Friday, September 20, 2024
Homeಸುದ್ದಿ'ನಿನ್ನ ತಲೆಗೆ ಕೆಮಿಕಲ್ ಹಾಕಬೇಕಾ?' ಛಠ್ ಪೂಜೆ ಆಚರಣೆಗೂ ಮುನ್ನ ಯಮುನಾ ನದಿಗೆ ರಾಸಾಯನಿಕ ಸಿಂಪಡಿಸಿ...

‘ನಿನ್ನ ತಲೆಗೆ ಕೆಮಿಕಲ್ ಹಾಕಬೇಕಾ?’ ಛಠ್ ಪೂಜೆ ಆಚರಣೆಗೂ ಮುನ್ನ ಯಮುನಾ ನದಿಗೆ ರಾಸಾಯನಿಕ ಸಿಂಪಡಿಸಿ ಘಾಟ್ ಸ್ವಚ್ಛಗೊಳಿಸುತ್ತಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದ ಬಿಜೆಪಿ ಸಂಸದ

ಛತ್ ಪೂಜೆಗೂ ಮುನ್ನ ಯಮುನಾ ನದಿಗೆ ರಾಸಾಯನಿಕ ಸಿಂಪಡಿಸಿದರೆ ಪೂಜೆಗೂ ಮುನ್ನ ನದಿಯಲ್ಲಿ ಸ್ನಾನ ಮಾಡುವ ಭಕ್ತ ಜನರ ಆರೋಗ್ಯಕ್ಕೆ ಹಾನಿಯಾಗುವುದನ್ನು ಅರಿತ ಬಿಜೆಪಿ ಸಂಸತ್ ಸದಸ್ಯರು ನದಿ ನೀರಿಗೆ ಕೆಮಿಕಲ್ ಹಾಕುತ್ತಿದ್ದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

ತೇರೆ ಸರ್ ಪೇ ದಾಲ್ ಡೂನ್ ಕೆಮಿಕಲ್?’:(‘ನಿನ್ನ ತಲೆಗೆ ಕೆಮಿಕಲ್ ಹಾಕಬೇಕಾ?’ ) ಎಂದು ಯಮುನಾ ಘಾಟ್ ಸ್ವಚ್ಛಗೊಳಿಸುತ್ತಿದ್ದ ಅಧಿಕಾರಿಗಳನ್ನು ಬಿಜೆಪಿ ಸಂಸತ್ ಸದಸ್ಯರು ಪ್ರಶ್ನಿಸಿದ್ದಾರೆ. ಛಠ್ ಪೂಜೆ ಆಚರಣೆಗೂ ಮುನ್ನ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು ಯಮುನಾ ಘಾಟ್‌ಗಳನ್ನು ಸ್ವಚ್ಛಗೊಳಿಸುವ ಕುರಿತು ಜಲ ಮಂಡಳಿ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿದರು.

ಛತ್ ಪೂಜೆಗೂ ಮುನ್ನ ಯಮುನಾ ನದಿಗೆ ರಾಸಾಯನಿಕ ಸಿಂಪಡಿಸುತ್ತಿದ್ದ ದೆಹಲಿ ಜಲ ಮಂಡಳಿ (ಡಿಜೆಬಿ) ಅಧಿಕಾರಿಗಳೊಂದಿಗೆ ಬಿಜೆಪಿ ಸಂಸದ ಪರ್ವೇಶ್ ವರ್ಮಾ ವಾಗ್ವಾದ ನಡೆಸಿದರು. ವೀಡಿಯೊವೊಂದರಲ್ಲಿ, ಪಶ್ಚಿಮ ದೆಹಲಿಯ ಸಂಸದರು ಜಲ ಮಂಡಳಿಯ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದು, “ನದಿಯಲ್ಲಿ ನೀವು ಮೊದಲು ಸ್ನಾನ ಮಾಡಿ” ಎಂದು ಕೇಳುತ್ತಿದ್ದಾರೆ.

