Friday, September 20, 2024
Homeಸುದ್ದಿಮನೆ-ಮನೆಗಳಲ್ಲಿ ಭಜನಾ ಸೇವೆ

ಮನೆ-ಮನೆಗಳಲ್ಲಿ ಭಜನಾ ಸೇವೆ

ಯುವವಾಹಿನಿ (ರಿ) ಬಜಪೆ ಘಟಕವು ಈ ಸಾಲಿನಲ್ಲಿ  ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ ತತ್ವವನ್ನು ಅನುಷ್ಠಾನಕ್ಕೆ ತರುವರೇ ಮನೆ-ಮನೆಗಳಲ್ಲಿ ಭಜನಾ ಸೇವೆಯನ್ನು ಆಯೋಜಿಸಲು ನಿರ್ಧರಿಸಿರುವ ಪ್ರಕಾರ, ನಮ್ಮ ಘಟಕದ ಸದಸ್ಯರಿಂದ ಪ್ರಥಮ ಭಜನಾ ಸೇವೆಯು ಘಟಕದ ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ವಿನೋದರ ಪೂಜಾರಿಯವರ ಮನೆಯಲ್ಲಿ ನೇರವೆರಿಸಲಾಯಿತು. 


ಶ್ರೀ ನಾರಾಯಣ ಪೂಜಾರಿ, ಮೊಕ್ತೇಸರರು, ಶ್ರೀ ಕ್ಷೇತ್ರ ಸುಂಕದಕಟ್ಟೆ ಇವರು ದೀಪ ಬೆಳಗಿಸುವುದರ ಮೂಲಕ ಭಜನಾ ಸೇವೆಗೆ ಚಾಲನೆ ನೀಡಿದರು. 


ಘಟಕದ ಅಧ್ಯಕ್ಷರಾದ ಶ್ರೀಮತಿ ಉಷಾ ಶಿವಾನಂದ್, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀ ನಿರಂಜನ್ ಕರ್ಕೇರ ಹಾಗೂ ಮಾಜಿ ಅಧ್ಯಕ್ಷರುಗಳ ಮತ್ತು ಸದಸ್ಯರ ಉಪಸ್ಥಿತಿಯೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ನಡೆದ ಭಜನಾ ಸೇವೆಯು ಶ್ರೀ ಗುರುವರ್ಯರಿಗೆ ಪೂಜೆಯನ್ನು ನೆರವೇರಿಸಿ ಮಂಗಳ ಹಾಡಿನೊಂದಿಗೆ ಸಂಪನ್ನಗೊಂಡಿತು. 


ಶ್ರೀಯುತ ವಿನೋದರ ಪೂಜಾರಿ ಮತ್ತು ಮನೆಯವರು ಸದಸ್ಯರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments