Friday, September 20, 2024
Homeಯಕ್ಷಗಾನನೂತನ ಮೇಳಕ್ಕೆ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವ

ನೂತನ ಮೇಳಕ್ಕೆ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವ

ಖ್ಯಾತ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಹೊಸ ಮೇಳವೊಂದು ತಿರುಗಾಟಕ್ಕ ಹೊರಡಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳು ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಹಲವು ದಿನಗಳಿಂದಲೂ ಈ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು ಈಗ ಆ ಬಗ್ಗೆ ಹೇಳಿಕೆ ನೀಡಲಾಗಿದೆ. ವಾಸ್ತವವಾಗಿ ಪಟ್ಲ ಸತೀಶ್ ಶೆಟ್ಟಿಯವರು  ಮೇಳವನ್ನು ಪ್ರಾಂಭಿಸುವ ಬಗ್ಗೆ ವರುಷದ ಹಿಂದಿನಿಂದಲೇ ಅವರ ಅಭಿಮಾನಿಗಳಲ್ಲಿ ನಿರೀಕ್ಷೆಗಳಿದ್ದುವು. ಎಲ್ಲರ ನಿರೀಕ್ಷೆ, ಹಾರೈಕೆಗಳೂ ಈಗ ನಿಜವಾಗಿವೆ.   ಈ ನೂತನ ಮೇಳ  ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ತಿರುಗಾಟಕ್ಕೆ ಹೊರಡಲಿದೆ. ಮೇಳ ದೇವಸ್ಥಾನದ ಹೆಸರಿನಲ್ಲಿ ತಿರುಗಾಟಕ್ಕೆ ಹೊರಡುವುದಾದರೂ ಕಲಾವಿದರ ಯಾದಿಯ ಅಂತಿಮಗೊಳಿಸುವಿಕೆ ಮೊದಲಾದ ಕೆಲವು ಆಡಳಿತಾತ್ಮಕ ವಿಚಾರಗಳನ್ನು ಪಟ್ಲ ಸತೀಶ್ ಶೆಟ್ಟಿಯವರೇ ನಿರ್ವಹಸಬಹುದು ಎಂದು ಹೇಳಲಾಗುತ್ತಿದೆ. 

ಆದರೆ ಪಟ್ಲ ಸತೀಶ ಶೆಟ್ಟಿಯವರ ಹೇಳಿಕೆಯ ಪ್ರಕಾರ ದೇವಸ್ಥಾನದ ಆಡಳಿತ ಮಂಡಳಿಯು ಕೇವಲ ಭಾಗವತಿಕೆಯ ಸ್ಥಾನಕ್ಕೆ ಸಂಬಂಧಪಟ್ಟಂತೆ ಮಾತ್ರ ಅವರಲ್ಲಿ ಮಾತುಕತೆಯನ್ನು ನಡೆಸಿದೆ. ಮತ್ತು ಇದನ್ನು ಪಟ್ಲ ಸತೀಶರು ದೃಢೀಕರಿಸಿದ್ದಾರೆ. 

ಕಳೆದ ಮೂರು ವರ್ಷಗಳ ಹಿಂದಿನಿಂದಲೇ ಮೇಳ ಆರಂಭಿಸುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಪಟ್ಲ ಸತೀಶ ಶೆಟ್ಟಿಯವರನ್ನು ಭಾಗವತರನ್ನಾಗಿ ಮಾಡುವ ನಿರ್ಧಾರದಿಂದ ಈ ಸುದ್ದಿ ಮುನ್ನೆಲೆಗೆ ಬಂದಿದೆ ಎಂದು  ದೇವಸ್ಥಾನದ ಆಡಳಿತ ಸಮಿತಿ ಹೇಳುತ್ತಿದೆ. 

ಆದರೂ ಭಾಗವತಿಕೆಯ ಸ್ಥಾನದಲ್ಲಿದ್ದರೂ ಕೆಲವೊಂದು ಮಹತ್ವದ ನಿರ್ಧಾರಗಳು ಪಟ್ಲರದ್ದೇ ಎಂದು ಹೇಳಲಾಗುತ್ತಿದೆ. ಕಲಾವಿದರ ಆಯ್ಕೆಯೇ ಮೊದಲಾದ ಮಹತ್ವದ ವಿಚಾರಗಳನ್ನು ದೇವಸ್ಥಾನದ ಆಡಳಿತ ಮಂಡಳಿಯು ಸತೀಶ್ ಶೆಟ್ಟಿಯವರ ನಿರ್ಧಾರ ಮತ್ತು ಅಧಿಕಾರದ ವಿವೇಚನೆಗೆ ಬಿಡಬಹುದು. ಅದೂ ಅಲ್ಲದೆ ಸುಮಾರು 20 ಮಂದಿ ಕಲಾವಿದರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಈ ನೂತನ ಮೇಳ ಕಾಲಮಿತಿಯಲ್ಲಿ ಪ್ರದರ್ಶನ ನೀಡುವುದರಿಂದ ( ಸಂಜೆ 6ರಿಂದ ರಾತ್ರಿ 10) ಬಪ್ಪನಾಡು ಮೇಳದ ಕೆಲವು ಕಲಾವಿದರೂ ಈ ಹೊಸ ಮೇಳದ ಪ್ರದರ್ಶನದಲ್ಲಿ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ. ಅದೂ ಅಲ್ಲದೆ ಈ ನೂತನ ಮೇಳ ದೇವಿ ಮಹಾತ್ಮೆ ಪ್ರಸಂಗಕ್ಕೆ ಅನುಗುಣವಾದ ಕಲಾವಿದರನ್ನೇ ಆಯ್ಕೆ ಮಾಡಲು ಸಿದ್ಧತೆ ನಡೆಸಿದಂತೆ ಕಾಣುತ್ತದೆ. ಹಿಮ್ಮೇಳ ಕಲಾವಿದರು ಸೇರಿದಂತೆ ಅಂದಿನಿಂದಲೂ ಪಟ್ಲರ ಜೊತೆಯಲ್ಲಿದ್ದ ಕಲಾವಿದರು ಮತ್ತೆ ಪಟ್ಲರ ಜೊತೆಯೇ ಹೊಸ ಮೇಳವನ್ನು ಸೇರಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಚಂಡ, ಮುಂಡ, ಮಹಿಷಾಸುರ ಹಾಗೂ ದೇವಿಯ ಪಾತ್ರಗಳಿಗೆ ಇತರ ಮೇಳಗಳಲ್ಲಿದ್ದ ಕಲಾವಿದರು ನೂತನ ಮೇಳಕ್ಕೆ ಸೇರುವ ನಿರೀಕ್ಷೆಗಳಿವೆ. ರಕ್ತಬೀಜನ ಪಾತ್ರಕ್ಕೆ ಬಪ್ಪನಾಡು ಮೇಳದ ಕಲಾವಿದರೋರ್ವರ ಹೆಸರು ಕೇಳಿಬರುತ್ತಾ ಉಂಟು. 

ಅಂತೂ ಪ್ರದರ್ಶನಗಳಿಲ್ಲದೆ ಸೊರಗಿದ್ದ ಯಕ್ಷರಂಗಕ್ಕೆ ಈ ನೂತನ ಮೇಳದ ಪರಿಕಲ್ಪನೆ ಒಂದು ಸಿಹಿ ಸುದ್ದಿಯ ಟಾನಿಕ್ ಆಗಿ ಪರಿಣಮಿಸಿದೆ. ಹತ್ತಿಪ್ಪತ್ತು ಮಂದಿ ಹೆಚ್ಚಿನ ಕಲಾವಿದರಿಗೆ ಉದ್ಯೋಗ ದೊರಕಿದಂತಾಗಲಿದೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments