
ಇಂದು ಅಪರಾಹ್ನ 1.30 ಘಂಟೆಗೆ ಪುತ್ತೂರಿನ ಕಲ್ಲೇಗದ ಭಾರತ್ ಮಾತಾ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಹಿರಿಯರ ಪ್ರತಿಷ್ಠಾನದ ಪುತ್ತೂರು ಘಟಕದ ಪದಗ್ರಹಣ ಸಮಾರಂಭದ ಪ್ರಯುಕ್ತ ಕೀರ್ತಿಶೇಷ ಬ್ರಹ್ಮೈಕ್ಯ ಶ್ರೀ ಶ್ರೀ ಎಡನೀರು ಕೇಶವಾನಂದ ಸ್ವಾಮೀಜಿಯವರ ಸಂಸ್ಮರಣೆ ನಡೆಯಲಿದೆ.
ಬಳಿಕ ನುರಿತ ಕಲಾವಿದರ ಕೂಡುವಿಕೆಯಿಂದ ‘ಸುಭದ್ರಾ ಕಲ್ಯಾಣ ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಮೇಲಿನ ಚಿತ್ರ ಚಿತ್ರವನ್ನು ನೋಡಿ.

