Friday, September 20, 2024
Homeಯಕ್ಷಗಾನಕೊಲ್ಲಂಗಾನದಲ್ಲಿ ಬಣ್ಣದ ವೇಷದ ಕಮ್ಮಟ ಮತ್ತು ದಾಖಲೀಕರಣ

ಕೊಲ್ಲಂಗಾನದಲ್ಲಿ ಬಣ್ಣದ ವೇಷದ ಕಮ್ಮಟ ಮತ್ತು ದಾಖಲೀಕರಣ

ನಿನ್ನೆ ದಿನಾಂಕ 09. 11. 2020 ಸೋಮವಾರದಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದೊಂದಿಗೆ ಮತ್ತು ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಇವರ ಸಹಕಾರದೊದಿಗೆ ಕೊಲ್ಲಂಗಾನ ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿ, ಶ್ರೀನಿಲಯದಲ್ಲಿ, ಕೊಲ್ಲಂಗಾನ ಮೇಳದ ಸಹಕಾರದೊಂದಿಗೆ ತೆಂಕುತಿಟ್ಟು ಯಕ್ಷಗಾನದ  ಬಣ್ಣದ ವೇಷದ ಕಮ್ಮಟವನ್ನು ಏರ್ಪಡಿಸಿತ್ತು.

ಈ ಕಮ್ಮಟವು ತೆಂಕುತಿಟ್ಟು ಬಣ್ಣದ ವೇಷದ ಮಾದರಿಗಳನ್ನು ದಾಖಲೀಕರಣಗೊಳಿಸುವ ಮತ್ತು ಅದನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ದಾಟಿಸಿ ಪರಿಚಯಿಸುವ ನಿಟ್ಟಿನಲ್ಲಿ ಮಹತ್ವವನ್ನು ಪಡೆದಿತ್ತು.

ಬಹಳ ಪರಿಣಾಮಕಾರಿಯಾಗಿ ಮತ್ತು ಮನೋಜ್ಞವಾಗಿ ಮೂಡಿಬಂದ ಈ ಬಣ್ಣದ ವೇಷದ ಕಮ್ಮಟದಲ್ಲಿ ತೆಂಕುತಿಟ್ಟಿನ ವಿವಿಧ ಬಣ್ಣದ ವೇಷದ ವೇಷಗಾರಿಕೆ, ಬಣ್ಣಗಾರಿಕೆ ಮತ್ತು ನೃತ್ಯ ಪ್ರಾತ್ಯಕ್ಷಿಕೆ ಮತ್ತು ವಿವರಣೆಗಳನ್ನು ನೀಡಲಾಯಿತು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,  ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಪಧಾಧಿಕಾರಿಗಳು,  ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿಯ ಪ್ರತಿನಿಧಿಗಳು, ಕೊಲ್ಲಂಗಾನ ಮೇಳದ ಸಂಚಾಲಕರು ಮತ್ತು ತೆಂಕುತಿಟ್ಟು ಯಕ್ಷಗಾನ ಮತ್ತು ತಾಳಮದ್ದಳೆಯ ಪ್ರಸಿದ್ಧ ಕಲಾವಿದರು ಉಪಸ್ಥಿತರಿದ್ದರು 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments