Saturday, September 21, 2024
Homeಯಕ್ಷಗಾನದಶಂಬರ 11, ಭಾನುವಾರದಂದು ಉಪ್ಪಿನಂಗಡಿ ಸಮೀಪದ 'ಸುಧಾಮ'ದಲ್ಲಿ ಹೇಮಂತ ಹಬ್ಬ - ತಾಳಮದ್ದಳೆ, ಯಕ್ಷಗಾನ ಬಯಲಾಟ

ದಶಂಬರ 11, ಭಾನುವಾರದಂದು ಉಪ್ಪಿನಂಗಡಿ ಸಮೀಪದ ‘ಸುಧಾಮ’ದಲ್ಲಿ ಹೇಮಂತ ಹಬ್ಬ – ತಾಳಮದ್ದಳೆ, ಯಕ್ಷಗಾನ ಬಯಲಾಟ

ನಾಡಿದ್ದು ದಶಂಬರ 11,ಭಾನುವಾರದಂದು  ಉಪ್ಪಿನಂಗಡಿ ಸಮೀಪದ ಡಾ.ತಾಳ್ತಜೆ ವಸಂತಕುಮಾರ ಅವರ ಮನೆ ಸುಧಾಮದಲ್ಲಿ ವಸುಧಾ ಪ್ರತಿಷ್ಟಾನದ ವತಿಯಿಂದ ನಡೆಸಲ್ಪಡುವ ಹೇಮಂತ ಹಬ್ಬ ನಡೆಯಲಿದೆ.

ಡಾ.ವಿವೇಕ ರೈಗಳವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆ,ಮಹಿಳಾ ತಾಳಮದ್ದಳೆ, ಯಕ್ಷಗಾನ ಬಯಲಾಟ ಹೀಗೆ ಆ ದಿನ ಅಪರಾಹ್ನದಿಂದ ರಾತ್ರಿ 9 ಗಂಟೆ ತನಕ ವಿವಿಧ ಕಾರ್ಯಕ್ರಮಗಳು ಉಪಾಹಾರ, ಭೋಜನದ ಜೊತೆಜೊತೆಯಲ್ಲಿ ಸಂಪನ್ನಗೊಳ್ಳಲಿವೆ.

ಆ ದಿನವನ್ನು ಹೇಮಂತ ಹಬ್ಬಕ್ಕಾಗಿ ಮೀಸಲಿಡಿ. ಎಲ್ಲಾ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳಿಗೆ ಆದರದ ಸ್ವಾಗತವನ್ನು ವಸುಧಾ ಪ್ರತಿಷ್ಟಾನದ ಕಾರ್ಯದರ್ಶಿ ಡಾ.ಗೋವಿಂದ ಪ್ರಸಾದ ಕಜೆಯವರು ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments