Friday, September 20, 2024
Homeಸುದ್ದಿಉನ್ಮಾದದಲ್ಲಿ ಮೈ ಮರೆತ ಪ್ರೇಮಿಗಳು, ಹುಡುಗನನ್ನು ತಿಂದು ಹಾಕಿದ ಹಿಂದಿನಿಂದ ಬಂದ ಹುಲಿ; ಗಾಯಗಳೊಂದಿಗೆ ಪಾರಾದ...

ಉನ್ಮಾದದಲ್ಲಿ ಮೈ ಮರೆತ ಪ್ರೇಮಿಗಳು, ಹುಡುಗನನ್ನು ತಿಂದು ಹಾಕಿದ ಹಿಂದಿನಿಂದ ಬಂದ ಹುಲಿ; ಗಾಯಗಳೊಂದಿಗೆ ಪಾರಾದ ಹುಡುಗಿ

ವ್ಯಾಡ್ಸಾ ಕಾಡಿನಲ್ಲಿ ಪ್ರೇಮಿಗಳ ಮೇಲೆ ದಾಳಿ ಮಾಡಿದ ಹುಲಿ, ಹುಡುಗನನ್ನು ಕೊಂದು, ಹುಡುಗಿಯನ್ನು ಗಾಯಗೊಳಿಸಿತು ಇಬ್ಬರು ಪ್ರೇಮಿಗಳು ಪ್ರಕೃತಿಯ ಸಹವಾಸದಲ್ಲಿ ಸ್ವಲ್ಪ ಸಮಯ ಕಳೆಯಲು ವಾಡ್ಸಾ ತಹಸಿಲ್‌ನ ಉಸೇಗಾಂವ್ ಬಳಿಯ ಕಾಡಿನಲ್ಲಿ ಏಕಾಂತ ಸ್ಥಳಕ್ಕೆ ಹೋಗಲು ಬಯಸಿದ್ದರು.

ಜೀವನ ಪೂರ್ತಿ ಸುಖವಾಗಿ ಬಾಳುತ್ತೇವೆ, ಏನಾಗಬಹುದು ಎಂದು ಒಬ್ಬರಿಗೊಬ್ಬರು ಭರವಸೆ ನೀಡುತ್ತಿದ್ದರು. ಆದರೆ ಕೆಲವೇ ಸಮಯದಲ್ಲಿ ತಮ್ಮ ಕನಸುಗಳು ಭಗ್ನವಾಗುತ್ತವೆ ಎಂದು ಅವರಿಗೆ ತಿಳಿದಿರಲಿಲ್ಲ. ಆದರೆ ಹುಲಿಯೇ ಅವರ ಕನಸುಗಳನ್ನು ಹೊಸಕಿಹಾಕಲು ಹೊಂಚುಹಾಕಿ ಕುಳಿತಿತ್ತು.

ಮಂಗಳವಾರ ಸಂಜೆ ಚೋಪ್ (ಕೋರೆಗಾಂವ್) ನಿವಾಸಿ ಅಜಿತ್ ಸೋಮೇಶ್ವರ ನಾಕಡೆ (21) ಎಂಬ ಬಾಲಕನ ಮೇಲೆ ಮೃಗವು ಹಿಂದಿನಿಂದ ನುಗ್ಗಿ ಸ್ಥಳದಲ್ಲೇ ಕೊಂದು ಹಾಕಿದೆ. ಹುಲಿ ಕೂಡ ಬಾಲಕಿಯನ್ನು ಗಂಭೀರವಾಗಿ ಗಾಯಗೊಳಿಸಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮಾಂಸಾಹಾರಿ ಹುಲಿಯು ಅಜಿತ್ ಅವರ ದೇಹವನ್ನು ಕಾಡಿನ ಕಡೆಗೆ ಸ್ವಲ್ಪ ದೂರ ಎಳೆದಿದೆ ಎಂದು ವರದಿಯಾಗಿದೆ. ಗ್ರಾಮಸ್ಥರ ಮೂಲಕ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಮತ್ತು ಜನರು ಸ್ಥಳಕ್ಕೆ ಧಾವಿಸಿದರು. ಅವರು ಸುಮಾರು ಎರಡು ಗಂಟೆಗಳ ಕಾಲ ಆ ಪ್ರದೇಶದಲ್ಲಿ ಹುಡುಕಾಡಿ  ನಂತರ ಕಾಡಿನಲ್ಲಿ ಶವವನ್ನು ಪತ್ತೆ ಮಾಡಿದರು. 
ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಪಂಚನಾಮೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಈ ಪ್ರದೇಶದಲ್ಲಿ ಹುಲಿ ಇರುವುದು ಗ್ರಾಮಸ್ಥರಿಗೆ ಗೊತ್ತಾಗಿದೆ. ಮುನ್ನೆಚ್ಚರಿಕೆ ವಹಿಸಲು ಸಹ ಬೋರ್ಡ್‌ಗಳನ್ನು ಸಹ ಪ್ರದರ್ಶಿಸಲಾಗಿದೆ 
ಆದರೆ ಅಜಿತ್ ತನ್ನ ವಾಹನವನ್ನು ನಿಲ್ಲಿಸಿ ಹುಡುಗಿಯನ್ನು ಕಾಡಿನ ಪ್ರದೇಶದಲ್ಲಿ ಕರೆದೊಯ್ದನು. ತದನಂತರ ದುರಂತ ಘಟನೆ ಸಂಭವಿಸಿದೆ. ಅರಣ್ಯ ಸಿಬ್ಬಂದಿ ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವಾಸ್ತವದ ಸಂಗತಿಯೇನೆಂದರೆ ಯುವಜನರು ತಮ್ಮ ದೈಹಿಕ ಕಾಮನೆಗಳನ್ನು ಪೂರೈಸಿಕೊಳ್ಳಲು ಕಾಡು, ಉದ್ಯಾನವನಗಳನ್ನು ಆಶ್ರಯಿಸಿಕೊಳ್ಳುವುದು ಈಗಿನ ದಿನಗಳಲ್ಲಿ ಕಂಡುಬರುತ್ತದೆ. ಆ ಕ್ಷಣದಲ್ಲಿ ಅದೊಂದು ಯೋಚನೆ ಅವರಲ್ಲಿರುವುದು ಬಿಟ್ಟರೆ ಉಳಿದ ಅಪಾಯದ ಸಂಗತಿಗಳನ್ನು ಅವರು ಗಣನೆಗೆ ತೆಗೆದುಕೊಳ್ಳುವುದಿಲ್ಲ.

ದೈಹಿಕ ಹಾಗೂ ಮನೋಕಾಮನೆಯ ಉನ್ಮಾದದಲ್ಲಿ ಬೆನ್ನ ಮೇಲಿನಿಂದ ಹಾರಿದ ಹುಲಿಯ ಬಗ್ಗೆ ಅರಿವೇ ಇರಲಿಲ್ಲ. ಇಬ್ಬರೂ ಒಟ್ಟಿಗಿದ್ದುದರಿಂದ ಯುವತಿಗೂ ಗಂಭೀರ ಗಾಯಗಳಾಗಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments