Sunday, September 29, 2024
Homeಸುದ್ದಿಸಿರಿಬಾಗಿಲು ಸಾಂಸ್ಕೃತಿಕ ಭವನ ಒಂದು ಅಪೂರ್ವ ಸಾಧನೆ - ಕೆ ಸದಾಶಿವ ಶೆಟ್ಟಿ

ಸಿರಿಬಾಗಿಲು ಸಾಂಸ್ಕೃತಿಕ ಭವನ ಒಂದು ಅಪೂರ್ವ ಸಾಧನೆ – ಕೆ ಸದಾಶಿವ ಶೆಟ್ಟಿ

ಕಾಸರಗೋಡು. ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ದ ಸಾಂಸ್ಕೃತಿಕ ಭವನಕ್ಕೆಇತ್ತೀಚೆಗೆ ಭೇಟಿಯಿತ್ತ  ಕೊಂಡೆವೂರು ಶ್ರೀಗಳು ಹರಸಿ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಗಮಿಸಿದ್ದ ಕೊಡುಗೈದಾನಿ  ಸದಾಶಿವ ಶಟ್ಟಿ ಮುಂಬೈ ಇವರು ಮಾತನಾಡಿ ಅಲ್ಪ ಆದಾಯ ಇರುವ ಕಲಾವಿದರು ಕಲೆಯ ಮೇಲಿನ ಪ್ರೀತಿಯಿಂದ ಇಂತಹ ಸಾಧನೆಗೆ ಮುಂದಾದುದು ಅಪೂರ್ವ ಎಂದು ಸಂತೋಷ ವ್ಯಕ್ತಪಡಿಸಿದರು.

ಯಕ್ಷಗಾನ ಮ್ಯೂಸಿಯಂ ಮತ್ತು ಗ್ರಂಥಾಲಯ ನಿರ್ಮಾಣ ಕಾರ್ಯವನ್ನು ವೀಕ್ಷಸಿ ಶ್ಲಾಘಿಸಿದರು. ಈ ಕಾರ್ಯಕ್ರಮಕ್ಕೆ  ರಾಜಾರಾಮರಾವ್ ಮೀಯಪದವು ಸ್ವಾಗತಿಸಿ  ಸಿರಿಬಾಗಿಲು ರಾಮಕೃಷ್ಣ ಮಯ್ಯರು ಗೌರವಿಸಿ ವಂದಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆ ಯ ಕೋಶಾಧಿಕಾರಿ ಶ್ರೀ ಲಕ್ಮೀನಾರಯಣ ಪಟ್ಟೇರಿ, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಜಗದೀಶ್ ಕೂಡ್ಲು, ಶ್ರೀಮತಿ ಸುಮಿತ್ರಾ ಆರ್ ಮಯ್ಯ,  ಶ್ರೀಮತಿ ಅಮಿತಾ ಶೆಟ್ಟಿ, ಜಯರಾಮ ರೈ, ರವೀಂದ್ರ ರೈ, ಶೀನ ಶೆಟ್ಟಿ ಕಜೆ, ಯೋಗಾಚಾರ್ಯ ಪುಂಡರೀಕಾಕ್ಷ ಆಚಾರ್ಯ, ವಿಷ್ಣು ಶ್ಯಾನುಭೋಗ್, ಮುಂತಾದವರು, ಊರಿನ ಗಣ್ಯರು, ಪ್ರತಿಷ್ಠಾನದ ಸದಸ್ಯರು  ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments