Friday, September 20, 2024
Homeಪುಸ್ತಕ ಮಳಿಗೆಡಾ. ಶಿವರಾಮ ಕಾರಂತ ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆ - ಕಿರಿಯ ಬಲಿಪ ನಾರಾಯಣ ಭಾಗವತರ...

ಡಾ. ಶಿವರಾಮ ಕಾರಂತ ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆ – ಕಿರಿಯ ಬಲಿಪ ನಾರಾಯಣ ಭಾಗವತರ ಕೃತಿಗಳು

ಈ ಕೃತಿಯು ತೆಂಕುತಿಟ್ಟಿನ ಹಿರಿಯ ಶ್ರೇಷ್ಠ ಭಾಗವತರಾದ  ಕಿರಿಯ ಬಲಿಪ ನಾರಾಯಣ ಭಾಗವತರು ರಚಿಸಿರುವ ಐದು ಯಕ್ಷಗಾನ ಪ್ರಸಂಗಗಳನ್ನು ಒಳಗೊಂಡ ಸಂಪುಟವು. ಡಾ. ಶಿವರಾಮ ಕಾರಂತ  ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆಯಾಗಿ ಈ ಸಂಪುಟವು ಪ್ರಕಟವಾಗಿರುವುದು ಸಂತೋಷದ ವಿಚಾರ. ಇದು ಯಕ್ಷಗಾನಕ್ಕೆ ಅನುಪಮ ಕೊಡುಗೆಗಳನ್ನು ನೀಡಿದ, ಮೇರು ವ್ಯಕ್ತಿತ್ವವನ್ನು ಹೊಂದಿದ ಡಾ. ಶಿವರಾಮ ಕಾರಂತರಿಗೆ ಸಲ್ಲಿಸಿದ ಗೌರವವೇ ಹೌದು. ಈ ಪ್ರಸಂಗ ಮಾಲಿಕೆಯ ಪ್ರಕಾಶಕರು ಪದವೀಧರ ಯಕ್ಷಗಾನ ಸಮಿತಿ ಮುಂಬಯಿ. ಸಂಪಾದಕರು ಶ್ರೀ ಎಚ್. ಬಿ. ಎಲ್. ರಾವ್ ಅವರು. ಸಹಕಾರವನ್ನು ನೀಡಿದವರು ಶ್ರೀ ಪು. ಶ್ರೀನಿವಾಸ ಭಟ್, ಕಟೀಲು ಮತ್ತು ಶ್ರೀ ಕೊಡೆತ್ತೂರು ಭುವನಾಭಿರಾಮ ಉಡುಪ ಅವರುಗಳು. ಮುನ್ನುಡಿಯನ್ನು ಬರೆದವರು ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಅವರು. ಅತ್ಯುತ್ತಮ ಪ್ರಸಂಗಗಳನ್ನು ಹೊಂದಿದ ಒಳ್ಳೆಯ ಸಂಪುಟವನ್ನು ಹೊರತರಲು ಕಾರಣರಾದವರನ್ನು ಡಾ. ಪ್ರಭಾಕರ ಜೋಶಿ ಅವರು ತಮ್ಮ ಮುನ್ನುಡಿ ಲೇಖನದಲ್ಲಿ ಅಭಿನಂದಿಸಿ ಶುಭ ಹಾರೈಸಿದ್ದಾರೆ. ಸಂಗ್ರಾಹಕರು ಸಹಕರಿಸಿದ ಮಹನೀಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಈ ಪ್ರಸಂಗ ಮಾಲಿಕೆಯು ಪ್ರಕಟವಾದುದು 1998ರಲ್ಲಿ ಈ ಸಂಪುಟದಲ್ಲಿ  ಕಿರಿಯ ಬಲಿಪ ನಾರಾಯಣ ಭಾಗವತರು ಬರೆದ ಅಮೃತಾಪಹರಣಂ (ಗರುಡೋದ್ಭವ), ಕಂತುಕಾವತೀ ಕಲ್ಯಾಣ (ಧರ್ಮಗುಪ್ತ ವಿಜಯ ), ನವಗ್ರಹ ಮಹಾತ್ಮೆ, ದೇವಾಂಗ ಮದನಿಕೆ (ಕಾಳಿಂದಿ ವಿವಾಹ), ಮತ್ಸ್ಯಾವತಾರ ಕೇತಕೀ ಶಾಪ ಎಂಬ ಐದು ಪ್ರಸಂಗಗಳಿವೆ. ಜತೆಗೆ ಪ್ರಸಂಗದಲ್ಲಿ ಪಾತ್ರಗಳ ವಿವರಗಳನ್ನೂ ನೀಡಲಾಗಿದೆ. ಇದು ಸುಮಾರು ನೂರಾ ಎಪ್ಪತ್ತು ಪುಟಗಳಿಂದ ಕೂಡಿದ ಪ್ರಸಂಗ ಸಂಪುಟ. ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ ಈ ಸಂಸ್ಥೆಯು ಪ್ರಕಟಿಸಿದ ಹದಿನೈದನೇ ಪ್ರಸಂಗ ಸಂಪುಟವಿದು. ಎಲ್ಲವೂ ಚಾಲ್ತಿಯಲ್ಲಿರುವ ಪ್ರಸಂಗಗಳು.

ಲೇಖಕ: ರವಿಶಂಕರ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments