Saturday, October 5, 2024
Homeಸುದ್ದಿಮಕ್ಕಳ ಪ್ರತಿಭೆಯ ಪ್ರದರ್ಶನಕ್ಕೊಂದು ವೇದಿಕೆ ಕಲಾವಿಕಸನ ಶಿಬಿರ

ಮಕ್ಕಳ ಪ್ರತಿಭೆಯ ಪ್ರದರ್ಶನಕ್ಕೊಂದು ವೇದಿಕೆ ಕಲಾವಿಕಸನ ಶಿಬಿರ

ಕಳೆದ 12 ವರ್ಷಗಳಿಂದ ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ಅಂತಸ್ಥವಾಗಿರುವ ಕಲಾವಿದನನ್ನು ಪ್ರಚೋದಿಸಿ ಹೊರ ಹೊಮ್ಮಿಸುವ ಹಾಗೂ ಕಲೆಗೆ ಒತ್ತು ಕೊಡುವ ದಿಸೆಯಲ್ಲಿ ಉತ್ತರಹಳ್ಳಿ ಸಮೀಪದ ಚಿಕ್ಕಲ್ಲಸಂದ್ರದ ಕೆ.ಎಸ್.ಆರ್.ಟಿ.ಸಿ.ಲೇಔಟ್ ಶ್ರೀ ಸಿದ್ಧಿ ಗಣಪತಿ ದೇವಾಲಯದ ಮನೋರಂಜಿನಿ ಸಭಾಂಗಣದಲ್ಲಿ ನಡೆಸಿಕೊಂಡು ಬರುತ್ತಿರುವ “ಕಲಾವಿಕಸನ ಶಿಬಿರ” ನಿನ್ನೆ ಸಮಾರೋಪಗೊಂಡಿತು.


ಕೇವಲ ಒಂದೋ ಎರಡೋ ಚಟುವಟಿಕೆಗಳಿಗೆ ಸೀಮಿತ ಗೊಂಡಿರದೆ ಯಕ್ಷಗಾನ, ನಾಟಕ, ಜಾನಪದ, ಹಾಡು ನೃತ್ಯ, ಕರಾಟೆ, ಯೋಗ ಚಿತ್ರಕಲೆ, ಮಣ್ಣಿನ ಕರಕುಶಲತೆ ಹೀಗೆ ವೈವಿಧ್ಯಮಯ ರಚನಾತ್ಮಕ ವಿಷಯಗಳಿಗೆ ಮಕ್ಕಳಲ್ಲಿ ಮುಖಾಮುಖಿಯಾಗಿಸುವ ರೀತಿಯಲ್ಲಿ ಪ್ರತೀ ಭಾರಿಯೂ ನಾವು ಶಿಬಿರವನ್ನು ವಿನ್ಯಾಸ ಮಾಡುತ್ತಿರುವುದಾಗಿ ಯಕ್ಷಗಾನ ನಿರ್ದೇಶಕರು ಹಾಗೂ ಕಲಾಕದಂಬದ ನಿರ್ದೇಶಕರಾದ ಡಾ. ರಾಧಾಕೃಷ್ಣ ಉರಾಳ ತಿಳಿಸಿದರು.


ಶಿಬಿರ ನಿರ್ದೇಶಕರಾದ ಮುರಳೀಧರ ನಾವಡರ ಅವರಿಂದ ಕಲಿತ ಹಾಡು, ಕೇವಲ ಮೂರೇ ವಾರಗಳಲ್ಲಿ ಕಲಿತ ಗಣೇಶ ಜನ್ಮಯಕ್ಷಗಾನ (ಸಹ ನಿರ್ದೇಶನ: ಅದಿತಿ ಉರಾಳ, ನಿತ್ಯ ಗೌಡ), ಕಿಂದರಿ ಜೋಗಿನಾಟಕ, ಪಲ್ಲವಿ, ರಮೇಶ್ ಅವರಿಂದ ಕಲಿತ ನೃತ್ಯ, ಸುರೇಶ್‌ರ ಮಾರ್ಗದರ್ಶನ ಕರಾಟೆ, ಭಕ್ತಿಗೀತೆ, ಭಾವಗೀತೆ, ದೇಶಭಕ್ತಿ ಗೀತೆ, ವಚನಗಳ ಗಾಯನ, ಕರಾಟೆ, ಚಿತ್ರಕಲೆ, ಹೀಗೆ ವೈವಿಧ್ಯಮಯವಾದ ಸುಮಾರು 150 ನಿಮಿಷಗಳ ಪ್ರದರ್ಶನವನ್ನು ಮಕ್ಕಳು ನೀಡಿದರು.

ವಿಶ್ವನಾಥ ಉರಾಳ, ಪೂಜಾ ಆಚಾರ್ಯ, ಗುರುರಾಜ್, ರಮೇಶ್, ಸೃಜನ, ಡಿಪಿನ್, ಜ್ಞಾನೇಂದ್ರ, ತೇಜಸ್, ರಜತ್, ಪ್ರದೀಪ್ ಮೊದಲಾದವರು ನೇಪಥ್ಯ ನೆರವು ನೀಡಿದರು.


ಕೇವಲ ಬೇಸಿಗೆಯ ಶಿಬಿರವಾಗಷ್ಟೆ ಉಳಿಯದೆ ಈ ಕಲೆಯ ನಿರಂತರ ಕಲಿಯುವಿಕೆಗೆ ವಾರಾಂತ್ಯದ ತರಗತಿಗಳನ್ನು ಸಂಸ್ಥೆಯು ಮಾಡಿಕೊಂಡು ಬರುತ್ತಿರುವುದು ಮಕ್ಕಳ ಕಲಾ ಕಲಿಕೆಯ ನಿರಂತರತೆಗೆ ಒಂದು ಅವಕಾಶ ಒದಗಿಸಿದಂತಾಗಿದೆ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕಲಾಕದಂಬ ಅರ್ಟ್ ಸೆಂಟರ್, 9448510582 ,9886066732,8310482075

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments