Friday, September 20, 2024
Homeಸುದ್ದಿಮಂಗಳೂರು ಪಬ್ ನಲ್ಲಿ ಹುಡುಗ ಹುಡುಗಿಯರ ಬಿಂದಾಸ್ ಮಸ್ತಿ ಪ್ರಕರಣ - ಅಪ್ರಾಪ್ತರಿಗೂ ಮುಕ್ತ ಪ್ರವೇಶ...

ಮಂಗಳೂರು ಪಬ್ ನಲ್ಲಿ ಹುಡುಗ ಹುಡುಗಿಯರ ಬಿಂದಾಸ್ ಮಸ್ತಿ ಪ್ರಕರಣ – ಅಪ್ರಾಪ್ತರಿಗೂ ಮುಕ್ತ ಪ್ರವೇಶ ನೀಡುತ್ತಿರುವ ಪಬ್ ಗಳು 

ಮಂಗಳೂರು ಪಬ್ ನಲ್ಲಿ ಹುಡುಗ ಹುಡುಗಿಯರ ಮೋಜು ಮಸ್ತಿ ನಡೆದ ಪ್ರಕರಣದಲ್ಲಿ ಇನ್ನೂ ಕೆಲವು  ಬರುತ್ತಿವೆ. ಆ ಪಬ್ ನಲ್ಲಿ ಅಪ್ರಾಪ್ತರಿಗೂ ಮುಕ್ತ ಪ್ರವೇಶ ನೀಡಲಾಗುತ್ತಿದೆ ಎಂಬ ಮಾಹಿತಿ ಮೂಲಗಳಿಂದ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸ್ ತನಿಖೆಯೂ ಚುರುಕುಗೊಂಡಿದೆ.

ನಿನ್ನೆ ನಡೆದ ಪ್ರಕರಣದಲ್ಲಿ 21 ವಯಸ್ಸಿನ ಒಳಗಿನ ಹುಡುಗ ಹುಡುಗಿಯರೂ ಇದ್ದರು ಎಂಬ ಮಾಹಿತಿ ಹರಿದಾಡುತ್ತಾ ಇದೆ. ನಗರದಲ್ಲಿ ಜುಲೈ 25ರ ಸೋಮವಾರ ರಾತ್ರಿ ನಡೆದ ಪಬ್ ದಾಳಿಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇನ್ನು ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಆಯುಕ್ತರು, ಬಲ್ಮಟ್ಟದಲ್ಲಿ ರೀಸೈಕಲ್ ರೆಸ್ಟೋರೆಂಟ್ ಕಮ್ ಪಬ್ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಸೋಮವಾರ ರಾತ್ರಿ 9 ಗಂಟೆಗೆ ಹಿಂದೂ ಸಂಘಟನೆಯ ಐದರಿಂದ ಆರು ಯುವಕರು ಪಬ್‌ಗೆ ಭೇಟಿ ನೀಡಿದ್ದರು. ಅವರು ಪಬ್‌ನಲ್ಲಿ ಬೌನ್ಸರ್ ದಿನೇಶ್‌ಗೆ ಪಬ್‌ನಲ್ಲಿ ಅಪ್ರಾಪ್ತ ಹುಡುಗರು ಮತ್ತು ಹುಡುಗಿಯರಿದ್ದಾರೆ ಎಂದು ಹೇಳಿದರು.

ದಿನೇಶ್ ಮ್ಯಾನೇಜರ್ ಗೆ ವಿಷಯ ತಿಳಿಸಿದ್ದು, ಮ್ಯಾನೇಜರ್ ಒಳಗೆ ಹೋಗಿ ಪರಿಶೀಲಿಸಿದ್ದಾರೆ. “ಸ್ಥಳೀಯ ಕಾಲೇಜಿನ ಕೆಲವು ವಿದ್ಯಾರ್ಥಿಗಳಿದ್ದರು. ವಿದ್ಯಾರ್ಥಿಗಳನ್ನು ಹೊರಗೆ ಹೋಗುವಂತೆ ಮ್ಯಾನೇಜರ್ ಕೇಳಿದಾಗ, ಅವರು ಪಬ್ ತೊರೆದರು. ಬೌನ್ಸರ್ ಹೇಳಿಕೆ ಪ್ರಕಾರ ಹಿಂದೂ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ. ಅವರು ಪಬ್‌ನ ಹೊರಗಿನ ಬೌನ್ಸರ್‌ನೊಂದಿಗೆ ಮಾತ್ರ ಮಾತನಾಡಿ ಹೊರಟುಹೋದರು.

“ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತೇವೆ ಮತ್ತು ಅದರ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ನಾವು ಪಬ್‌ನ ಮ್ಯಾನೇಜರ್ ಮತ್ತು ಬೌನ್ಸರ್ ಹೇಳಿಕೆಗಳನ್ನು ತೆಗೆದುಕೊಂಡಿದ್ದೇವೆ. ಹೊರಗಿನವರು ಪಬ್ ಆವರಣಕ್ಕೆ ಪ್ರವೇಶಿಸಿ ವಿಷಯಗಳನ್ನು ಪ್ರಶ್ನಿಸಲು ಅವಕಾಶವಿಲ್ಲ. ಸಂಬಂಧಪಟ್ಟ ಅಧಿಕಾರಿಯನ್ನು ಹೊರತುಪಡಿಸಿ ಯಾರಿಗೂ ಗುರುತಿನ ಚೀಟಿ ಮತ್ತು ಪರವಾನಗಿ ಕೇಳುವ ಹಕ್ಕು ಇಲ್ಲ. ಎಲ್ಲಾ ಅಂಶಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳುತ್ತೇವೆ.

“ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳ ಅಶ್ಲೀಲ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರ ಈ ಕೃತ್ಯ ನಡೆದಿದೆ. ಆದರೆ ಆ ವಿಡಿಯೋದಲ್ಲಿರುವ ವಿದ್ಯಾರ್ಥಿಗಳಿಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ.

“ಪಬ್‌ನಲ್ಲಿದ್ದ ವಿದ್ಯಾರ್ಥಿಗಳು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು. ಪಬ್‌ನ ನಿಯಮಗಳ ಪ್ರಕಾರ, 21 ವರ್ಷಕ್ಕಿಂತ ಮೇಲ್ಪಟ್ಟ ಯಾರಾದರೂ ಪ್ರವೇಶಿಸಬಹುದು. ಆದರೆ 21 ವರ್ಷಕ್ಕಿಂತ ಕೆಳಗಿನವರು ಪಬ್ ನಲ್ಲಿ ಇದ್ದ ಮಾಹಿತಿ ಇದೆ ಎಂದು ಅವರು ಹೇಳಿದರು. ಹೀಗಾಗಿ ಮಾಹಿತಿ ಸಂಗ್ರಹಿಸಿ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments