Saturday, October 5, 2024
Homeಇಂದಿನ ಕಾರ್ಯಕ್ರಮಪದಾಧಿಕಾರಿಗಳ ಆಯ್ಕೆ

ಪದಾಧಿಕಾರಿಗಳ ಆಯ್ಕೆ

48ನೇ ವರ್ಷದಲ್ಲಿ ಕಾರ್ಯಾಚರಿಸುತ್ತಿರುವ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ದಿವಾಕರ ಆಚಾರ್ಯ ಗೇರುಕಟ್ಟೆ ಆಯ್ಕೆಯಾಗಿದ್ದಾರೆ.


ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಮಂಟಪದಲ್ಲಿ ಸಂಘದ ಅಧ್ಯಕ್ಷ ಹರೀಶ್ ಆಚಾರ್ಯ ಬಾರ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಉಪಾಧ್ಯಕ್ಷರಾಗಿ ಅಂಬಾಪ್ರಸಾದ್ ಪಾತಾಳ, ಕಾರ್ಯದರ್ಶಿಯಾಗಿ ಶ್ರೀಪತಿ ಭಟ್ ಇಳಂತಿಲ ಖಜಾಂಚಿಯಾಗಿ ಹರೀಶ್ ಬಾರ್ಯ ಜೊತೆ ಕಾರ್ಯದರ್ಶಿಯಾಗಿ ಸಂಜೀವ ಮಡಂತ್ಯಾರು ಸಂಘಟನಾ ಕಾರ್ಯದರ್ಶಿಗಳಾಗಿ ಸುಬ್ರಹ್ಮಣ್ಯ ರಾವ್ ಬನ್ನೆಂಗಳ ಮತ್ತು ಪ್ರಚೇತ್ ಆಳ್ವ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉಮೇಶ ಶೆಣೈ ನಂದಾವರ, ಜಯಂತ ಪುರೊಳಿ, ಗೋಪಾಲಶೆಟ್ಟಿ ಕಳೆಂಜ , ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಗುಡ್ಡಪ್ಪ ಬಲ್ಯ, ಪದ್ಮನಾಭ ಕುಲಾಲ್ ಇಳಂತಿಲ, ಪ್ರಭಾಕರ ಆಳ್ವ, ರವೀಂದ್ರ ದರ್ಬೆ, ಗುರುಮೂರ್ತಿ ಅಮ್ಮಣ್ಣಾಯ, ಮಲ್ಲಿಗೆ ಕೃಷ್ಣ ಇದ್ದಾರೆ.

ಸದಸ್ಯತ್ವ ಅಭಿಯಾನ, ಸಂಘದ ನಿಗದಿತ ತಾಳಮದ್ದಳೆಯೊಂದಿಗೆ ಪ್ರಾಯೋಜಕರ ಮೂಲಕ ಮನೆ ಮನೆ ತಾಳಮದ್ದಳೆ ನಡೆಸುವ ಬಗ್ಗೆ ನಿರ್ಧರಿಸಲಾಯಿತು. ಸಂಘದ ಸದಸ್ಯರಿಂದ “ಪಂಚವಟಿ” ತಾಳಮದ್ದಳೆ ಜರುಗಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments