ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಇದೇ ಬರುವ 16 ನೇ ತಾರೀಕು ಸೋಮವಾರ ನವರಾತ್ರಿ ಶುಭ ಸಂದರ್ಭದಲ್ಲಿ ಸಂಜೆ 4 ಗಂಟೆಗೆ ತೆಂಕುತಿಟ್ಟು ಯಕ್ಷ ಮಾರ್ಗ- 2 ಉದ್ಘಾಟನೆ ಹಾಗೂ ತೆಂಕುತಿಟ್ಟು ಹಿಮ್ಮೇಳ ತರಗತಿ ಆರಂಭವಾಗಲಿದೆ.
ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ತೆಂಕುತಿಟ್ಟು ಯಕ್ಷಮಾರ್ಗ ಒಂದು ಕಾರ್ಯಕ್ರಮ ಕಳೆದ ತಿಂಗಳು ನಡೆದಿರುತ್ತದೆ. ತೆಂಕುತಿಟ್ಟು ಶಾಸ್ತ್ರಿಯ ನಾಟ್ಯದ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ -ಸಂವಾದಗಳು ನಡೆಯಲಿದೆ. ದಾಖಲೀಕರಣಗಳು ಸಂಪೂರ್ಣ ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಯನ ಕೇಂದ್ರದಲ್ಲಿ ಶಾಶ್ವತವಾಗಿರುತ್ತದೆ.
ಮುಂದಿನ ದಿನಗಳಲ್ಲಿ ನಾಟ್ಯ ಅಭ್ಯಾಸದ ಕುರಿತು ಅಧ್ಯಯನ ನಡೆಸುವಲ್ಲಿ ಈ ದಾಖಲಿಕರಣಗಳು ಉಪಯುಕ್ತವಾಗಲಿದೆ. ಅದೇ ದಿನ ಮಾಂಬಾಡಿ ಗುರುಗಳ ಸಲಹೆಯಂತೆ ಕುದುರೆ ಕೂಡ್ಲು ರಾಮಮೂರ್ತಿ ಇವರಿಂದ ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ತರಗತಿಯು ಆರಂಭವಾಗಲಿದೆ.
ಈ ಕಾರ್ಯಕ್ರಮವನ್ನು ನಾಡಿನ ಗೌರವಾನ್ವಿತ ಉದ್ಯಮಿಗಳಾದ, ಕಲಾಪೋಷಕರು,ಧಾರ್ಮಿಕ ಮುಖಂಡರಾದ ಶ್ರೀ ಕೆ. ಕೆ. ಶೆಟ್ಟಿ ಅಹಮದ್ ನಗರ, ಮಹಾರಾಷ್ಟ್ರ ಇವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳಾದ ಶ್ರೀ ಶಿವರಾಮ ಭಟ್ ಕಾರಿಂಜೆ ಹಳೆಮನೆ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
- ಬೆಂಗಳೂರಿನಲ್ಲಿ ಪಿಜಿಯ 5ನೇ ಮಹಡಿಯಿಂದ ಹಾರಿ ಇಂಜಿನಿಯರ್ ಯುವತಿ ಆತ್ಮಹತ್ಯೆ
- 5 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಬಂಧನ
- 60 ವರ್ಷದವರನ್ನು 25 ವರ್ಷದವರನ್ನಾಗಿ ಮಾಡುತ್ತೇನೆಂದು 35 ಕೋಟಿ ರೂಪಾಯಿ ವಂಚನೆ – ವಂಚಿಸಿದ ದಂಪತಿಗಾಗಿ ತೀವ್ರ ಹುಡುಕಾಟ
- ವಿಡಿಯೋ: ವಿಧಾನಸಭೆಯ ಮೂರನೇ ಮಹಡಿಯಿಂದ ಜಿಗಿದ ಮಹಾರಾಷ್ಟ್ರದ ಉಪ ಸ್ಪೀಕರ್ ನರಹರಿ ಜೀರ್ವಾಲ್ ಸುರಕ್ಷತಾ ಬಲೆಯೊಳಗೆ(ನೆಟ್) ಸಿಲುಕಿಕೊಂಡರು!
- ಶಿಕ್ಷಕ, ಪತ್ನಿ ಮತ್ತು ಇಬ್ಬರು ಮಕ್ಕಳು ಬರ್ಬರವಾಗಿ ಹತ್ಯೆ – ಬೆದರಿಕೆಯ ಬಗ್ಗೆ ತಿಂಗಳ ಹಿಂದೆಯೇ ದೂರು ನೀಡಿದ್ದರೂ ನಿರ್ಲಕ್ಷ್ಯ?