Friday, September 20, 2024
Homeಸುದ್ದಿ'ಭಾರತದ ಅತ್ಯಂತ ಕಿರಿಯ ಭ್ರಷ್ಟ ಮಹಿಳೆ': ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ವಿರುದ್ಧ ವ್ಯಾಪಕ ಟೀಕೆ...

‘ಭಾರತದ ಅತ್ಯಂತ ಕಿರಿಯ ಭ್ರಷ್ಟ ಮಹಿಳೆ’: ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ವಿರುದ್ಧ ವ್ಯಾಪಕ ಟೀಕೆ – ನಗರಪಾಲಿಕೆಯಲ್ಲಿ ಖಾಲಿ ಇರುವ 295 ತಾತ್ಕಾಲಿಕ ಹುದ್ದೆಗಳಿಗೆ ಸಿಪಿಎಂ ಪಕ್ಷದ ಕಾರ್ಯಕರ್ತರ ಪಟ್ಟಿ ನೀಡುವಂತೆ ಕೋರಿದ ಮೇಯರ್! “ಆ ಪತ್ರವನ್ನು ಮೇಯರ್ ಅಥವಾ ಕಚೇರಿಯಿಂದ ನೀಡಲಾಗಿಲ್ಲ; ಸುಳ್ಳು ಪ್ರಚಾರದ ವಿರುದ್ಧ ಕಾನೂನು ಕ್ರಮ” – ತಿರುವನಂತಪುರಂ ಕಾರ್ಪೊರೇಷನ್

‘ಭಾರತದ ಅತ್ಯಂತ ಕಿರಿಯ ಭ್ರಷ್ಟ ಮಹಿಳೆ’ ಎಂದು ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ವಿರುದ್ಧ ವ್ಯಾಪಕ ಟೀಕೆ  ವ್ಯಕ್ತವಾಗಿದೆ.  ತಿರುವನಂತಪುರಂ ನಗರಪಾಲಿಕೆಯಲ್ಲಿ ತಾತ್ಕಾಲಿಕ ಖಾಲಿ ಹುದ್ದೆಗಳಿಗೆ ಸಿಪಿಎಂ ಕಾರ್ಯಕರ್ತರ ಪಟ್ಟಿ ಕೋರಿ ಮೇಯರ್ ಆರ್ಯ ರಾಜೇಂದ್ರನ್ ಪತ್ರ ಬರೆದಿದ್ದಾರೆ.

ತಿರುವನಂತಪುರಂ: ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 295 ತಾತ್ಕಾಲಿಕ ಹುದ್ದೆಗಳಿಗೆ ಸಿಪಿಎಂ ಕಾರ್ಯಕರ್ತರ ಪಟ್ಟಿ ನೀಡುವಂತೆ ಕೋರಿ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅನವೂರ್ ನಾಗಪ್ಪನ್ ಅವರಿಗೆ ಬರೆದಿರುವ ಪತ್ರ ಹೊರಬಿದ್ದಿದೆ.

ಮೇಯರ್ ಅಧಿಕೃತ ಲೆಟರ್ ಪ್ಯಾಡ್‌ನಲ್ಲಿ ನವೆಂಬರ್ 1 ರಂದು ಕಳುಹಿಸಲಾದ ಪತ್ರವು ಪಕ್ಷದ ಕೆಲವು ಮುಖಂಡರ ವಾಟ್ಸಾಪ್ ಗ್ರೂಪ್ ಮೂಲಕ ಸಾರ್ವಜನಿಕವಾಗಿದೆ. ಪತ್ರದಲ್ಲಿ ಜಿಲ್ಲಾ ಕಾರ್ಯದರ್ಶಿಯನ್ನು ‘ಕಾಮ್ರೇಡ್’ ಎಂದು ಸಂಬೋಧಿಸಿದ್ದಾರೆ.

ಸಿಪಿಎಂ ಜಿಲ್ಲಾ ಸಮಿತಿ ಕಚೇರಿಯಿಂದ ಖಾಲಿ ಇರುವ ಹುದ್ದೆಗಳಿಗೆ ಆದ್ಯತೆಯ ಪಟ್ಟಿಯನ್ನು ನೀಡಬೇಕು ಎಂದೂ ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಪತ್ರ ಬಂದಿಲ್ಲ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಿವರಿಸಿದರು.

ಮೇಯರ್ ಸಹಿ ಮಾಡಿರುವ ಪತ್ರದಲ್ಲಿ ಗಡುವು ಸೇರಿದಂತೆ ಮಾಹಿತಿ ಇದೆ. ಮೇಯರ್ ಪ್ರಮಾಣವಚನ ಉಲ್ಲಂಘಿಸಿದ್ದಾರೆ ಎಂಬ ಆರೋಪವನ್ನು ಪ್ರತಿಪಕ್ಷಗಳು ಎತ್ತುತ್ತಿವೆ.

ಪಾಲಿಕೆ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 295 ಮಂದಿಗೆ ದಿನಗೂಲಿಯಲ್ಲಿ ಉದ್ಯೋಗ ಕಲ್ಪಿಸಲಾಗುವುದು.

ಮೇಯರ್ ಆರ್ಯ ರಾಜೇಂದ್ರನ್ ವಿರುದ್ಧದ ನೇಮಕಾತಿ ವಿವಾದಕ್ಕೆ ಸಂಬಂಧಿಸಿದಂತೆ ತಿರುವನಂತಪುರಂ ಕಾರ್ಪೊರೇಷನ್ ವಿವರಣೆಯನ್ನು ನೀಡಿದೆ. ಆ ಪತ್ರವನ್ನು ಮೇಯರ್ ಅಥವಾ ಕಚೇರಿಯಿಂದ ನೀಡಲಾಗಿಲ್ಲ; ಸುಳ್ಳು ಪ್ರಚಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿರುವನಂತಪುರಂ ಕಾರ್ಪೊರೇಷನ್ ಹೇಳಿದೆ.

ಮೇಯರ್ ಆಗಲಿ ಅಥವಾ ಅವರ ಕಚೇರಿಯಾಗಲಿ ಅಂತಹ ಪತ್ರವನ್ನು ಕಳುಹಿಸಿಲ್ಲ ಎಂದು ಪಾಲಿಕೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸುಳ್ಳು ಪ್ರಚಾರದ ವಿರುದ್ಧ ಕಾನೂನು ಕ್ರಮ ಜರುಗಿಸಲು ಪಾಲಿಕೆ ಹಾಗೂ ಆಡಳಿತ ಮಂಡಳಿ ಮುಂದಾಗಿದೆ ಎಂದೂ ಹೇಳಿದೆ.

ಆದರೆ ಶಾಸಕರೊಬ್ಬರು ಅದನ್ನು ಸಮರ್ಥಿಸಿಕೊಂಡಿದ್ದಾರೆ. ‘ನಗರಸಭೆಯಲ್ಲಿ ಖಾಲಿ ಇರುವ ಸ್ಥಾನಗಳ ಬಗ್ಗೆ ಪಕ್ಷಕ್ಕೆ ಮಾಹಿತಿ ನೀಡುವುದು ತಪ್ಪಲ್ಲ, ನಾಯಕತ್ವದ ಪತ್ರದ ಆಧಾರದ ಮೇಲೆ ನೇಮಕಾತಿ ನಡೆವುದಿಲ್ಲ” ಎಂದು ಶಾಸಕ ವಿ.ಕೆ.ಪ್ರಶಾಂತ್ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments