Friday, September 20, 2024
HomeUncategorizedಕರಾಟೆ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ವಿದ್ಯಾರ್ಥಿಗಳು 

ಕರಾಟೆ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ ವಿದ್ಯಾರ್ಥಿಗಳು 

ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ಸಂತ ವಿಕ್ಟರ್ಬಾ ಲಿಕಾ ಪ್ರೌಢಶಾಲೆ ಪುತ್ತೂರು ಇದರ ಆಶ್ರಯದಲ್ಲಿ ಜುಲೈ 22ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಒಟ್ಟು 9 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

 14 ವಯೋಮಾನದ ಬಾಲಕರ ವಿಭಾಗದಲ್ಲಿ ಪ್ರಾಪ್ತ್ ಆರ್. ಎನ್  [30-35kg] (8ನೇ ತರಗತಿ) ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿ ವಂಶಿ ರೈ(6ನೇ ತರಗತಿ) ತೃತೀಯ ಸ್ಥಾನ,

17ರ ವಯೋಮಾನದ ಬಾಲಕರ ವಿಭಾಗದಲ್ಲಿ ಶಿವಕುಮಾರ್ [40-45kg] (10ನೇ ತರಗತಿ) ಪ್ರಥಮ,  ಪೃಥ್ವಿರಾಜ್ ಪ್ರಭು [55-60kg] (10 ನೇ ತರಗತಿ)  ಪ್ರಥಮ ಸ್ಥಾನ, ಲಿಖಿತ್ ಪಿ  [50-55kg] (10ನೇ ತರಗತಿ) ಪ್ರಥಮ ಸ್ಥಾನ, ಪ್ರಮಥ.ಎಂ ಭಟ್ [30-35kg] (9 ನೇ ತರಗತಿ) ಪ್ರಥಮ ಸ್ಥಾನ,  ಮಹಮ್ಮದ್ ರಿಹಾನ್ [65-70kg]  (9 ನೇ ತರಗತಿ) 

ಅದ್ದೈತ್ ಶರ್ಮ [45-50kg] (ಹತ್ತನೇ ತರಗತಿ) ಪ್ರಥಮ ಸ್ಥಾನ,  ವಿಶಾಲ್ ಬಿ [30-35kg] (9ನೇ ತರಗತಿ) ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿ ತೃಪ್ತಿ ಎ ಕೆ [44-48kg] (10 ನೇ ತರಗತಿ) ಪ್ರಥಮ ಸ್ಥಾನ ಗಳಿಸಿರುತ್ತಾರೆ.

ಇವರು ಆಗಸ್ಟ್ 06 ರಂದು ಬೆಳ್ತಂಗಡಿ ತಾಲೂಕಿನ ವಾಣಿ ಆಂಗ್ಲ ಮಾಧ್ಯಮ ಶಾಲೆ ಹಳೆಕೋಟೆ ಇಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments