Friday, September 20, 2024
Homeಯಕ್ಷಗಾನಕಲೋತ್ಸವ - 'ಭಾಮ ಕಲಾಪ' ಯಕ್ಷಗಾನ ಪ್ರದರ್ಶನ

ಕಲೋತ್ಸವ – ‘ಭಾಮ ಕಲಾಪ’ ಯಕ್ಷಗಾನ ಪ್ರದರ್ಶನ

ರಂಗಭೂಮಿ,ಯಕ್ಷಗಾನ ಹಾಗೂ ಚಲನ ಚಿತ್ರ ಕಲಾವಿದರು ಹಾಗೂ ಕಲಾ ಪೋಷಕರೂ ಆದ ದೇವರಾಜ ಕರಬರವರ ನಿರ್ದೇಕಶಕತ್ವದ ಕರಬ ಪ್ರತಿಷ್ಠಾನ ಸಂಸ್ಥೆಯು ತನ್ನ ವಾರ್ಷಿಕೋತ್ಸವದ ಅಂಗವಾಗಿ ಕಲೋತ್ಸವ-2022 ಶೀರ್ಷಿಕೆ ಅಡಿಯಲ್ಲಿ ಹಲವಾರು ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಆಯೋಜಿಸಿದ್ದು

ಈ ಸಲುವಾಗಿ ಇದೇ ಬರುವ ಶನಿವಾರ ದಿನಾಂಕ 06-08-2022 ರಂದು ಸಂಜೆ 5-30 ಕ್ಕೆ ಬೆಂಗಳೂರಿನ ಉಲ್ಲಾಳ ಉಪನಗರ ಸಮೀಪದ ವಿಶ್ವೇಶ್ವರಯ್ಯ ಬಡಾವಣೆಯ 4 ನೇ ಬ್ಲಾಕ್ ನಲ್ಲಿರುವ ಕಲಾಗುಡಿಯಲ್ಲಿ ಡಾ.ರಾಧಾಕೃಷ್ಣ ಉರಾಳರ ನಿರ್ದೇಕಶಕತ್ವದ ಕಲಾಕದಂಬ ಆರ್ಟ್ ಸೆಂಟರ್ ನ ಕಲಾವಿದರಿಂದ

‘ಭಾಮ ಕಲಾಪ’ ಎಂಬ ಯಕ್ಷಗಾನ ಪ್ರದರ್ಶನ ಹಮ್ಮಿ ಕೊಂಡಿದ್ದು ಈ ಒಂದು ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುತ್ತಿದೆ.


ಬೆಂಗಳೂರಿನ ರಾಮಸಂದ್ರ ಶಾಖೆಯ ಕರ್ನಾಟಕ ಬ್ಯಾಂಕ್ ನ ಮ್ಯಾನೇಜರ್ ಶ್ರೀ ರಾಘವೇಂದ್ರ ಕಾಮತ್,ಸಮಾಜ ಸೇವಕರಾದ ಶ್ರೀ ಪದ್ಮನಾಭ ಭರಣಿ ಹಾಗೂ ಮಾಜಿ ನಗರಪಾಲಿಕೆ ಸದಸ್ಯರು ಸಮಾಜ ಸೇವಕರು ಆದ ಶ್ರೀ ಮಂಜುನಾಥ ಸಿ.ಎಮ್ ಹಾಗೂ ಕರಬ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ದೇವರಾಜ ಕರಬರವರು ಮುಖ್ಯ ಅತಿಥಿಗಳಾಗಿ ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9886066732, 9448510582 ಸಂಪರ್ಕಿಸ ಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments