Saturday, October 5, 2024
Homeಯಕ್ಷಗಾನಯಕ್ಷಗಾನ ಕಲಾರಂಗ (ರಿ.) ಉಡುಪಿ 45ನೇ ವಾರ್ಷಿಕ ಮಹಾಸಭೆ

ಯಕ್ಷಗಾನ ಕಲಾರಂಗ (ರಿ.) ಉಡುಪಿ 45ನೇ ವಾರ್ಷಿಕ ಮಹಾಸಭೆ

ಯಕ್ಷಗಾನ ಕಲಾರಂಗದ 45ನೇ ವಾರ್ಷಿಕ ಮಹಾಸಭೆ ಕೆ.ಗಣೇಶ್ ರಾವ್ ರವರ ಅಧ್ಯಕ್ಷೆಯಲ್ಲಿ ಶ್ರೀ ರಾಮವಿಠಲ ಸಭಾಭವನದಲ್ಲಿ ಸೆಪ್ಟೆಂಬರ್ 26, 2020ರಂದು ಜರಗಿತು. ರಾಜೇಶ್ ನಾವುಡರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ವರದಿ ವರ್ಷದ ಅಗಲಿದ ವ್ಯಕ್ತಿಗಳಿಗೆ ಉಪಾಧ್ಯಕ್ಷರಾದ ಎಸ್.ವಿ ಭಟ್ ರವರು ನುಡಿನಮನ ಸಲ್ಲಿಸಿದರು. ಕೆ. ಗಣೇಶ್ ರಾವ್ ಸ್ವಾಗತಿಸಿದರು. ಜತೆಕಾರ್ಯದರ್ಶಿ ನಾರಾಯಣ ಎಂ.ಹೆಗಡೆ ಗತ ಸಭೆಯ ವರದಿಯನ್ನೂ, ಕಾರ್ಯದರ್ಶಿ ಮುರಲಿ ಕಡೆಕಾರ್ ವಾರ್ಷಿಕ ವರದಿಯನ್ನು ಹಾಗೂ ಕೋಶಾಧಿಕಾರಿ ಕೆ. ಮನೋಹರ್ ಮತ್ತು ಪ್ರೊ. ಕೆ ಸದಾಶಿವರಾವ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಕೆ. ರಾಜಾರಾಮ ಶೆಟ್ಟರನ್ನು ಲೆಕ್ಕಪರಿಶೋಧಕರಾಗಿ ಆರಿಸಲಾಯಿತು. ಬಳಿಕ 25 ಜನ ಕಾರ್ಯಕಾರೀ ಸಮಿತಿ ಸದಸ್ಯರನ್ನು ಹಾಗೂ ಆಹ್ವಾನಿಸರನ್ನು ಆಯ್ಕೆಮಾಡಲಾಯಿತು. ಕೆ. ಗಣೇಶ್ ರಾವ್ ಅಧ್ಯಕ್ಷೀಯ ಮಾತುಗಳನ್ನಾಡಿದ ಬಳಿಕ ಜತೆಕಾರ್ಯದರ್ಶಿ ಎಚ್.ಎನ್. ಶೃಂಗೇಶ್ವರ ಧನ್ಯವಾದ ಸಮರ್ಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments