Friday, September 20, 2024
Homeಸುದ್ದಿಪೂವರಿ ಸಂಪಾದಕ ವಿಕುಭ ಹೆಬ್ಬಾರಬೈಲಿಗೆ ತುಳು ಅಕಾಡೆಮಿ‘ಸಿರಿ ಚಾವಡಿ ಮಾಧ್ಯಮ ಪುರಸ್ಕಾರ’

ಪೂವರಿ ಸಂಪಾದಕ ವಿಕುಭ ಹೆಬ್ಬಾರಬೈಲಿಗೆ ತುಳು ಅಕಾಡೆಮಿ
‘ಸಿರಿ ಚಾವಡಿ ಮಾಧ್ಯಮ ಪುರಸ್ಕಾರ’

ಪುತ್ತೂರು : ಸುಮಾರು 30 ವರ್ಷಗಳಿಂದ ವಿವಿಧ ತುಳು-ಕನ್ನಡ ಪತ್ರಿಕೆಗಳಲ್ಲಿ ದುಡಿದಿದ್ದ, ಪತ್ರಕರ್ತ, ಕವಿ, ಸಂಘಟಕರಾಗಿ ಗುರುತಿಸಿಕೊಂಡಿದ್ದ, ತುಳುನಾಡಿನ ಏಕೈಕ ತುಳು ಮಾಸಿಕ ಪತ್ರಿಕೆ ‘ಪೂವರಿ’ ಸಂಪಾದಕ, ಪ್ರಕಾಶಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಇವರು ಪತ್ರಿಕಾ ಕ್ಷೇತ್ರದಲ್ಲಿ ಸಲ್ಲಿಸಿದ ವಿಶೇಷ ಸಾಧನೆಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ‘ಸಿರಿ ಚಾವಡಿ ಮಾಧ್ಯಮ ಪುರಸ್ಕಾರ’ ನೀಡಿ ಸನ್ಮಾನಿಸಿದೆ.


ಭಾನುವಾರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯಭವನದಲ್ಲಿ ನಡೆದ ತುಳು ಅಕಾಡೆಮಿಯ ‘ತುಳು ಐಸಿರಿ-2022’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಜಯಕುಮಾರ್ ಭಂಡಾರಿಯವರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.

ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.


ಮಂಗಳೂರು ವಿ.ವಿ.ಕುಲಪುತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ರೈ ಎಸ್ಟೇಟ್ ಕೋಡಿಂಬಾಡಿ ಕೆ.ಎನ್. ಅಶೋಕ್‌ಕುಮಾರ್ ರೈ, ಬಿಎಸ್‌ಎಫ್ ನಿವೃತ್ತ ಡೆಪ್ಯೂಟಿ ಕಮಾಂಡೆಡ್ ಡಿ. ಚಂದಪ್ಪ ಮೂಲ್ಯ, ಉದ್ಯಮಿ ಪ್ರಕಾಶ್ ಬಿ., ತುಳು ಅಕಾಡೆಮಿ ಮಾಜಿ ಸದಸ್ಯ ಕುಂಬ್ರ ದುರ್ಗಾಪ್ರಸಾದ ರೈ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.

ಅಕಾಡೆಮಿ ಸದಸ್ಯೆರಾದ ಕಡಬ ದಿನೇಶ್ ರೈ, ನಾಗೇಶ್ ಕುಲಾಲ್, ರವಿ ಪಿ.ಎಂ .ಮಡಿಕೇರಿ ಉಪಸ್ಥಿತರಿದ್ದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments