Friday, September 20, 2024
Homeಯಕ್ಷಗಾನ"ಶ್ರೀ ರಾಮಾನುಭವ" ಎಂಬ ಸರಣಿ ತಾಳಮದ್ದಳೆ ಸಪ್ತಾಹ -  ವಿದ್ವಾನ್ ಉಮಾಕಾಂತ ಭಟ್ಟರ ಏಳೂ ದಿನಗಳ ಶ್ರೀರಾಮ

“ಶ್ರೀ ರಾಮಾನುಭವ” ಎಂಬ ಸರಣಿ ತಾಳಮದ್ದಳೆ ಸಪ್ತಾಹ –  ವಿದ್ವಾನ್ ಉಮಾಕಾಂತ ಭಟ್ಟರ ಏಳೂ ದಿನಗಳ ಶ್ರೀರಾಮ

ಯಕ್ಷ ಶಾಲ್ಮಲಾ (ರಿ) ಆಯೋಜಿಸುವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದ ಏಳು ದಿನಗಳ ತಾಳಮದ್ದಳೆ ಕಾರ್ಯಕ್ರಮವಾದ “ಶ್ರೀ ರಾಮಾನುಭವ” ಎಂಬ ಸರಣಿ ತಾಳಮದ್ದಳೆ ಸಪ್ತಾಹ ಮುಂಡಿಗೇಸರ ಎಂಬಲ್ಲಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ನಡೆಯಲಿದೆ.

ಈ ತಾಳಮದ್ದಳೆ ಸಪ್ತಾಹದಲ್ಲಿ ಪ್ರದರ್ಶನ ಮತ್ತು ದಾಖಲೀಕರಣ ಎರಡನ್ನೂ ಮಾಡಲಾಗುತ್ತಿದೆ. ದಿನಾಂಕ ಡಿಸೆಂಬರ್ 6ರಿಂದ ಡಿಸೆಂಬರ್ 12ರ ವರೆಗೆ ಈ ಕಾರ್ಯಕ್ರಮವು ಪ್ರತಿದಿನ ಸಂಜೆ 4-30ರಿಂದ ನಡೆಯಲಿದೆ. ಕಾರ್ಯಕ್ರಮವು ಸರಕಾರದ ಕೋವಿಡ್19ರ ನೀತಿ ನಿಯಮಾವಳಿಗಳನ್ನನುಸರಿಸಿ ನಡೆಯುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಏಳೂ ದಿನಗಳ ತಾಳಮದ್ದಳೆ ಪ್ರಸಂಗಗಳಲ್ಲಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈಯವರು ಪ್ರತಿದಿನವೂ ಶ್ರೀರಾಮನ ಪಾತ್ರವನ್ನು ವಹಿಸುತ್ತಿರುವುದು ಈ ಸಪ್ತಾಹದ ವಿಶೇಷತೆಯಾಗಿದೆ. 

ಜಾಹೀರಾತು 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments