Friday, September 20, 2024
Homeಸುದ್ದಿಕಾಂತಾರ ಕಮಲಕ್ಕ ಖ್ಯಾತಿಯ ವಿದುಷಿ ಶ್ರೀಮತಿ ಮಾನಸಿ ಸುಧೀರ್ ಅವರ ನೃತ್ಯ ವೈಭವ

ಕಾಂತಾರ ಕಮಲಕ್ಕ ಖ್ಯಾತಿಯ ವಿದುಷಿ ಶ್ರೀಮತಿ ಮಾನಸಿ ಸುಧೀರ್ ಅವರ ನೃತ್ಯ ವೈಭವ

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ದಿನಾಂಕ 13-11-2022ರಂದು ನೃತ್ಯನಿಕೇತನ ಕೊಡವೂರು ಉಡುಪಿ ಕಲಾವಿದರಿಂದ ‘ನೃತ್ಯ ಸಿಂಚನ’ ಕಾರ್ಯಕ್ರಮ ಜರಗಿತು.

ವಿದ್ವಾನ್ ಶ್ರೀ ಸುಧೀರ್ ರಾವ್ ಕೊಡವೂರು ಮತ್ತು ಕಾಂತಾರ ಕಮಲಕ್ಕ ಖ್ಯಾತಿಯ ವಿದುಷಿ ಶ್ರೀಮತಿ ಮಾನಸಿ ಸುಧೀರ್ ಅವರ ನಿರ್ದೇಶನದಲ್ಲಿ ನಡೆದ ಈ ನೃತ್ಯ ವೈಭವವನ್ನು ವಿಶ್ವವಿನೋದ ಬನಾರಿಯವರ 75ನೇ ಅಭಿನಂದನಾ ಸಮಾರಂಭದ ಪ್ರಯುಕ್ತ ಹಮ್ಮಿಕೊಳ್ಳಲಾಗಿತ್ತು.

ಬಹಳ ಅದ್ಭುತವಾಗಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಕು.ಸಂಜನಾ ಶ್ರೀ, ವಿದುಷಿ ಸಾಧನಾ ಕಾಮತ್, ವಿದುಷಿ ಚೈತನ್ಯ ಆಚಾರ್ಯ, ವಿದುಷಿ ಅನಘ ಶ್ರೀ, ಕು. ಪ್ರಿಯಂವದಾ, ಕು.ಕೀರ್ತನಾ, ಕು. ಸೌಂದರ್ಯ, ಕು. ಪೃಥ್ವಿ, ಕು. ಬಿಂದಿಯ, ಕು. ವರ್ಷಿಣಿ, ಕು. ಮಹಿಮ, ಕು. ಅನಘ, ಕು. ಅರ್ಪಿತ, ಕು.ಶ್ರೇಯಾ, ಕು.ಪ್ರಜ್ಞಾ, ಕು.ಚೈತ್ರ ಶೆಣೈ, ಕು. ವರ್ಷಾ, ಕು.ಸುರಭಿ ಸುಧೀರ್ ಹಾಗೂ ಮಾನಸಿ ಸುಧೀರ್ ಅವರು ಭಾಗವಹಿಸಿದರು. ಶ್ರೀ ಸುಧೀರ್ ರಾವ್ ಕಾರ್ಯಕ್ರಮ ನಿರೂಪಿಸಿದರು.

ಭಾಗವಹಿಸಿದ ಕಲಾವಿದೆಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಉತ್ತಮವಾದ ಪ್ರಸಾಧನವನ್ನೊದಗಿಸಿದ ಪ್ರಕಾಶ್ ಕುಂಜೆತೊಟ್ಟು ಇವರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾಂತಾರ ಖ್ಯಾತಿಯ ಮಾನಸಿ ಸುಧೀರ್ ದಂಪತಿಗಳನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments