ಯಕ್ಷಸಿಂಚನ ಟ್ರಸ್ಟ್ (ರಿ), ಬೆಂಗಳೂರು ಇದರ 13ನೇ ವರುಷದ ವಾರ್ಷಿಕೋತ್ಸವದ ಅಂಗವಾಗಿ 24 ಜುಲೈ 2022 ನೇ ಭಾನುವಾರ ಮಧ್ಯಾಹ್ನ 3 ರಿಂದ ಅದ್ದೂರಿ ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವನ್ನು ಆಯೋಜಿಸಲಾಗಿದೆ.
ಮಧ್ಯಾಹ್ನ 3 ರಿಂದ ಯಕ್ಷಕಲಾ ಅಕಾಡೆಮಿ ಬೆಂಗಳೂರು ಇದರ ಬಾಲ ಕಲಾವಿದರಿಂದ ಹಲಸಿನಹಳ್ಳಿ ನರಸಿಂಹಶಾಸ್ತ್ರಿ ರಚಿತ ಮೈಂದ-ದ್ವಿವಿಧ ಕಾಳಗ ಹಾಗೂ ಸಂಜೆ 5 ರಿಂದ ಯಕ್ಷಸಿಂಚನ ತಂಡದ ಕಲಾವಿದರಿಂದ ಹೆಚ್.ಸಿ ಬಾಲಕೃಷ್ಣ ಹಿಳ್ಳೋಡಿ ರಚಿತ ನಹುಷ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ.

ಇದೇ ಸಂದರ್ಭದಲ್ಲಿ ಖ್ಯಾತ ಹಿಮ್ಮೇಳ ಕಲಾವಿದರಾದ ಕವ್ವಾಳೆ ಗಣಪತಿ ಭಾಗವತ್ ಅವರಿಗೆ ಸಾರ್ಥಕ ಸಾಧಕ-2022 ಪ್ರಶಸ್ತಿ ಪ್ರದಾನವಾಗಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಿ.ಆರ್. ಲಕ್ಷ್ಮಣರಾವ್, ಖ್ಯಾತ ಸಾಹಿತಿಗಳು, ಡಾ.ಜಿ.ಎಲ್ ಹೆಗಡೆ, ಅಧ್ಯಕ್ಷರು, ಯಕ್ಷಗಾನ ಅಕಾಡೆಮಿ, ಬೆಂಗಳೂರು, ಡಾ. ಆನಂದರಾಮ ಉಪಾಧ್ಯ, ಖ್ಯಾತ ಯಕ್ಷಗಾನ ವಿದ್ವಾಂಸರು ಹಾಗೂ ಶ್ರೀ ರಾಜಶೇಖರ ಜೋಗಿನ್ಮನೆ, ಸುದ್ದಿ ಸಂಪಾದಕರು, ವಿಜಯವಾಣಿ ಇವರುಗಳು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮವು ಉದಯಭಾನು ಕಲಾಸಂಘ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು ಇಲ್ಲಿ ಸಂಪನ್ನವಾಗುತ್ತಿದೆ.
ಹಿಮ್ಮೇಳ: ಶ್ರೀ ಎ.ಪಿ.ಪಾಟಕ್, ಶ್ರೀ ಕವ್ವಾಳೆ ಗಣಪತಿ ಭಾಗವತ್ , ಶ್ರೀ ಕೃಷ್ಣಮೂರ್ತಿ ತುಂಗ, ಶ್ರೀ ಪ್ರಸನ್ನ ಹೆಗ್ಗಾರು, ಶ್ರೀ ಚಿನ್ಮಯ್ ಅಂಬರಗೋಡ್ಲು, ಕುಮಾರಿ ಚಿತ್ಕಲಾ ತುಂಗ
ಮುಮ್ಮೇಳ: ಕುಮಾರಿ ಪಂಚಮಿ ಅಡಿಗ, ಕುಮಾರ ರಿತೇಶ್, ಕುಮಾರ ರಜತ್, ಕುಮಾರಿ ಪ್ರಣವಿ, ಕುಮಾರ ಸುಜನ್, ಕುಮಾರ ಸೃಜನ್, ಕುಮಾರ ಅಶ್ವಿನ್, ಕುಮಾರಿ ಭಾರ್ಗವಿ, ಕುಮಾರ ಸ್ಕಂದ, ಕುಮಾರಿ ಹಂಸಿನಿ, ಶ್ರೀ ಶಶಿರಾಜ ಸೋಮಯಾಜಿ, ಶ್ರೀ ಆದಿತ್ಯ ಉಡುಪ, ಶ್ರೀ ಪ್ರವೀಣ್ ಉಡುಪಿ, ಕುಮಾರಿ ಶ್ರಾವ್ಯ ಆಚಾರ್ಯ, ಶ್ರೀ ಶಶಾಂಕ್ ಕಾಶಿ, ಶ್ರೀ ರವಿ ಮಡೋಡಿ, ಶ್ರೀ ಗುರುರಾಜ್ ಭಟ್, ಶ್ರೀ ಕೃಷ್ಣ ಶಾಸ್ತ್ರಿ
ನಿರ್ದೇಶನ: ಶ್ರೀ ಕೃಷ್ಣಮೂರ್ತಿ ತುಂಗ ಸಂಪರ್ಕ: ರವಿ ಮಡೋಡಿ-9986384205, ಶಶಿರಾಜ ಸೋಮಯಾಜಿ- 9986363495
- 6th Standard, Social Science – HISTORY – Chapter 1 – INTRODUCTION TO HISTORY AND PRE-HISTORIC SOCIETY
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES