೊಲೀಸರು
ವಾರ್ಷಿಕ ಪ್ರೀಮಿಯಮ್ನ ಭಾಗಶಃ ಹಣವನ್ನು ಸಂಸ್ಥೆ ನೀಡುತ್ತಾ ಬಂದಿದ್ದು, 53 ಕಲಾವಿದರು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ನೆರವಿನ ರೂಪದಲ್ಲಿ ಸಂಸ್ಥೆಯ ವತಿಯಿಂದ 20 ಸಾವಿರ ರೂಪಾಯಿಯನ್ನು ಫೆಬ್ರವರಿ 08, 2021ರಂದು ಕಲಾರಂಗದ ಕಛೇರಿಯಲ್ಲಿ ನೀಡಿ ನೊಂದ ಕುಟುಂಬವನ್ನು ಸಂತೈಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಮನೋಹರ ಕೆ., ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಹಾಗೂ ಸಾಧು ಕೊಠಾರಿಯವರ ಪುತ್ರಿ ಮಾಧುರಿ ಉಪಸ್ಥಿತರಿದ್ದರು.