ನದಿಯನ್ನು ಸ್ವಚ್ಛಗೊಳಿಸಲು ಅಧಿಕಾರಿಗಳು ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದರು. ಯಮುನಾ ಘಾಟ್ ಬಳಿಯಿರುವ ರಾಸಾಯನಿಕಗಳ ಬ್ಯಾರೆಲ್‌ಗಳತ್ತ ಬೊಟ್ಟು ಮಾಡಿ ಬಿಜೆಪಿ ನಾಯಕ ಹೀಗೆ ಹೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ,

“ಎಂಟು ವರ್ಷಗಳ ನಂತರ, ಅದು (ರಾಸಾಯನಿಕ) ಅನುಮೋದನೆ ಪಡೆದಿರುವುದು ನಿಮಗೆ ಈಗ ನೆನಪಿದೆಯೇ? ಯಹಾನ್ ಲೋಗೋನ್ ಕೋ ಮಾರ್ ರಹೇ ಹೋ ತುಮ್, ಆತ್ ಸಾಲ್ ಮೇ ತುಮ್ ಇಸ್ಕೋ ಸಾಫ್ ನಹಿಂ ಕರ್ ಪಾಯೆ (ನೀವು ಇಲ್ಲಿ ಜನರನ್ನು ಕೊಲ್ಲುತ್ತಿದ್ದೀರಿ, ಎಂಟು ವರ್ಷಗಳಿಂದ ನದಿಯನ್ನು ಸ್ವಚ್ಛಗೊಳಿಸಲು ನಿಮಗೆ ಸಾಧ್ಯವಾಗಲಿಲ್ಲ)” ಪರ್ವೇಶ್ ವರ್ಮಾ ಅವರು ಅಧಿಕಾರಿಗಳಿಗೆ “ಪೆಹ್ಲೆ ತು ಇಸ್ಮೇನ್ ದುಬ್ಕಿ ಲಗಾ (ಮೊದಲು ನೀವು ಈಗ ಅದರಲ್ಲಿ ಸ್ನಾನ ಮಾಡಿ)” ಎಂದು ಹೇಳುವುದನ್ನು ಕೇಳಬಹುದು.

ಜಲ ಮಂಡಳಿಯ ಅಧಿಕಾರಿಯು ರಾಸಾಯನಿಕವನ್ನು US FDA ಅನುಮೋದಿಸಿದೆ ಎಂದು ವಿವರಿಸಲು ಪ್ರಯತ್ನಿಸಿದರು ಮತ್ತು ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಸಹ ಅನುಮೋದಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದರು, “ನೀರಿಗೆ ಕೆಮಿಕಲ್ ಸ್ಪ್ರೇ ಮಾಡ್ತೀರಿ, ಜನ ಅದೇ ನೀರಲ್ಲಿ ಸ್ನಾನ ಮಾಡುತ್ತಾರೆ. ನಾನು ಇದನ್ನು ನಿನ್ನ ತಲೆ ಮೇಲೆ ಸುರಿದುಕೊಳ್ಳಬೇಕಾ? ನಿನಗೆ ನಾಚಿಕೆ ಇಲ್ಲವೇ?” ನಾಳೆ ನೀರಿನಲ್ಲಿ ಸ್ನಾನ ಮಾಡಲು ಜನರು ಬರುತ್ತಾರೆ, ನೀವು ಮೊದಲು ಸ್ನಾನ ಮಾಡಿ.

ಎಂಟು ವರ್ಷಗಳಲ್ಲಿ ನೀವು ಇದನ್ನು ಯೋಚಿಸಲಿಲ್ಲ, ಮತ್ತು ಈಗ ಛಾತ್ ಆಚರಿಸಲು ಜನರು ಬರುತ್ತಿರುವಾಗ, ನೀವು ಇಲ್ಲಿ ಕೆಮಿಕಲ್ ಹಾಕುವ ಕೆಲಸ ಮಾಡುತ್ತಿದ್ದೀರಿ – ನಿಮಗೆ ನಾಚಿಕೆಯಿಲ್ಲವೇ, ನಾಳೆ ಛತ್ ಸಂದರ್ಭದಲ್ಲಿ ಈ ನೀರಿನಲ್ಲಿ ಜನರು ಹೇಗೆ ಸ್ನಾನ ಮಾಡಬೇಕು?” ಎಂದು ಪರ್ವೇಶ್ ವರ್ಮಾ ಹೇಳುತ್ತಿರುವುದು ಕೇಳಿಬರುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments