ದಿನಾಂಕ. 18.02.2024ರಂದು ಅಣ್ಣೇರಪಾಲು ಕೊಣಾಜೆ ಎಂಬಲ್ಲಿ ನಡೆದ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಕಟೀಲು ನಾಲ್ಕನೇ ಮೇಳದ ನೇಪಥ್ಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ, ಅಣ್ಣೇರಪಾಲು, ಕೊಣಾಜೆ ಇವರ ಸೇವೆಯಾಟವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ (ನಾಲ್ಕನೇ ಮೇಳ) ಬಯಲಾಟವನ್ನು ಪ್ರದರ್ಶಿಸಲಾಯಿತು.
ಆ ಸಂದರ್ಭದಲ್ಲಿ ಕಟೀಲು ನಾಲ್ಕನೇ ಮೇಳದ ನೇಪಥ್ಯ ಕಲಾವಿದರಾದ ಶ್ರೀ ತನಿಯಪ್ಪ ಜೋಗಿಯವರಿಗೆ ಸನ್ಮಾನದ ಗೌರವವನ್ನು ಸಲ್ಲಿಸಲಾಯಿತು.

ತನಿಯಪ್ಪ ಜೋಗಿ ಇವರು ಪ್ರಸ್ತುತ ಕಟೀಲು 4ನೇ ಮೇಳದ ನೇಪಥ್ಯ ಕಲಾವಿದ. ಸರಳ ಸಜ್ಜನ ಹಾಗೂ ವಿನಯವಂತ. ಚೌಕಿಯಲ್ಲಿ ಇವರು ಎಲ್ಲರಿಗೂ ಪ್ರಿಯರು. ತನಗೆ ಒಪ್ಪಿಸಿದ ಕೆಲಸವನ್ನು ಚಾಚೂ ತಪ್ಪದೆ ಒಪ್ಪವಾಗಿ ಮಾಡಿ ಪೂರೈಸುತ್ತಾರೆ. ಇವರು 1954ನೇ ಇಸವಿ ಅಣ್ಣಪ್ಪ ಜೋಗಿ ಮತ್ತು ಸುಶೀಲ ದಂಪತಿಗಳಿಗೆ ಮಗನಾಗಿ ಜನಿಸಿದರು. ಹುಟ್ಟೂರು ಕಾಸರಗೋಡು ಜಿಲ್ಲೆಯ ಜೋಡುಕಲ್ಲು.
1970ನೇ ಇಸವಿ ನೇಪಥ್ಯ ಕಲಾವಿದನಾಗಿ ಕಲಾಸೇವೆ ಆರಂಭಿಸಿದರು. ಮೊದಲು ಶ್ರೀ ನಾಗರಾಜ ಶೆಟ್ರ ಕುಂಡಾವು ಮೇಳದಲ್ಲಿ 2 ವರ್ಷ, ನಂತರ ಕರ್ನಾಟಕ ಮೇಳದಲ್ಲಿ 12 ವರ್ಷಗಳ ಕಲಾಸೇವೆ. ತನಿಯಪ್ಪ ಜೋಗಿ ನಂತರ ಕಣಿಪುರ ಮೇಳದಲ್ಲಿ 1 ತಿರುಗಾಟ. ಪ್ರಸ್ತುತ ಕಟೀಲು ಮೇಳದಲ್ಲಿ ಹಲವಾರು ವರ್ಷಗಳಿಂದ ತಿರುಗಾಟ ನಡೆಸುತ್ತಿದ್ದಾರೆ.
- Changes to major ‘Sevas’ at Sri Kukke Subrahmanya Temple on September 3rd and 4th and September 6, 7
- ಸೆಪ್ಟಂಬರ್ 3 ಮತ್ತು 4 ಹಾಗೂ ಸೆಪ್ಟೆಂಬರ್ 6 ಮತ್ತು 7ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಸೇವೆಗಳಲ್ಲಿ ವ್ಯತ್ಯಾಸ
- “ಅನೂಪ್ ಜೊತೆ ನಾನು ಸುಮ್ಮನೆ ಹೊರಟುಹೋಗಲಿಲ್ಲ; ಅಖಿಲ್ ಅವರನ್ನು ಬಿಟ್ಟುಬರಲು ಒಂದು ಕಾರಣವಿದೆ,” ಎಂದು ಹೇಳಿದ ಮೇಘಾ ನಾಯರ್
- ನಟಿ ಅನುಶ್ರೀ ತಮ್ಮ ಸಾಕುನಾಯಿ ‘ಜೂಲಿ’ಯ ಸಾವಿಗೆ ಭಾವುಕ ಸಂದೇಶದ ಮೂಲಕ ಶ್ರದ್ಧಾಂಜಲಿ
- ದಮಯಂತಿ ಪುನಃ ಸ್ವಯಂವರ ಯಕ್ಷಗಾನ – ‘ದೊರಕದಿನ್ನದು ನಿನಗೆ.. 62 ಯೋಜನ ಹಿಂದೆ ಉಳಿದುದು..’ ಪದ್ಯದ ಪ್ರಯೋಗ ಮತ್ತು ಔಚಿತ್ಯ

